ಬಸವೇಶ್ವರ ನಿಲ್ದಾಣಕ್ಕೆ ಬಿಎಂಟಿಸಿ ಫೀಡರ್ ಬಸ್ ಸಂಖ್ಯೆ ಹೆಚ್ಚಳ
ಬೆಂಗಳೂರು, ಏಪ್ರಿಲ್ 20: ಪ್ರಯಾಣಿಕರಿಲ್ಲದೆ ಭಣಗುಡುತ್ತಿರುವ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಬಸ್ ಗಳ ಸಂಚಾರ ಹೆಚ್ಚುವ ಸಾಧ್ಯತೆಯಿದೆ. ಕೆಎಸ್ ಆರ್ ಟಿಸಿಗೆ ಅನುಕೂಲವಾಗುವಂತೆ ನಿಲ್ದಾಣದಿಂದ ಬಸ್ ಕಾರ್ಯಾಚರಣೆ ನಡೆಸಲು ಬಿಎಂಟಿಸಿ ನಿರ್ಧರಿಸಿದೆ.
ಪೀಣ್ಯ ಬಸವೇಶ್ವರ ನಿಲ್ದಾಣ ಪ್ರಯಾಣಿಕರಿಲ್ಲದೆ ಭಣಭಣ!
ಅಂದಾಜು 4 ವರ್ಷಗಳ ಬಳಿಕ ಮರು ಜೀವ ಪಡೆದ ಬಸವೇಶ್ವರ ಬಸ್ ನಿಲ್ದಾಣ, ಒಂದೇ ಒಂದು ಬಿಎಂಟಿಸಿ ಬಸ್ ಸಂಪರ್ಕವಿಲ್ಲದೆ ಮತ್ತೆ ವಿಫಲವಾಗುವ ಮುನ್ಸೂಚನೆ ನೀಡಿತ್ತು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ರಾಜ್ಯದ ಹಲವು ಭಾಗಗಳಿಗೆ ತೆರಳುವ 980 ಬಸ್ ಗಳ ಪೈಕಿ 60 ಬಸ್ ಗಳನ್ನು ಈ ನಿಲ್ದಾಣಕ್ಕೆ ಏ,12ರಂದು ಕೆಎಸ್ ಆರ್ ಟಿಸಿ ಸ್ಥಳಾಂತರಿಸಿತ್ತು. ಆದರೆ ಈ 60 ಬಸ್ ಗಳಿಗೆ ಹತ್ತುತ್ತಿದ್ದ ಪ್ರಯಾಣಿಕರ ಸಂಖ್ಯೆ ನಿತ್ಯ 50-60 ದಾಟುತ್ತಿರಲಿಲ್ಲ. ಬಸ್ ನಿಲ್ದಾಣ ಮುಖ್ಯ ರಸ್ತೆಯಿಂದ ಅಂದಾಜು 1ಕಿ.ಮೀ ಪಳಭಾಗದಲ್ಲಿದ್ದು, ಸೂಕ್ತ ಸಂಪರ್ಕ ಕೊರತೆಯೇ ನಿಲ್ದಾಣ ವಿಫಲವಾಗಲು ಪ್ರಮುಖ ಕಾರಣವಾಗಿತ್ತು.
ಬಸ್ ನಿಲ್ದಾಣದ ಸುತ್ತಮುತ್ತಲಿನಿಂದ ಬರುವ ಜನರಿಗೆ ಅನುಕೂಲವಾಗುವಂತೆ ಹಾಗೂ ಸಮೀಪದ ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಬರಲು 2 ಮಿನಿ ಫೀಡರ್ ಬಸ್ ಸೇವೆಯನ್ನು ಉಚಿತವಾಗಿ ಕೆಎಸ್ ಆರ್ ಟಿಸಿ ಪ್ರಾರಂಭಿಸಿದೆ. ಜನರಿಗೆ ಬೇಕಾಗುವ ಸ್ಥಳಕ್ಕೆ ಈ ಬಸ್ ಸಂಚರಿಸದಿರುವ ಕಾರಣದಿಂದ ಉಚಿತ ಸೇವೆಯೂ ಪ್ರಯಾಣಿಕರನ್ನು ಆಕರ್ಷಿಸಲು ವಿಫಲವಾಗಿದೆ.
ಈಗ ಬಿಎಂಟಿಸಿ ಅಧಿಕಾರಿಗಳು ಬಸವೇಶ್ವರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಯಾವೆಲ್ಲಾ ಪ್ರದೇಶಗಗಳಿಗೆ ಬಸ್ ಪ್ರಾರಂಭಿಸಬಹುದು ಎಂದು ಪರಿಶೀಲಿಸಿದ್ದಾರೆ.