ಜೇಟ್ಲಿಗೆ ಸಂತಾಪ ಸೂಚಿಸುವಾಗ ಸಿಎಂ ಪುತ್ರ ವಿಜಯೇಂದ್ರ ಎಡವಟ್ಟು
ಬೆಂಗಳೂರು,
ಆಗಸ್ಟ್
24:
ಮಾಜಿ
ವಿತ್ತ
ಸಚಿವ
ಅರುಣ್
ಜೇಟ್ಲಿ
ಶನಿವಾರ
ನಿಧನರಾಗಿದ್ದಾರೆ.
ಜೇಟ್ಲಿಗೆ
ಸಂತಾಪ
ಸೂಚಿಸುವಾಗ
ಸಿಎಂ
ಪುತ್ರ
ವಿಜಯೇಂದ್ರ
ಎಡವಟ್ಟು
ಮಾಡಿದ್ದಾರೆ.
''ನಾನು
ಮೊದಲ
ಬಾರಿಗೆ
ಮುಖ್ಯಮಂತ್ರಿ
ಆದಾಗ
ಅವರು
ಕರ್ನಾಟಕ
ಉಸ್ತುವಾರಿಗಳಾಗಿದ್ದರು'
ಎಂದು
ವಿಜಯೇಂದ್ರ
ಬರೆದಿದ್ದಾರೆ.
ಸ್ವಲ್ಪ
ಹೊತ್ತಿನ
ಬಳಿಕ
ಆ
ವಾಕ್ಯವನ್ನೇ
ತೆಗೆದುಹಾಕಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರು, ಶ್ರೇಷ್ಠ ಸಂಸದೀಯ ಪಟು, ಅದ್ಭುತ ವಾಗ್ಮಿ, ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿಯವರ ನಿಧನದಿಂದ ದೇಶಕ್ಕೆ, ಪಕ್ಷಕ್ಕೆ ಮತ್ತು ವೈಯಕ್ತಿಕವಾಗಿ ನನಗೂ ಕೂಡ ಅನಾಥಪ್ರಜ್ಞೆ ಕಾಡುತ್ತಿದೆ.
• ಆ ಎತ್ತರದ ವ್ಯಕ್ತಿತ್ವದ ರಾಜನೀತಿಜ್ಞರಿಗೆ ನನ್ನ ಗೌರವಪೂರ್ವಕ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಿದ್ದೇನೆ.
• ದೇವರು ಅವರ ಕುಟುಂಬದವರು ಮತ್ತು ಅಪಾರ ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
•
ಎಲ್ಲ
ವಿಷಯಗಳ
ಬಗ್ಗೆ
ಅಧಿಕಾರಯುತವಾಗಿ
ಮಾತನಾಡಬಲ್ಲ
ವಿದ್ವತ್ತು
ಅವರಲ್ಲಿತ್ತು.
•
ಏಕ
ರೂಪ
ತೆರಿಗೆ
(GST)
ಸೇರಿದಂತೆ
ನಮ್ಮ
ದೇಶದ
ಆರ್ಥಿಕ
ಸುಧಾರಣೆಯಲ್ಲಿ
ಅವರ
ಪಾತ್ರ
ದೇಶ
ಎಂದಿಗೂ
ಮರೆಯುವುದಿಲ್ಲ.
•
ಜೇಟ್ಲಿಯವರ
ಸಮರ್ಥ
ನಿರ್ವಹಣೆಯಲ್ಲಿ
ಭಾರತ
2
ಟ್ರಿಲಿಯನ್
ಡಾಲರ್
ಆರ್ಥಿಕ
ದೈತ್ಯಶಕ್ತಿಯಾಗಿ
ಬೆಳೆಯಿತು.
•
ಅವರು
ಉದಾರವಾದಿಯಾಗಿದ್ದರು,
ರಾಷ್ಟ್ರವಾದಿಯಾಗಿದ್ದರು,
ಅತ್ಯುತ್ತಮ
ನ್ಯಾಯವಾದಿಗಳಾಗಿದ್ದಂತೆ
ಆರ್ಥಿಕ
ತಜ್ಞರೂ
ಆಗಿದ್ದರು.
•
ಎಲ್ಲ
ಪಕ್ಷಗಳ
ನಾಯಕರು
ಶ್ರೀ
ಅರುಣ್
ಜೇಟ್ಲಿಯವರನ್ನು
ಗೌರವಿಸುತ್ತಿದ್ದರು.
•
ಭಾರತರತ್ನ
ಅಟಲ್
ಬಿಹಾರಿ
ವಾಜಪೇಯಿ
ಸರ್ಕಾರದಲ್ಲೂ
ಸಚಿವರಾಗಿ
ಕಾರ್ಯನಿರ್ವಹಿಸಿದ್ದ
ಶ್ರೀ
ಅರುಣ್
ಜೇಟ್ಲಿಯವರು
ಪ್ರಧಾನಮಂತ್ರಿ
ಶ್ರೀ
ನರೇಂದ್ರ
ಮೋದಿಯವರು
ಹೇಳಿದಂತೆ
"ಅಮೂಲ್ಯ
ವಜ್ರ"
ಸದೃಶರಾಗಿದ್ದರು.
• ಅಂತಹ ಅದ್ವಿತೀಯ ನಾಯಕರಾಗಿದ್ದ ಶ್ರೀ ಅರುಣ್ ಜೇಟ್ಲಿಯವರು ಇಷ್ಟು ಬೇಗ ನಮ್ಮನ್ನು ಅಗಲಿರುವುದು ಎಂದಿಗೂ ತುಂಬಲಾರದ ನಷ್ಟವಾಗಿದೆ.
•
ಅವರಿಲ್ಲದ
ದೊಡ್ಡ
ಶೂನ್ಯತೆ
ನಮ್ಮ
ಪಕ್ಷವನ್ನು
ಆವರಿಸಿದೆ.
•
ಮತ್ತೊಮ್ಮೆ
ನನ್ನ
ಆತ್ಮೀಯ
ಮಾರ್ಗದರ್ಶಕರಾಗಿದ್ದ
ಶ್ರೀ
ಅರುಣ್
ಜೇಟ್ಲಿಯವರಿಗೆ
ನನ್ನ
ಅಶ್ರುಪೂರ್ಣ
ಶ್ರದ್ಧಾಂಜಲಿಗಳನ್ನು
ಸಲ್ಲಿಸುತ್ತಿದ್ದೇನೆ
ಎಂದಿದ್ದಾರೆ.