ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಸ್‌ವೈ 3 ತಿಂಗಳು ಅಧಿಕಾರದಲ್ಲಿದ್ರೂ ಓಕೆ, ನಮಗೆ ಬೇಡವಾದ ವಿಷಯ: ದೇವೇಗೌಡ

|
Google Oneindia Kannada News

ಬೆಂಗಳೂರು, ಆಗಸ್ಟ್ 7: ಈಗಿನ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮೂರು ತಿಂಗಳು ಅಧಿಕಾರದಲ್ಲಿದ್ದರೂ ಓಕೆ, ಅದು ನಮಗೆ ಬೇಡದ ವಿಷಯ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಹೇಳಿದರು.

ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಾಲಿ ಸಿಎಂ ಮೂರು ತಿಂಗಳು ಸರ್ಕಾರ ಮಾಡಿದ್ರೂ ನಮಗೆ ಚಿಂತೆ ಇಲ್ಲ, ಅದರ ಅವಶ್ಯಕತೆ ಇಲ್ಲ ಅದನ್ನೆಲ್ಲಾ ದೆಹಲಿಯಲ್ಲೇ ನಿರ್ಧಾರ ಮಾಡುತ್ತಾರೆ.

ಯಡಿಯೂರಪ್ಪ ಸರಕಾರ ಅಸ್ಥಿರಗೊಳಿಸುವ ಬಗ್ಗೆ ದೇವೇಗೌಡ್ರ ಸ್ಪಷ್ಟನೆ ಯಡಿಯೂರಪ್ಪ ಸರಕಾರ ಅಸ್ಥಿರಗೊಳಿಸುವ ಬಗ್ಗೆ ದೇವೇಗೌಡ್ರ ಸ್ಪಷ್ಟನೆ

ಮೋದಿ, ಶಾ ಯಾವ ಟೈಮಲ್ಲಿ ಯಾವಾಗ ಏನ್ ನಿರ್ಧಾರ ಮಾಡ್ತಾರೆ ಅನ್ನೋದು ಯಾರಿಗೂ ಗೊತ್ತಿಲ್ಲ, ಅವರಿಬ್ಬರೇ ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ಹತ್ತು ಜಿಲ್ಲೆಗಳಲ್ಲಿ ಭೀಕರ ಮಳೆ ಇದೆ, ಎಲ್ಲಾ ಜಿಲ್ಲೆಗಳಿಂದ ನೀವು ಬಂದಿದ್ದೀರಿ , ಪಕ್ಷವನ್ನ ಉಳಿಸೋಕೆ ಛಲದಿಂದ ಬಂದಿದ್ದೀರಾ, ಈ ಪಕ್ಷವನ್ನ ನೀವೇ ಉಳಿಸೇ ಉಳಿಸ್ತೀರಿ ಅನ್ನೋ ಆತ್ಮವಿಶ್ವಾಸ ನನಗೆ ಇದೆ, ಚುನಾವಣೆ ಯಾವಾಗ ಬರುತ್ತೆ ಅಂತ ಯಾರಿಗೂ ಗೊತ್ತಿಲ್ಲ ಎಂದರು.

BS Yeddyurappa Has Been In Power for 3 months

ಮೈತ್ರಿ ಸರ್ಕಾರದ ಪತನವಾದ ಬೆನ್ನಲ್ಲೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶ ನಡೆಯುತ್ತಿದೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಹಿನ್ನೆಲೆ ಸಮಾವೇಶ ನಡೆಸಲಾಯಿತು. ಸಮಾವೇಶದಲ್ಲಿ ವರಿಷ್ಠ ದೇವೆಗೌಡ, ಶಾಸಕಾರಾದ ಸಿಎಸ್ ಪುಟ್ಟರಾಜು,ರೆವಣ್ಣ,ವೆಂಕಟರಾಮ್ ‌ನಾಡಗೌಡ ಭಾಗಿಯಾಗಿದ್ದಾರೆ.

English summary
Former Prime Minister HD Deve Gowda said the current chief minister BS Yeddyurappa had been in chief minister post for three months but that was not what we wanted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X