ನಮ್ಮ ಮೆಟ್ರೋ ಎಸ್ಕಲೇಟರ್ನಿಂದ ಕಾಲು ಜಾರೋದು ತಪ್ಪಿಸಲು ಕಂಬಿ ಅಳವಡಿಕೆ
ಬೆಂಗಳೂರು, ಫೆಬ್ರವರಿ 25: ಇತ್ತೀಚೆಗಷ್ಟೇ ಎಸ್ಕಲೇಟರ್ನಿಂದ ಮಗುವೊಂದು ಕೆಳಗೆ ಬಿದ್ದು ಮೃತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಮೆಟ್ರೋ ಎಸ್ಕಲೇಟರ್ಗೆ ಕಬ್ಬಿಣದ ಕಂಬಿಯನ್ನು ಅಳವಡಿಸಲಾಗುತ್ತಿದೆ.
ಈ ಕಂಬಿಯನ್ನು ಹಿಡಿದುಕೊಂಡು ಸುಲಭವಾಗಿ ಎಸ್ಕಲೇಟರ್ ಹತ್ತಬಹುದಾಗಿದೆ. ಆದರೆ ಎಲ್ಲಾ ಕಡೆ ಸುರಕ್ಷತಾ ಬಲೆ ಅಳವಡಿಸುವ ಕೆಲಸ ಮಾತ್ರ ಇನ್ನೂ ಆರಂಭವಾಗಿಲ್ಲ.ಮಹಾಲಕ್ಷ್ಮೀ ಲೇಔಟ್ ನಿಲ್ದಾಣದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಶ್ರೀರಾಂಪುರ, ಮಹಾಕವಿ ಕುವೆಂಪು ರಸ್ತೆ, ರಾಜಾಜಿನಗರ ಇನ್ನೂ ಹಲವು ನಿಲ್ದಾಣಗಳಲ್ಲಿ ಈ ರೀತಿಯ ಕಾಮಗಾರಿ ಮಾಡಲು ಚಿಂತನೆ ನಡೆಸಲಾಗಿದೆ.
ಶ್ರೀರಾಂಪುರ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್ನಿಂದ ಬಿದ್ದಿದ್ದ ಮಗು ಸಾವು
ಕೇವಲ ಮಕ್ಕಳು ಮಾತ್ರವಲ್ಲ ವೃದ್ಧರಿಗೂ ಕೂಡ ಯಾವುದೇ ಅವಲಂಬನೆ ಇಲ್ಲದೆ ಹತ್ತುವುದು ಕಷ್ಟವಾಗಿತ್ತು. ಅನೇಕ ಮೆಟ್ರೋ ನಿಲ್ದಾಣಗಳಲ್ಲಿ ಎಸ್ಕಲೇಟರ್ ಬದಿ ತೆರೆದಿದೆ. ಇಲ್ಲಿಂದ ಏನೇ ಕೈ ಜಾರಿದರೂ ನೇರವಾಗಿ ರಸ್ತೆಗೆ ಬೀಳುತ್ತದೆ. ಇದನ್ನು ತಪ್ಪಿಸಲು ಈ ರೀತಿಯ ಕಂಬಿ ಅಳವಡಿಸಲಾಗುತ್ತದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಎಸ್ಕಲೇಟರ್ಗಳಿಗೆ ಮಾತ್ರ ಕಂಬಿ ಅಳವಡಿಸಲಾಗುತ್ತದೆ.
ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಸಂಚಾರಕ್ಕೆ 2 ವರ್ಷ ಕಾಯ್ಬೇಕಂತೆ!
ರಸ್ತೆ ಬದಿಯಲ್ಲಿರುವ ಅಪಾಯಕಾರಿ ಎಸ್ಕಲೇಟರ್ ಗಳಿಗೆ ಸುರಕ್ಷತಾ ಬಲೆ ಅಳವಡಿಸಲಾಗಿದೆ. ಶ್ರೀರಾಂಪುರ, ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಅಳವಡಿಸಲಾಗುತ್ತಿದೆ.