ಬೆಂಗಳೂರಿನ ಪ್ರಥಮ ಪ್ರಜೆಯಾಗಿ ಮಂಜುನಾಥ ರೆಡ್ಡಿ ಆಯ್ಕೆ
ಬೆಂಗಳೂರು, ಸೆ.11 : ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಡಿವಾಳ ವಾರ್ಡ್ ಕಾಂಗ್ರೆಸ್ ಸದಸ್ಯ ಮತ್ತು ಸಚಿವ ರಾಮಲಿಂಗಾ ರೆಡ್ಡಿ ಅವರ ಪರಮಾಪ್ತರಾದ ಬಿ.ಎನ್.ಮಂಜುನಾಥ ರೆಡ್ಡಿ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ
ಬಿಬಿಎಂಪಿ
ಪಾಲಿಕೆ
ಸಭಾಂಗಣದಲ್ಲಿ
ಪ್ರಾದೇಶಿಕ
ಆಯುಕ್ತೆ
ಎಂ.ವಿ.ಜಯಂತಿ,
ಬಿಬಿಎಂಪಿ
ಆಯುಕ್ತ
ಕುಮಾರ್
ನಾಯಕ್,
ಬೆಂಗಳೂರು
ನಗರ
ಜಿಲ್ಲಾಧಿಕಾರಿ
ವಿ.ಶಂಕರ್
ನೇತೃತ್ವದಲ್ಲಿ
ನಡೆದ
ಚುನಾವಣಾ
ಪ್ರಕ್ರಿಯೆಯಲ್ಲಿ
131
ಮತಗಳನ್ನು
ಪಡೆದ
ಮಂಜುನಾಥ
ರೆಡ್ಡಿ
ಅವರು
ಮೇಯರ್
ಚುನಾವಣೆಯಲ್ಲಿ
ಜಯಗಳಿಸಿದರು.
[ಮೇಯರ್
ಚುನಾವಣೆ
ಕ್ಷಣ-ಕ್ಷಣದ
ಮಾಹಿತಿ]
1996, 2010 ಮತ್ತು 2015ರಲ್ಲಿ ಸೇರಿ ಒಟ್ಟು ಮೂರು ಬಾರಿ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿರುವ ಬಿ.ಎನ್.ಮಂಜುನಾಥ ರೆಡ್ಡಿ ಅವರು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರ ಪರಮಾಪ್ತರು. ಬಿಬಿಎಂಪಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. [ಮಂಜುನಾಥ ರೆಡ್ಡಿ ಸಂಕ್ಷಿಪ್ತ ಪರಿಚಯ]
ಬಿಜೆಪಿ ಪರವಾಗಿ ಕಾಡು ಮಲ್ಲೇಶ್ವರ ವಾರ್ಡ್ ಬಿಜೆಪಿ ಸದಸ್ಯ ಮಂಜುನಾಥ ರಾಜು ಅವರು ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಒಟ್ಟು 260 ಸದಸ್ಯರಿಗೆ ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶವಿತ್ತು. ರಾಜ್ಯಸಭಾ ಸದಸ್ಯ ವಿಜಯ್ ಮಲ್ಯ ಹೊರತುಪಡಿಸಿ 259 ಸದಸ್ಯರು ಇಂದಿನ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.
2015ರ ಚುನಾವಣೆಯಲ್ಲಿ ಬಿ.ಎನ್.ಮಂಜುನಾಥ ರೆಡ್ಡಿ ಅವರು ಮಡಿವಾಳ ವಾರ್ಡ್ನಲ್ಲಿ 6573 ಮತಗಳನ್ನು ಪಡೆದು ಬಿಜೆಪಿಯ ಬಾಬು ಅವರ ವಿರುದ್ಧ ಜಯಗಳಿಸಿದ್ದರು. 2010ರ ಚುನಾವಣೆಯಲ್ಲಿಯೂ ಇದೇ ಕ್ಷೇತ್ರದಲ್ಲಿ ಅವರು ಗೆಲುವು ಸಾಧಿಸಿದ್ದರು.