ಲೋಟಕ್ಕಾಗಿ ಜಗಳ: 2 ವರ್ಷದ ಮಗುವನ್ನು ಕೊಂದ ಬಾಲಕ
ಬೆಂಗಳೂರು, ಫೆಬ್ರವರಿ 08: ಒಂದು ಲೋಟಕ್ಕಾಗಿ ನಡೆದ ಜಗಳ ಮಗುವಿನ ಸಾವಿನಲ್ಲಿ ಅಂತ್ಯಗೊಂಡ ಘಟನೆ ಬೆಂಗಳೂರಿನ ಮಾರುತಿನಗರದಲ್ಲಿ ಗುರುವಾರ ನಡೆದಿದೆ.
ಕಲಬುರಗಿ: ಹೆತ್ತ ತಾಯಿಗೆ ಬೇಡವಾದ ಹೆಣ್ಣು ಮಗು !
8 ವರ್ಷದ ಬಾಲಕ ಮಂಜುನಾಥ್ ಹಾಗೂ 2 ವರ್ಷದ ಮಗು ವೆಂಕಟೇಶ್ ಅಕ್ಕಪಕ್ಕದ ಮನೆಯವರು, ಒಂದು ಲೋಟಕ್ಕಾಗಿ ಇಬ್ಬರು ಮಕ್ಕಳು ಕಿತ್ತಾಡಿಕೊಂಡಿದ್ದಾರೆ, ಅದರ ಪರಿಣಾಮ ಮಂಜುನಾಥ್ ಎರಡು ವರ್ಷದ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ವಿಷಯ ತಿಳಿದ ನಂತರ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಮಾರುತಿನಗರದ ನೀಲಗಿರಿ ತೋಪಿನಲ್ಲಿ ಈ ಘಟನೆ ನಡೆದಿದೆ. ಮೃತ ಮಗುವಿನ ಪೋಷಕರಾದ ಬಸವರಾಜ್ ಮತ್ತು ವೆಂಕಮ್ಮ ದಂಪತಿಗಳು ಈರಣ್ಣ ಎಂಬುವವರ ಮೇಲೆ ಹತ್ಯೆ ಆರೋಪ ಮಾಡಿ ಸೋಲದೇವಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
Comments
English summary
In a strange incident, an eight years old boy a two years child following a dispute over a steel glass. This incident have reported in Marutinagar of Bengaluru on Thursday.
Story first published: Thursday, February 8, 2018, 9:58 [IST]