ಕನಕಪುರ ಬಳಿ ಭೀಕರ ಅಪಘಾತ: ಸ್ಥಳದಲ್ಲೇ ಐವರ ಸಾವು
ಕನಕಪುರದ ಬಳಿ ಕಾರು- ಕ್ಯಾಂಟರ್ ಅಪಘಾತ. ಕಾರಿನಲ್ಲಿದ್ದ ಐವರು ಪುರುಷರು ಸ್ಥಳದಲ್ಲೇ ಸಾವು. ಮರಣ ಹೊಂದಿದವರೆಲ್ಲರೂ ಬೆಂಗಳೂರು ಮೂಲದವರು.
ರಾಮನಗರ, ಜುಲೈ 11: ರಾಮನಗರ- ಕನಕಪುರ ರಸ್ತೆಯ ಹೆದ್ದಾರಿಯಲ್ಲಿ ಬರುವ ತೋಪುಗಾನ ಹಳ್ಳಿ ಬಳಿ ಮಂಗಳವಾರ ರಾತ್ರಿ ಕ್ಯಾಂಟರ್ ಹಾಗೂ ಸ್ವಿಫ್ಟ್ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಸಂಗಮದಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಹಾಗೂ ಕ್ಯಾಂಟರ್ ಡಿಕ್ಕಿಯಾಗಿದ್ದು, ಸ್ವಿಫ್ಟ್ ಕಾರಿನಲ್ಲಿದ್ದ ಬೆಂಗಳೂರು ಮೂಲದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕನಕಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸ್ವಿಫ್ಟ್ ಕಾರು ಸಂಗಮದಿಂದ ಬೆಂಗಳೂರಿಗೆ ಬರುತ್ತಿದ್ದರೆ, ಕ್ಯಾಂಟರ್ ಕನಕಪುರದಿಂದ ಬೆಂಗಳೂರಿಗೆ ಬರುತ್ತಿತ್ತು ಎಂದು ಹೇಳಲಾಗಿದೆ.
Comments
English summary
In a horrible accident between a swift car and a canter near Kanakapura, five men who were in car died on spot. The accident took place at night on 11th July, 2017.
Story first published: Tuesday, July 11, 2017, 20:33 [IST]