ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ನಮ್ಮ ಮೆಟ್ರೋ ಪಿಲ್ಲರ್‌ಗೆ ಗುದ್ದಿದ ಕಾರ್!

|
Google Oneindia Kannada News

ಬೆಂಗಳೂರು, ಜನವರಿ 16: ನಮ್ಮ ಮೆಟ್ರೋ ಕಂಬಕ್ಕೆ (ಪಿಲ್ಲರ್) ಇನ್ನೋವಾ ಕಾರ್ ಗುದ್ದಿ, ಕಾರ್‌ನಲ್ಲಿದ್ದ ವ್ಯಕ್ತಿ ಮೃತಪಟ್ಟ ಘಟನೆ ಗುರುವಾರ ಬೆಂಗಳೂರಿನಲ್ಲಿ ನಡೆದಿದೆ.

ಗುರುವಾರ ಬೆಳಿಗ್ಗೆ 11.30 ರ ಸುಮಾರು ಮಲ್ಲೇಶ್ವರ ಬಳಿಯ ಸಾರ್ಕಾರಿ ಸಾಬೂನು ಕಾರ್ಖಾನೆ ವೃತ್ತದ ಬಳಿ ಇನ್ನೋವಾ ಕಾರ್ ಚಾಲಕ ಉಮೇಶ್ ಎನ್ನುವರು ತನ್ನ ವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಅದೇ ರಸ್ತೆಯಲ್ಲಿ ಮುಂದೆ ಹೋಗುತ್ತಿದ್ದ ಗೂಡ್ಸ್‌ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ.

ಭಾರೀ ದಂಡದ ಭಯ: ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಇಳಿಕೆ ಆಯ್ತಾ?ಭಾರೀ ದಂಡದ ಭಯ: ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಇಳಿಕೆ ಆಯ್ತಾ?

ನಂತರ ರಸ್ತೆ ಪಕ್ಕದ ಮೆಟ್ರೋ ಪಿಲ್ಲರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಸಂತೋಷ (37 ವರ್ಷ) ರವರಿಗೆ ತೀವ್ರ ಪೆಟ್ಟು ಬಿದ್ದು, ಆಸ್ಪತ್ರೆ ಗೆ ಹೋಗುವ ಮಾರ್ಗ ಮಧ್ಯ ಸಂತೋಷ ಮೃತಪಟ್ಟಿದ್ದಾರೆ. ಇನ್ನೋವಾ ಕಾರ್ ಚಾಲಕ ಉಮೇಶ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Car Accedent Near Malleshwaram Metro Station: 1 Person Dead

ಚಾಲಕ ಉಮೇಶ್ ಅವರ ನಿರ್ಲಕ್ಷತನದಿಂದ ಘಟನೆ ಸಂಭವಿಸಿದೆ ಎಂದು ಮಲ್ಲೇಶ್ವರ ಸಂಚಾರ ಪೊಲೀಸರು ತಿಳಿಸಿದ್ದು, ಘಟನೆ ನಡೆದಾಗ ಸಂಚಾರ ದಟ್ಟಣೆ ಉಂಟಾಗಿತ್ತು. ಮೆಟ್ರೋ ಪಿಲ್ಲರ್‌ಗೆ ಯಾವುದೇ ದಕ್ಕೆ ಆಗಿಲ್ಲ.

English summary
Car Accedent Near Malleshwaram Metro Station. 1 Person Dead. Case Is Booked In Malleshwaram Traffic Police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X