ತೈಲ ದರ ತಗ್ಗಿಸುವ ನೆಪದಲ್ಲಿ ರಾಜ್ಯಗಳಿಗೆ ಕೇಂದ್ರ ಜಿಎಸ್ಟಿ ಕುಣಿಕೆ ಹಾಕುತ್ತಿದೆ; ಎಚ್ಡಿಕೆ
ಬೆಂಗಳೂರು, ಮಾರ್ಚ್ 7: ದೇಶದಲ್ಲಿ ತೈಲ ಬೆಲೆ ನಿರಂತರ ಏರಿಕೆ ಕಾಣುತ್ತಿದ್ದು, ಕೆಲವು ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕೊಂಚ ತಗ್ಗಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಆದರೆ ತೈಲ ದರವನ್ನು ತಗ್ಗಿಸುವ ನೆಪದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿಗೆ ಸೇರಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಸಾಲು ಸಾಲು ಟ್ವೀಟ್ ಮಾಡಿರುವ ಎಚ್.ಡಿ.ಕುಮಾರ ಸ್ವಾಮಿ, "ಪೆಟ್ರೋಲಿಯಂ ಉತ್ಪನ್ನಗಳೇನಾದರೂ ಜಿಎಸ್ಟಿಗೆ ಒಳಪಟ್ಟರೆ, ರಾಜ್ಯಗಳ ಪಾಲಿಗೆ ಮರಣಶಾಸನವಾಗಲಿದೆ" ಎಂದು ಎಚ್ಚರಿಕೆ ನೀಡಿದ್ದಾರೆ. ತೈಲ ಬೆಲೆ ಇಳಿಸುವ ಕಾಳಜಿ ಕೇಂದ್ರಕ್ಕೆ ಇದ್ದಲ್ಲಿ ತಾನು ವಿಧಿಸುತ್ತಿರುವ ತೆರಿಗೆಯನ್ನು ಈ ಕೂಡಲೇ ತಗ್ಗಿಸಲಿ. ನಂತರ ರಾಜ್ಯಗಳಿಗೂ ತೆರಿಗೆ ತಗ್ಗಿಸಲು ಹೇಳಲಿ. ಅದು ಬಿಟ್ಟು ರಾಜ್ಯಗಳ ಪಾಲಿನ ಹಣಕ್ಕೂ ಕೇಂದ್ರ ಸರ್ಕಾರ ಕೈ ಇಡಬಾರದು. ರಾಜ್ಯಗಳು ಚೆನ್ನಾಗಿದ್ದರೆ, ದೇಶವೂ ಚೆನ್ನಾಗಿರುತ್ತದೆ. ರಾಜ್ಯಗಳನ್ನು ಶೋಷಿಸಿ ದೇಶ ಕಟ್ಟಲಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ. ಮುಂದೆ ಓದಿ...
ರಾಮರಾಜ್ಯ ನಿರ್ಮಿಸುತ್ತೇವೆ ಎಂದು ಹೊರಟವರ ಸರ್ಕಾರ ಇದೇನಾ?: ಎಚ್ಡಿಕೆ
"ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿಗೆ ಸೇರಿಸುವ ಹುನ್ನಾರ"
ತೈಲ ದರ ಏರಿಕೆ ವಿರುದ್ಧ ಜನರ ಆಕ್ರೋಶವನ್ನೇ ಬಳಸಿಕೊಂಡು, ಈಗ ದರ ಇಳಿಸುವ ನೆಪದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿಗೆ ಸೇರಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ನಡೆಸುತ್ತಿದೆ. ಈ ಬಗ್ಗೆ ಚರ್ಚೆಗಳನ್ನು ಹುಟ್ಟು ಹಾಕುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳೇನಾದರೂ ಜಿಎಸ್ಟಿಗೆ ಒಳಪಟ್ಟರೆ ಅದು ರಾಜ್ಯಗಳ ಪಾಲಿಗೆ ಮರಣಶಾಸನವಾಗಲಿದೆ ಎಂದು ದೂರಿದ್ದಾರೆ.
ಜಾರಕಿಹೊಳಿ ಪ್ರಕರಣ: ಎಚ್ಡಿಕೆ ಹೇಳಿದ 5 ಕೋಟಿ ಡೀಲ್ ಮತ್ತು 6 ಸಚಿವರ ಕೋರ್ಟ್ ಮೊರೆ
|
"ರಾಜ್ಯದ ಆದಾಯವನ್ನೂ ಲಪಟಾಯಿಸುವ ತಂತ್ರ"
ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್ ರಾಜ್ಯಗಳ ಪ್ರಮುಖ ಆದಾಯದ ಮೂಲಗಳಲ್ಲೊಂದು. ಕೇಂದ್ರ ಸರ್ಕಾರ ಮಿತಿ ಮೀರಿದ ತೆರಿಗೆ ವಿಧಿಸುತ್ತದೆ ಮತ್ತು ರಾಜ್ಯಗಳಿಗಿಂತಲೂ ಅಧಿಕ ಆದಾಯ ಸಂಗ್ರಹಿಸುತ್ತದೆ. ಈಗ ಅದೂ ಸಾಲದು ಎಂಬಂತೆ ಪೆಟ್ರೋಲಿಯಂ ಅನ್ನು ಜಿಎಸ್ಟಿಗೆ ತಂದು ರಾಜ್ಯಗಳು ಪಡೆಯುತ್ತಿರುವ ಆದಾಯವನ್ನೂ ಲಪಟಾಯಿಸುವ ತಂತ್ರವನ್ನು ಮಾಡುತ್ತಿದೆ ಎಂದು ದೂರಿದ್ದಾರೆ.
ರಾಜ್ಯಗಳಿಗೆ ಎಚ್ಡಿಕೆ ಎಚ್ಚರಿಕೆ
ರಾಜ್ಯಗಳು ಜಿಎಸ್ಟಿ ವ್ಯವಸ್ಥೆಗೆ ಒಪ್ಪಿಗೆ ನೀಡಿದ ನಂತರ ನೀಡಬೇಕಿದ್ದ ಪಾಲು, ಪರಿಹಾರವನ್ನು ಕೇಂದ್ರ ಈವರೆಗೆ ಸರಿಯಾಗಿ ಕೊಟ್ಟಿಲ್ಲ. ಸಾವಿರಾರು ಕೋಟಿ ಬಾಕಿಯನ್ನು ಇನ್ನೂ ಉಳಿಸಿಕೊಂಡಿದೆ. ಬಾಕಿಗಾಗಿ ರಾಜ್ಯಗಳು ಕೇಂದ್ರವನ್ನು ಬೇಡಾಡಿ ಬಸವಳಿದಿವೆ. ಈಗ ಪೆಟ್ರೋಲಿಯಂ ಆದಾಯವನ್ನು ಕೇಂದ್ರಕ್ಕೆ ಒಪ್ಪಿಸಿದರೆ ರಾಜ್ಯಗಳ ಪಾಡು ಶೋಚನೀಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
Recommended Video
"ಪ್ರತಿ ಪ್ರಜೆಯೂ ದುಷ್ಪರಿಣಾಮ ಎದುರಿಸಬೇಕಾಗುತ್ತದೆ"
ರಾಜ್ಯಗಳು
ಆದಾಯವಿಲ್ಲದೇ,
ಅಭಿವೃದ್ಧಿ
ಕಾರ್ಯಗಳಿಗೆ
ಅನುದಾನವಿಲ್ಲದೇ
ಸಂಕಷ್ಟ
ಅನುಭವಿಸಬೇಕಾಗುತ್ತದೆ.
ಕೊನೆಗೆ
ಕೊರತೆ
ಬಜೆಟ್
ಮಂಡಿಸಬೇಕಾಗುತ್ತದೆ
ಅಥವಾ
ಬಜೆಟ್
ಗಾತ್ರವನ್ನೇ
ಇಳಿಸಬೇಕಾದ
ಸಂದರ್ಭ
ಬರಲಿದೆ.
ಇದು
ಅಭಿವೃದ್ಧಿ
ವಿಚಾರದಲ್ಲಿ
ಹಿಂದಕ್ಕೆ
ಓಡಿದಂತೆ.
ಪ್ರತಿಯೊಬ್ಬ
ಪ್ರಜೆಯೂ
ಇದರ
ದುಷ್ಪರಿಣಾಮಗಳನ್ನು
ಎದುರಿಸಬೇಕಾಗುತ್ತದೆ.
ಪೆಟ್ರೋಲಿಯಂ
ಉತ್ಪನ್ನಗಳನ್ನು
ಜಿಎಸ್ಟಿ
ವ್ಯಾಪ್ತಿಗೆ
ತರುವುದಕ್ಕೆ
ಹಲವು
ರಾಜ್ಯಗಳು
ಈಗಾಗಲೇ
ವಿರೋಧ
ವ್ಯಕ್ತಪಡಿಸಿವೆ.
ರಾಜ್ಯದ
ಮುಖ್ಯಮಂತ್ರಿಗಳೂ
ಈ
ವಿಚಾರದಲ್ಲಿ
ಆಕ್ಷೇಪಣಾ
ಮನೋಭಾವ
ತಳೆಯಬೇಕು.
ರಾಜ್ಯದ
ಪ್ರಮುಖ
ನಾಯಕರು
ಈ
ವಿಚಾರವಾಗಿ
ಈಗಿನಿಂದಲೇ
ಪ್ರತಿರೋಧ
ವ್ಯಕ್ತಪಡಿಸಬೇಕು.
ಇಲ್ಲವಾದರೆ,
ಜಿಎಸ್ಟಿ
ಕುಣಿಕೆ
ನಮ್ಮನ್ನು
ಕಾಡಲಿದೆ
ಎಂದಿದ್ದಾರೆ.