ಸಿಬ್ಬಂದಿಯನ್ನು ಬೂಟಿನಿಂದ ತುಳಿದಿದ್ದ ಪ್ರಕರಣ:ಸೆಕ್ಯುರಿಟಿ ಏಜೆನ್ಸಿಗೆ ಬೀಗ
ಬೆಂಗಳೂರು, ಅಕ್ಟೋಬರ್ 18: ಸಿಬ್ಬಂದಿಯನ್ನು ಬೂಟಿನಿಂದ ತುಳಿದ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್.ಎಸ್.ಆರ್. ಲೇಔಟ್ನ ಸೆಕ್ಯುರಿಟಿ ಫೋರ್ಸ್ ಆ್ಯಂಡ್ ಹೌಸ್ ಕೀಪಿಂಗ್ ಸರ್ವಿಸಸ್ ಏಜೆನ್ಸಿಯ ನೋಂದಣಿಯನ್ನು ರದ್ದುಪಡಿಸಲಾಗಿದೆ.
ಸೆಕ್ಯುರಿಟಿ ಕಂಪನಿಯೊಂದರ ಮಾಲೀಕ ತನ್ನ ಸಿಬ್ಬಂದಿಯನ್ನು ಕಾಲಿನಿಂದ ತುಳಿದು ಅಮಾನವೀಯವಾಗಿ ನಡೆಸಿಕೊಂಡಿರುವ ವಿಡಿಯೋ ವೈರಲ್ ಆಗಿತ್ತು.
ಬೆಂಗಳೂರು: ಮಾಲೀಕನ ಅಮಾನವೀಯ ವರ್ತನೆ ಕ್ಯಾಮರಾದಲ್ಲಿ ಸೆರೆ
ಸಚಿವ ಎಸ್. ಸುರೇಶ್ ಕುಮಾರ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದ ಸುದ್ದಿಯೊಂದು ನನ್ನ ಗಮನ ಸೆಳೆದಿತ್ತು.
ಮಾಲೀಕರೊಬ್ಬರು ತನ್ನ ನೌಕರನನ್ನು ಬೂಟು ಕಾಲಲ್ಲಿ ಒದ್ದು ಹಾಕುವ ದೃಶ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತಷ್ಟೇ ಅಲ್ಲದೆ ಆಕ್ರೋಶ ಉಂಟು ಮಾಡಿತ್ತು. ನಾನು ಕೊಟ್ಟ ಸೂಚನೆಯ ಮೇರೆಗೆ ಬೆಂಗಳೂರು ಸೆಕ್ಯೂರಿಟಿ ಫೋರ್ಸ್ ಆ್ಯಂಡ್ ಹೌಸ್ ಕೀಪಿಂಗ್ ಸರ್ವೀಸಸ್ ಸಂಸ್ಥೆಯ ನೊಂದಣಿ ಪತ್ರವನ್ನು ರದ್ದು ಪಡಿಸಲಾಗಿರುತ್ತದೆ ಎಂದು ಟ್ವೀಟ್ ಮಾಡಿ ಆದೇಶ ಪ್ರತಿಯನ್ನೂ ಲಗತ್ತಿಸಿದ್ದಾರೆ.
ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿದ ಮಾಲೀಕರೊಬ್ಬರು ತನ್ನ ನೌಕರನನ್ನು ಬೂಟು ಕಾಲಲ್ಲಿ ಒದ್ದು ಹಾಕುವ ದೃಶ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತಷ್ಟೇ ಅಲ್ಲದೆ ಆಕ್ರೋಷ ಉಂಟು ಮಾಡಿತ್ತು
— S.Suresh Kumar, Minister - Govt of Karnataka (@nimmasuresh) October 17, 2019
ನಾನು ಕೊಟ್ಟ ಸೂಚನೆಯ ಮೇರೆಗೆ ಬೆಂಗಳೂರು ಸೆಕ್ಯೂರಿಟಿ ಫೋರ್ಸ್ ಅಂಡ್ ಹೌಸ್ ಕೀಪಿಂಗ್ ಸರ್ವೀಸಸ್ ಸಂಸ್ಥೆಯ ನೊಂದಣಿ ಪತ್ರವನ್ನು ರದ್ದು ಪಡಿಸಲಾಗಿರುತ್ತದೆ pic.twitter.com/bh7cqTosMY
ಕೆಳಗೆ ಬಿದ್ದ ಸೆಕ್ಯುರಿಟಿ ಸೂಪರ್ವೈಸರ್ ಮುಖದ ಮೇಲೆ ಕಾಲನ್ನೊತ್ತಿ ತುಳಿಯುತ್ತಿರುವ ಮಾಲೀಕನ ವಿಡಿಯೋ ವೈರಲ್ ಆಗಿತ್ತು. 'ಆ ಸಿಬ್ಬಂದಿ ಹಿಂದಿ ಭಾಷೆಯಲ್ಲಿ ಬೇಡಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು. ದಯವಿಟ್ಟು ಈ ಬಾರಿ ನಮ್ಮನ್ನು ಕ್ಷಮಿಸಿ. ಇನ್ನೊಮ್ಮೆ ನನ್ನ ಜೀವನದಲ್ಲಿ ಈ ರೀತಿಯ ತಪ್ಪನ್ನು ಮಾಡುವುದಿಲ್ಲ' ಎಂದು ಬೇಡಿಕೊಂಡಿದ್ದರು. ಸೆಕ್ಯುರಿಟಿ ಗಾರ್ಡ್ ಮತ್ತು ಮಾಲೀಕ ಮೂವರೂ ಅಸ್ಸಾಂ ಮೂಲದವರು ಎನ್ನಲಾಗಿತ್ತು.
ಸಲೀಂ ಖಾನ್ ಎಂಬ ಮಾಲೀಕ ತನ್ನ ಸಿಬ್ಬಂದಿಯನ್ನು ಕೆಳಕ್ಕೆ ತಳ್ಳಿ ಕಾಲಿನಿಂದ ತುಳಿಯುತ್ತಿರುವ ವಿಡಿಯೋ ವೈರಲ್ ಆಗಿತ್ತು.