ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ದಾಳಿ
ಬೆಂಗಳೂರು, ಅಕ್ಟೋಬರ್ 9: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ಬುಧವಾರ(ಅ.9)ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಜೈಲಿನಲ್ಲಿ 37 ಚಾಕುಗಳು, ಕಠಾರಿ, ಗಾಂಜಾ ಹಾಗೂ ಗಾಂಜಾ ಸೇವನೆ ಮಾಡುವ ಕೊಳವೆಗಳು, ಮೊಬೈಲ್ ಸಿಮ್ ಕಾರ್ಡ್ ಪತ್ತೆಯಾಗಿವೆ. ಅವುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿ ಸಾವಿಗೆ ಕಾರಣ ಬಹಿರಂಗ
ಜೈಲಿನಲ್ಲಿ ಕೈದಿಗಳು ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರ ಸರ್ಪಗಾವಲು ಇರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಗಾಂಜಾ ಹಾಗೂ ಮಾರಕಾಸ್ತ್ರಗಳು ಪತ್ತೆಯಾದ ಬಗ್ಗೆ ಅನುಮಾನ ಮೂಡಿದೆ.
ಏಪ್ರಿಲ್ನಲ್ಲಷ್ಟೇ ಪರಪ್ಪನ ಅಗ್ರಹಾರದ ಮೇಲೆ ದಾಳಿ ನಡೆಸಿ 6 ಕ್ಕೂ ಹೆಚ್ಚು ಮೊಬೈಲ್ಗಳು, 4 ಚಾಕುಗಳು, ಹಲವು ಪ್ಯಾಕ್ ಗಾಂಜಾ, ಹತ್ತಾರು ಸಿಮ್ ಕಾರ್ಡ್ಗಳು ಹಾಗೂ ಹಣ ದಾಳಿ ವೇಳೆ ಪತ್ತೆಯಾಗಿವೆ. ಬಂಧಿಗಳು ತಮ್ಮ ಬಟ್ಟೆಗಳ ಒಳಗೆ ಬಚ್ಚಿಟ್ಟುಕೊಂಡಿದ್ದ ಸಿಮ್ಕಾರ್ಡ್ಗಳನ್ನೂ ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿತ್ತು.
ಪ್ರತಿ ಬ್ಯಾರಕ್ ಮತ್ತು ಸೆಲ್ಗಳಲ್ಲೂ ಇಂಚಿಂಚಾಗಿ ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆ ಮಧ್ಯರಾತ್ರಿ ಕಳೆದು ನಸುಕಿನವರೆಗೂ ನಡೆಯುವ ಸಾಧ್ಯತೆಗಳಿವೆ.