ಆನೇಕಲ್ : ಬಿಜೆಪಿ ಕಾರ್ಯಕರ್ತ ಹರೀಶ್, ಕೊಚ್ಚಿ ಕೊಲೆ
ಆನೇಕಲ್ ನ ಸೂರ್ಯ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಹೀಲಲಲಗಿಯ ರಾಮಸಾಗರ ಗೇಟ್ ಬಳಿ ಬಿಜೆಪಿ ಕಾರ್ಯಕರ್ತ ಹರೀಶ್ ರನ್ನು ಕೊಚ್ಚಿ ಕೊಲ್ಲಲಾಗಿದೆ.
ಆನೇಕಲ್, ಜೂನ್ 01: ಆನೇಕಲ್ ನ ಸೂರ್ಯ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಹೀಲಲಲಗಿಯ ರಾಮಸಾಗರ ಗೇಟ್ ಬಳಿ ಬಿಜೆಪಿ ಕಾರ್ಯಕರ್ತ ಹರೀಶ್(40) ರನ್ನು ಕೊಚ್ಚಿ ಕೊಲ್ಲಲಾಗಿದೆ.
ಬೈಕಿನಲ್ಲಿ ತೆರಳುತ್ತಿದ್ದ ಬಿಜೆಪಿ ಬ್ಲಾಕ್ ಎಸ್ ಸಿ / ಎಸ್ಟಿ ಉಪಾಧ್ಯಕ್ಷ ಹರೀಶ್ ರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಅವರ ಕಣ್ಣಿಗೆ ಕಾರದ ಪುಡಿ ಹಾಕಿದ್ದಾರೆ. ನಂತರ ಮಾರಾಕಾಸ್ತ್ರ, ಕಲ್ಲಿನಿಂದ ಜಜ್ಜಿ ಹರೀಶ್ ರನ್ನು ಕೊಲ್ಲಲಾಗಿದೆ.[ಕಣ್ಣೂರು : ಆರೆಸ್ಸೆಸ್- ಬಿಜೆಪಿ ಕಾರ್ಯಕರ್ತ ಬಿಜು ಭೀಕರವಾಗಿ ಹತ್ಯೆ]
ಹರೀಶ್ ಅವರನ್ನು ರಾಜು ಅಲಿಯಾಸ್ ರಾಜೇಶ್, ಸಂತೋಷ್ ಗ್ಯಾಂಗಿನವರು ಕೊಂದಿರುವ ಸುದ್ದಿ ಹಬ್ಬಿದೆ. ಹರೀಶ್ ಕಡೆಯವರು ಆಕ್ರೋಶ ವ್ಯಕ್ತಪಡಿಸಿ, ರಾಜೇಶ್ ಮನೆ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದ್ದಾರೆ.[ಆರೆಸ್ಸೆಸ್ ಕಾರ್ಯಕರ್ತ ಕಾರ್ತಕ್ ರಾಜ್ ಹಂತಕರ ಬಂಧನ]
ಘಟನಾ ಸ್ಥಳಕ್ಕೆ ಎಸ್ ಪಿ ಅಮಿತ್ ಸಿಂಗ್, ಡಿವೈ ಎಸ್ಪಿ ಉಮೇಶ್ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೂರ್ಯಸಿಟಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.[ಶಿವಾಜಿನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಕಗ್ಗೊಲೆ]
ಮಾರ್ಚ್ 14ರಂದು ಹತ್ಯೆ ಕಿತಗಾನಹಳ್ಳಿ ವಾಸು ಎಂದು ಜನಪ್ರಿಯರಾಗಿದ್ದ ದಲಿತ ಮುಖಂಡ,ಬಿಜೆಪಿಯ ಸಕ್ರಿಯ ಕಾರ್ಯಕರ್ತ ಶ್ರೀನಿವಾಸ್ ಅವರನ್ನು ಹತ್ಯೆ ಮಾಡಲಾಗಿತ್ತು. ಬೊಮ್ಮಸಂದ್ರ ಪುರಸಭೆಯ ಕಾಂಗ್ರೆಸ್ ಸದಸ್ಯೆ ಸರೋಜಮ್ಮ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ಈ ಭಾಗದಲ್ಲಿ ಇದು ಎರಡನೇ ಪ್ರಕರಣವಾಗಿದೆ.