ಆಸ್ತಿ ತೆರಿಗೆ ಹೆಚ್ಚಳ, ಬೆಂಗಳೂರಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ
ಬೆಂಗಳೂರು, ಮೇ 03 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲು ಹೋಗುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿಬಿಎಂಪಿ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು.
ಕಂಠೀರವ
ಸ್ಟೇಡಿಯಂನಿಂದ
ಆರಂಭವಾದ
ಬಿಜೆಪಿಯ
ಬೃಹತ್
ಪ್ರತಿಭಟನಾ
ಮೆರವಣಿಗೆ
ಬಿಬಿಎಂಪಿ
ಕಚೇರಿ
ತಲುಪಬೇಕಿತ್ತು.
ಆದರೆ,
ಪ್ರತಿಭಟನೆ
ನೇತೃತ್ವ
ವಹಿಸಿದ್ದ
ಬಿಜೆಪಿ
ರಾಜ್ಯಾಧ್ಯಕ್ಷ
ಬಿ.ಎಸ್.ಯಡಿಯೂರಪ್ಪ
ಸೇರಿದಂತೆ
ಹಲವು
ನಾಯಕರನ್ನು
ಪೊಲೀಸರು
ವಶಕ್ಕೆ
ಪಡೆದುಕೊಂಡರು.
[ತಳ್ಳಾಟ-ನೂಕಾಟ:
ರಣಾಂಗಣವಾದ
ಬಿಬಿಎಂಪಿ
ಕೌನ್ಸಿಲ್
ಸಭೆ]
ಯಡಿಯೂರಪ್ಪ,
ಆರ್.ಅಶೋಕ್,
ಬಿಬಿಎಂಪಿ
ವಿರೋಧ
ಪಕ್ಷದ
ನಾಯಕ
ಪದ್ಮನಾಭ
ರೆಡ್ಡಿ
ಮುಂತಾದವರು
ಪ್ರತಿಭಟನೆಯಲ್ಲಿ
ಪಾಲ್ಗೊಂಡಿದ್ದರು.
ಕಂಠೀರವ
ಸ್ಟೇಡಿಯಂನಿಂದ
ಆರಂಭವಾದ
ಮೆರವಣಿಗೆ
ಬಿಬಿಎಂಪಿ
ಕಚೇರಿ
ಸಮೀಪ
ಬರುತ್ತಿದ್ದಾಂತೆ
ಹಲವು
ನಾಯಕರನ್ನು
ಪೊಲೀಸರು
ವಶಕ್ಕೆ
ಪಡೆದುಕೊಂಡರು.
ಇದರಿಂದಾಗಿ
ಬಿಬಿಎಂಪಿ
ಕಚೇರಿಗೆ
ಮುತ್ತಿಗೆ
ಹಾಕಲು
ಸಾಧ್ಯವಾಗಲಿಲ್ಲ.
[ಆನ್
ಲೈನ್
ಮೂಲಕ
ಬಿಬಿಎಂಪಿ
ಆಸ್ತಿ
ತೆರಿಗೆ
ಪಾವತಿಸಿ]
ಬಿಜೆಪಿ
ಬೇಡಿಕೆಗಳು
*
ಬಿಬಿಎಂಪಿ
ಆಸ್ತಿ
ತೆರಿಗೆ
ಪರಿಷ್ಕರಣೆಯನ್ನು
ಕೈಬಿಡಬೇಕು,
ಆನ್ಲೈನ್
ವ್ಯವಸ್ಥೆಯಲ್ಲಿ
ದೋಷಗಳನ್ನು
ಪರಿಹರಿಸಬೇಕು
*
ಶೇ
5ರಷ್ಟು
ರಿಯಾಯಿತಿ
ಅವಧಿಯನ್ನು
ಜೂನ್
30ರ
ತನಕ
ವಿಸ್ತರಣೆ
ಮಾಡುಬೇಕು
*
ಸ್ವಯಂಘೋಷಿತ
ಆಸ್ತಿ
ತೆರಿಗೆ
ಪದ್ಧತಿಯ
ಸಮಗ್ರ
ಮಾಹಿತಿ
ಕೈಪಿಡಿ
ಬಿಡುಗಡೆ
ಮಾಡಬೇಕು
*
ನಗರದ
ಕಸ
ವಿಲೇವಾರಿ
ವ್ಯವಸ್ಥೆಯನ್ನು
ಸರಿಪಡಿಸಬೇಕು
*
ಅವೈಜ್ಞಾನಿಕ
ವಲಯ
ವಿಂಗಡನೆ
ಕೈಬಿಡಬೇಕು