ಮದುವೆ ಮಂಟಪದಿಂದ ಸಾಫ್ಟ್ ವೇರ್ ವರ ಎಸ್ಕೇಪ್!
ಬೆಂಗಳೂರು, ಡಿ. 4: ಮದುವೆಗೆ ಸಕಲ ಸಿದ್ಧತೆ ನಡೆದಿತ್ತು. ವಧು-ವರ, ಬಂಧು ಬಳಗ ಎಲ್ಲರೂ ಸಂಭ್ರಮದಲ್ಲೇ ಇದ್ದರು. ಆದರೆ ಮುಹೂರ್ತದ ವೇಳೆಗೆ ವರಮಹಾಶಯ ಮದುವೆ ಮಂಟಪದಿಂದಲೇ ಓಡಿಹೋಗಿದ್ದ!
ಇಂಥ ಘಟನೆ ನಡೆದಿರುವುದು ಬೆಂಗಳೂರಿನ ರಾಜಾಜಿನಗರದ ಕದಂಬ ಹೋಟೆಲ್ ನಲ್ಲಿ. ಚೆನ್ನೈ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಭಾಸ್ಕರ್ ಮತ್ತು ಬೆಂಗಳೂರು ಇಂದಿರಾನಗರದ ವಧುಗೆ ಮದುವೆ ನಿಕ್ಕಿಯಾಗಿತ್ತು. ನಿಗದಿಯಂತೆ ಗುರುವಾರ ಮದುವೆ ನಡೆಯಬೇಕಿತ್ತು. ಆದರೆ ಗಟ್ಟಿಮೇಳದ ವೇಳೆಗೆ ವರನೇ ನಾಪತ್ತೆಯಾಗಿದ್ದಾನೆ.[ಮದುವೆಗೆ ಮುಂಚೆ ಈ ಪರೀಕ್ಷೆ ಬೇಕೋ? ಬೇಡವೋ?]
ಮೊದಲೇ ಮದುವೆಯಾಗಿದ್ದ ಭಾಸ್ಕರ್ ವಧುವಿನ ಪಾಲಕರನ್ನು ನಂಬಿಸಿ ಎರಡನೇ ಮದುವೆಯಾಗುವ ಹವಣಿಕೆಯಲ್ಲಿದ್ದ. ಆದರೆ ಅದೇನಾಯಿತೋ ಸರಿಯಾಗಿ ಮದುವೆ ವೇಳೆಗೆ ತಾಳಿ ಕಟ್ಟದೇ ಪರಾರಿಯಾಗಿದ್ದಾನೆ.
ಓಡಿಹೋದ ವರ ಭಾಸ್ಕರ್ ಮೇಲೆ ವಧುವಿನ ಪಾಲಕರು ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಆತನಿಗೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವರಮಹಾಶಯನ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.
ನಿಶ್ಚಿತಾರ್ಥವಾಗಿದ್ದ
ವರ
ಪರಾರಿ
ಮೈಸೂರಿನಲ್ಲಿ
ಮದುವೆ
ನಿಶ್ಚಯವಾಗಿದ್ದ
ವರ
ಪರಾರಿಯಾಗಿರುವುದು
ಬೆಳಕಿಗೆ
ಬಂದಿದೆ.
ಈ
ಬಗ್ಗೆ
ವರ
ನವೀನ್
ಮತ್ತು
ಆತನ
ತಾಯಿ
ಮೇಲೆ
ವಧುವಿನ
ಪಾಲಕರು
ಪ್ರಕರಣ
ದಾಖಲಿಸಿದ್ದಾರೆ.
ನಿಗದಿಯಂತೆ
ಡಿಸೆಂಬರ್
9
ರಂದು
ಮದುವೆ
ನಡೆಯುವುದಿತ್ತು.
75
ಸಾವಿರ
ರೂ.
ವರದಕ್ಷಿಣೆ
ಪಡೆದಿದ್ದ
ನವೀನ್
ಮದುವೆಗೆ
ಮುನ್ನವೇ
ನಾಪತ್ತೆಯಾಗಿದ್ದಾನೆ.