'ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಲೇಕಣಿದು ಆತ್ಮಹತ್ಯೆ ಯತ್ನ'
ಬೆಂಗಳೂರು, ಏ.14- ತಮ್ಮ ಪ್ರತಿಸ್ಪರ್ಧಿ ನಂದಲ್ ನಿಲೇಕಣಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವುದು ಆತ್ಮಹತ್ಯಾ ಪ್ರಯತ್ನದಂತಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅನಂತ್ ಕುಮಾರ್ ಜರಿದಿದ್ದಾರೆ.
ಸತತವಾಗಿ 5 ಬಾರಿ ಗೆದ್ದು, 6ನೇ ಬಾರಿ ಗೆಲ್ಲುವ ಪ್ರಯತ್ನದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವರು ಆಧಾರ್ ಯೋಜನೆಯ ಮಾಜಿ ಮುಖ್ಯಸ್ಥ ನಂದಲ್ ನಿಲೇಕಣಿ ಅವರನ್ನು ಎದುರಿಸುತ್ತಿದ್ದಾರೆ.
ಈ
ಸಂದರ್ಭದಲ್ಲಿ
ಪಿಟಿಐ
ಸುದ್ದಿ
ಸಂಸ್ಥೆ
ಜತೆ
ಮಾತನಾಡಿರುವ
ಅನಂತ್,
ನಂದನ್
ನಿಲೇಕಣಿ
ಅವರದು
ಆತ್ಮಹತ್ಯಾ
ಯತ್ನವೇ
ಸರಿ.
ಅವರು
ಕಾಂಗ್ರೆಸ್
ಪಕ್ಷವನ್ನು
ಪ್ರತಿನಿಧಿಸುತ್ತಿದ್ದಾರೆ.
ಆ
ಪಕ್ಷವೋ
ಭ್ರಷ್ಟಾಚಾರ
ಮತ್ತು
ಹಗರಣಗಳನ್ನು
ಪ್ರತಿನಿಧಿಸುತ್ತದೆ.
ಅದರರ್ಥ
ನಿಲೇಕಣಿ
ಸಹ
ಭ್ರಷ್ಟಾಚಾರ
ಮತ್ತು
ಹಗರಣಗಳನ್ನು
ಪ್ರತಿನಿಧಿಸುತ್ತಿದ್ದಾರೆ
ಎಂದಾಯಿತು
ಎಂದು
ಲೇವಡಿ
ಮಾಡಿದ್ದಾರೆ.
(ಬೆಂಗಳೂರು
ದಕ್ಷಿಣ
ಲೋಕಸಭಾ
ಕ್ಷೇತ್ರ
ಹೀಗಿದೆ
ನೋಡಿ)
ಕಾಂಗ್ರೆಸ್ ಅಂದರೆ ಆರ್ಥಿಕ ಸಂಕಷ್ಟಗಳು ಮತ್ತು ಬೆಲೆಯೇರಿಕೆ ಸಂಕಟಗಳನ್ನು ಪ್ರತಿನಿಧಿಸುವ ಪಕ್ಷವಾಗಿದೆ. ಆದ್ದರಿಂದ ನಿಲೇಕಣಿ ಸಹ ಆರ್ಥಿಕ ಸಂಕಷ್ಟ ಮತ್ತು ಬೆಲೆಯೇರಿಕೆ ಸಂಕಟಗಳನ್ನೇ ಪ್ರತಿನಿಧಿಸುತ್ತಿದ್ದಾರೆ. ಮೊಣಕಾಲಿನಲ್ಲಿ ಚೈತನ್ಯವೇ ಇಲ್ಲದ ಶಕ್ತಿಹೀನ ಸರಕಾರ ಮತ್ತು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದ ಬಲಹೀನ ಪ್ರಧಾನಿ (ಮನಮೋಹನ್ ಸಿಂಗ್) ಅವರನ್ನು ನಿಲೇಕಣಿ ಪ್ರತಿನಿಧಿಸುತ್ತಾರೆ ಎಂದು ನಿಲೇಕಣಿ ವಿರುದ್ಧ ಅನಂತ್ ಹರಿಹಾಯ್ದಿದ್ದಾರೆ.
ಅವರು ಕಾಂಗ್ರೆಸ್ ಪಕ್ಷದ ಎಲ್ಲ ನ್ಯೂನತೆಗಳನ್ನು ಪ್ರತಿನಿಧಿಸುತ್ತಾರೆ. UIDAI ಅಧ್ಯಕ್ಷರಾಗಿ ಕ್ಯಾಬಿನೆಟ್ ದರ್ಜೆಯ ಸ್ಥಾನ ಅನುಭವಿಸುತ್ತಿರುವಾಗ ಪಕ್ಷದ ವತಿಯಿಂದ ಅನಂತ ಭ್ರಷ್ಟಾಚಾರಗಳು ನಡೆಯುತ್ತಿದ್ದರೂ ಅದರ ವಿರುದ್ಧ ನಿಲೇಕಣಿ ಒಂದೇ ಒಂದು ಮಾತನ್ನೂ ಆಡಲಿಲ್ಲ. ಹಣದುಬ್ಬರ, ಆರ್ಥಿಕ ಸಂಕಷ್ಟಗಳು ತಾಂಡವವಾಡುತ್ತಿದ್ದಾಗ ನಿಲೇಕಣಿ ಮೌನವಾಗಿಬಿಟ್ಟರು. ಅವುಗಳ ವಿರುದ್ಧ ನಿಲೇಕಣಿ ಧ್ವನಿಯೆತ್ತಲೇ ಇಲ್ಲ ಎಂದು ಅನಂತ್ PTIಗೆ ತಿಳಿಸಿದ್ದಾರೆ.