ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಚರ್ಚ್‌ನಲ್ಲಿ ಅಸಲಿಗೆ ನಡೆದಿದ್ದಾರೂ ಏನು?

|
Google Oneindia Kannada News

ಬೆಂಗಳೂರು, ಜನವರಿ 21: ಬೆಂಗಳೂರಿನ ಕೆಂಗೇರಿಯಲ್ಲಿ ಚರ್ಚಿಗೆ ನುಗ್ಗಿ ಅಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿರುವುದು ಕಳ್ಳನೊಬ್ಬನ ಕರಾಮತ್ತು ಎಂದು ತಿಳಿದು ಬಂದಿದೆ.

ಕೆಂಗೇರಿಯ 'ಸಂತ ಫ್ರಾನ್ಸಿಸ್‌' ಚರ್ಚ್‌ನಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳು ನುಗ್ಗಿ, ಕಿಟಗಿ ಗಾಜುಗಳು, ಬಾಗಿಲುಗಳನ್ನು ಒಡೆದಿದ್ದಾರೆ. ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ ಎಂಬ ಸುದ್ದಿಗಳು ಮಂಗಳವಾರ ಬೆಳಿಗ್ಗೆ ಹರಿದಾಡಿದ್ದವು. ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇದು ಕಳ್ಳನೊಬ್ಬನ ಕೃತ್ಯ ಎಂಬುದಾಗಿ ಗೊತ್ತಾಗಿದೆ.

Burglary Attempt In Bengaluru Church

ಬೆಂಗಳೂರಿನ ಸಂತ ಫ್ರಾನ್ಸಿಸ್ ಚರ್ಚ್‌ನಲ್ಲಿ ದುಷ್ಕರ್ಮಿಗಳಿಂದ ದಾಂಧಲೆ ಬೆಂಗಳೂರಿನ ಸಂತ ಫ್ರಾನ್ಸಿಸ್ ಚರ್ಚ್‌ನಲ್ಲಿ ದುಷ್ಕರ್ಮಿಗಳಿಂದ ದಾಂಧಲೆ

ಸಿಸಿಟಿವಿ ದಾಖಲೆಗಳ ಪ್ರಕಾರ, ಕಳ್ಳನೊಬ್ಬ ಚರ್ಚ್ ನ ಮುಖ್ಯ ಬಾಗಿಲು ಮುರಿದು ಒಳ ನುಗ್ಗಿದ್ದಾನೆ. ನಂತರ ಪ್ರಾರ್ಥನಾ ಮಂದಿರದಲ್ಲಿನ ಎರಡು ಕಪಾಟುಗಳನ್ನೂ ಸಹ ಮುರಿದಿದ್ದಾನೆ. ಕಪಾಟಿನಲ್ಲಿ ಏನೂ ಸಿಗದಿದ್ದಕ್ಕೆ ಚರ್ಚ್‌ನಲ್ಲಿನ ಕುರ್ಚಿ ಮೇಜುಗಳನ್ನು ಪುಡಿ ಪುಡಿ ಮಾಡಿ ಅಲ್ಲಿಂದ ಕಾಲು ಕಿತ್ತಿದ್ದಾನೆ.

Burglary Attempt In Bengaluru Church

ಚರ್ಚ್‌ನಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಈ ಘಟನೆ ಕೆಲಕಾಲ ಆತಂಕದ ವಾತಾವರಣವನ್ನು ಸೃಷ್ಟಿಸಿತ್ತು. ಯಾರೋ ಕೋಮು ಭಾವನೆ ಕೆರಳಿಸಲು ಈ ರೀತಿ ಮಾಡಿದ್ದಾರೆ ಎನ್ನಲಾಗಿತ್ತು. ಕೆಂಗೇರಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ.

English summary
Burglary Attempted In Bengaluru Church. a thief had broken into a church in Kengeri, Bengaluru , and destroyed the furniture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X