ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್ ಸೇಂಟ್ಸ್ ಚರ್ಚ್
ಬೆಂಗಳೂರು, ಏ.9: ನಮ್ಮ ಮೆಟ್ರೋ ಎರಡನೇ ಹಂತದ ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ಆಲ್ ಸೇಂಟ್ಸ್ ಚರ್ಚ್ ನಿರಾಕರಿಸಿದೆ.
ಶೂಲೆ ಸರ್ಕಲ್ನಲ್ಲಿರುವ ಚರ್ಚ್ನ ಐದು ವರ್ಷಗಳಿಗೆ ಬಳಸಿಕೊಳ್ಳುವುದಕ್ಕೆ ಚರ್ಚ್ ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಬಿಎಂಆರ್ಸಿಎಲ್ನ ಕ್ರಮದ ವಿರುದ್ಧ ಆಡಳಿತ ಮಂಡಳಿ ಆನ್ಲೈನ್ ಅಭಿಯಾನ ನಡೆಸುತ್ತಿದೆ.
ಮೆಟ್ರೋ ಹತ್ಬೇಕಾ ಹಾಗಾದರೆ ನಿಮ್ಮ ಸ್ಮಾರ್ಟ್ಕಾರ್ಡ್ನಲ್ಲಿ 50ರೂ ಇರ್ಲೇಬೇಕು
ಒಟ್ಟು 21 ಕಿ.ಮೀ ಉದ್ದದ ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ 13 ಕಿ.ಮೀ ಉದ್ದದ ಸುರಂಗ ಮಾರ್ಗದ ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಲಾಗಿದೆ.
ಇದರಲ್ಲಿ 2.7 ಕಿ.ಮೀ ಉದ್ದದ ವೆಲ್ಲಾರ ಜಂಕ್ಷನ್-ಶಿವಾಜಿನಗರ ಹಾಗೂ 2.8 ಕಿ.ಮೀ ಉದ್ದದ ಶಿವಾಜಿನಗರ-ಪಾಟರಿ ಟೌನ್ ಪ್ಯಾಕೇಜ್ನ ಕಾಮಗಾರಿ ಆರಂಭವಾಗಿದೆ. ಚರ್ಚ್ ನ ಜಾಗವನ್ನು ಐದು ವರ್ಷಕ್ಕೆ ಬಾಡಿಗೆ ಪಡೆಯಲಾಗಿದೆ.
ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ
ಅರ್ಧ ಎಕರೆಯನ್ನು ಈಗಾಗಲೇ ಕಳೆದುಕೊಂಡಿದ್ದು ಇನ್ನು ಅರ್ಧ ಎಕರೆಯನ್ನು ಬಿಟ್ಟುಬಿಡಬೇಕು ಎಂದು ಚರ್ಚ್ ಮನವಿ ಮಾಡಿಕೊಂಡಿದೆ.
ಆದರೆ ಇದಕ್ಕೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಚರ್ಚ್ 150ನೇ ವಾರ್ಷಿಕೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಆದರೆ ಮೆಟ್ರೋ ಕಾಮಗಾರಿಯಿಂದ ಇನ್ನು ಐದು ವರ್ಷಗಳ ಕಾಲ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಳ್ಳಲಿದೆ. ಬಿಎಂಆರ್ಸಿಎ್ ಅರ್ಧ ಎಕರೆ ಜಾಗವನ್ನು ಐದು ವರ್ಷಕ್ಕೆ ಗುತ್ತಿಗೆ ಪಡೆಯಲಿದೆ.