ಇನ್ಫಿ ಗೋಪಾಲಕೃಷ್ಣನ್ ಬೆಂಗಳೂರಿಗೆ ಭರ್ಜರಿ ಕೊಡುಗೆ
ಸುಮಾರು 225 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಕೇಂದ್ರದಲ್ಲಿ ಮೆದುಳಿನ ಅಧ್ಯಯನ ಮತ್ತು ಸಂಶೋಧನೆ ನಡೆಯಲಿದೆ. { ಹರ್ಯಾಣದಲ್ಲಿ ಭೂದಾನ: ಅಂದು ಭಾವನಿಗೆ, ಈಗ ತಂಗಿಗೆ }
ಕ್ರಿಸ್ ಗೋಪಾಲಕೃಷ್ಣನ್ ಅಧ್ಯಕ್ಷತೆಯ ಪ್ರತೀಕ್ಷಾ ಟ್ರಸ್ಟ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISC) ಜಂಟಿಯಾಗಿ ಸುಮಾರು 225 ಕೋಟಿ ರೂ. ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಾಣ ಮಾಡಲಿದೆ. ಮುಂದಿನ 10 ವರ್ಷಗಳ ಕಾಲದಲ್ಲಿ ಟ್ರಸ್ಟ್ ಕಾಲಕಾಲಕ್ಕೆ ಹಣ ಮಂಜೂರು ಮಾಡುತ್ತದೆ.
ಈ ಕುರಿತು ಹೇಳಿಕೆ ನೀಡಿರುವ ಕ್ರಿಸ್ ಗೋಪಾಲಕೃಷ್ಣನ್ ಮತ್ತು ಟ್ರಸ್ಟಿ ಸುಧಾ ಗೋಪಾಲಕೃಷ್ಣನ್ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ. ಟೋರ್ ಸ್ಟೆನ್ ವಿಸೆಲ್ (Prof. Torsten Wiesel) ಅಧ್ಯಕ್ಷತೆಯ ಅಂತಾರಾಷ್ಟ್ರೀಯ ಮಟ್ಟದ ಸಲಹಾ ಮಂಡಳಿಯೊಂದನ್ನು ಸ್ಥಾಪಿಸಲಾಗಿದೆ. ಸಂಶೋಧನಾ ಕೇಂದ್ರವು IISC ನರ ವಿಜ್ಞಾನ ಕೇಂದ್ರ ಹಾಗೂ ಬೆಂಗಳೂರಿನ ಇತರೆ ಆಸ್ಪತ್ರೆಗಳ ನೆರವು ಪಡೆಯಲಿದೆ ಎಂದು ತಿಳಿಸಿದ್ದಾರೆ. ಜತೆಗೆ, ಮದ್ರಾಸಿನ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ (IIT Madras) ಸಹ ನೆರವಾಗಲಿದೆ.
ಮನುಷ್ಯನ ಮೆದುಳು ಇನ್ನೂ ಕುತೂಹಲದ ಗಣಿಯಾಗಿಯೇ ಉಳಿದಿದೆ. ಅದನ್ನು ಅರಿಯುವ ಕೆಲಸ ಮಾನವರಿಂದ ಇನ್ನೂ ಪೂರ್ಣಮಟ್ಟಿಗೆ ಸಾಧ್ಯವಾಗಿಲ್ಲ. ಹೀಗಾಗಿ ಮೆದುಳಿನ ಕುರಿತು ಹೆಚ್ಚಿನ ಅಧ್ಯಯನ ನಡೆಸುವ ನಿಟ್ಟಿನಲ್ಲಿ IISc ಜತೆಗೂಡಿ ವಿಶ್ವಮಟ್ಟದ ಸಂಶೋಧನಾ ಕೇಂದ್ರ ಆರಂಭಕ್ಕೆ ನಿರ್ಧರಿಸಲಾಗಿದೆ ಎಂದು ಗೋಪಾಲಕೃಷ್ಣನ್ ದಂಪತಿ ತಿಳಿಸಿದ್ದಾರೆ.
ಏನೆಲ್ಲಾ
ಸಂಶೋಧನೆ
ನಡೆಯಲಿದೆಯೆಂದರೆ:
ಮೆದುಳು
ಕಾರ್ಯನಿರ್ವಹಿಸುವ
ಬಗ್ಗೆ,
ಜತೆಗೆ
ನರಕೋಶ
ವ್ಯವಸ್ಥೆ
ಹಾನಿ(neurodegenerative
conditions)
ಸಮಸ್ಯೆಗೆ
ಪರಿಹಾರ
ಕಂಡುಕೊಳ್ಳುವುದು,
ವೃದ್ಧಾಪ್ಯದಲ್ಲಿ
ಸಾಮಾನ್ಯವಾಗಿ
ಕಾಡುವ
ತೊಂದರೆಗಳಿಗೆ
ಉತ್ತರ
ಕಂಡುಕೊಳ್ಳುವ
ಕೆಲಸವನ್ನು
ಸಂಶೋಧನಾ
ಕೇಂದ್ರ
ಮಾಡಲಿದೆ.