ಪ್ರಿಯಾಂಕ್ ಖರ್ಗೆ ಬಳಿ 50 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ; ಕ್ಯಾ. ಗಣೇಶ್ ಕಾರ್ಣಿಕ್
ಬೆಂಗಳೂರು, ನವೆಂಬರ್ 16: "2016ನೇ ಇಸವಿಯಿಂದ ಬಿಟ್ ಕಾಯಿನ್ ದಂಧೆ ಇತ್ತು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಾಮಾಣಿಕ ಹೇಳಿಕೆ ಕೊಟ್ಟಿದ್ದಾರೆ. ಆಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇತ್ತು, ಯಾಕೆ ವಿಚಾರಣೆ ಮಾಡಲಿಲ್ಲ?," ಎಂದು ಬಿಜೆಪಿ ಮುಖ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಶ್ನಿಸಿದ್ದಾರೆ.
ಬೆಂಗಳೂರು ನಗರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಬಿಜೆಪಿ ಮುಖ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, "ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೂ ಪ್ರಚಾರದ ಹಪಾಹಪಿ ಇದೆ," ಎಂದು ವಾಗ್ದಾಳಿ ನಡೆಸಿದರು.
ಶ್ರೀಕಿ ಎನ್ಕೌಂಟರ್ ಸಾಧ್ಯತೆ: ಕಾಂಗ್ರೆಸ್ ವಕ್ತಾರ
"ಪ್ರಿಯಾಂಕ್ ಖರ್ಗೆ ಬಳಿ 50 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಇದೆಯಂತೆ. ಪ್ರಿಯಾಂಕ್ ಖರ್ಗೆ ಐಟಿ- ಬಿಟಿ ಸಚಿವರಾಗಿದ್ದಾಗ ಬಿಟ್ ಕಾಯಿನ್ ಹಗರಣದಿಂದ ಅವರೂ ಕಪ್ಪು ಹಣ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ," ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆರೋಪಿಸಿದ್ದಾರೆ.
"ಪ್ರಿಯಾಂಕ್ ಖರ್ಗೆ ತಮ್ಮ ಕಪ್ಪು ಹಣವನ್ನು ಬಿಟ್ ಕಾಯಿನ್ನಲ್ಲಿ ತೊಡಗಿಸಿದ್ದಾರೆ ಎಂಬ ಆರೋಪ ಇದೆ. ಶ್ರೀಕೃಷ್ಣನನ್ನು ಪ್ರಿಯಾಂಕ್ ಖರ್ಗೆ ಭೇಟಿ ಮಾಡಿದ್ದರು. ಪ್ರಿಯಾಂಕ್ ಖರ್ಗೆ ಐಟಿ- ಬಿಟಿ ಸಚಿವರಾಗಿದ್ದಾಗ ಶ್ರೀಕಿ ಭೇಟಿ ಮಾಡಿದ್ದಾರೆ. ಶ್ರೀಕಿ ಕರೆಸಿ ಬಿಟ್ ಕಾಯಿನ್ ಬಗ್ಗೆ ಚರ್ಚೆ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಶ್ರೀಕಿ ಭೇಟಿ ಮಾಡಿಲ್ಲ ಅಂತ ಹೇಳಲಿ ನೋಡೋಣ," ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸವಾಲೆಸಿದಿದ್ದಾರೆ.
ಡಿ.ಕೆ.
ಶಿವಕುಮಾರ್ರನ್ನು
ಮೂಲೆಗುಂಪು
ಮಾಡುತ್ತಿರುವ
ಸಿದ್ದರಾಮಯ್ಯ:
ಮಾಜಿ
ಮುಖ್ಯಮಂತ್ರಿ
ಹಾಗೂ
ವಿಪಕ್ಷ
ನಾಯಕ
ಸಿದ್ದರಾಮಯ್ಯನವರು
ಕೆಪಿಸಿಸಿ
ಅಧ್ಯಕ್ಷ
ಡಿ.ಕೆ.
ಶಿವಕುಮಾರ್ರನ್ನು
ಮೂಲೆಗುಂಪು
ಮಾಡುತ್ತಿದ್ದಾರೆ.
ಇದಕ್ಕಾಗಿ
ಬಿಟ್
ಕಾಯಿನ್
ಹಗರಣ
ಕೈಗೆತ್ತಿಕೊಂಡಿದ್ದಾರೆ.
ಸಿದ್ದರಾಮಯ್ಯ
ಯಾವುದೇ
ರಾಜ್ಯ
ವಿಚಾರದ
ಬಗ್ಗೆ
ಮಾತನಾಡುತ್ತಿಲ್ಲ.
ರೈತರ
ಸಮಸ್ಯೆ,
ಬರ,
ಪ್ರವಾಹ
ಬಗ್ಗೆ
ರಾಜ್ಯ
ಸಂಚಾರ
ಮಾಡಲಿಲ್ಲ
ಎಂದು
ಬಿಜೆಪಿ
ವಕ್ತಾರ
ಕ್ಯಾಪ್ಟನ್
ಗಣೇಶ್
ಕಾರ್ಣಿಕ್
ತಿಳಿಸಿದ್ದಾರೆ.
ಪೇಜಾವರ
ಶ್ರೀಗಳ
ವಿರುದ್ಧ
ಹಂಸಲೇಖ
ಟೀಕೆ
ಖಂಡಿಸಿದ
ಕಾರ್ಣಿಕ್
ಸಂಗೀತ
ನಿರ್ದೇಶಕ
ಹಂಸಲೇಖ
ಇಷ್ಟೊಂದು
ಕೀಳುಮಟ್ಟಕ್ಕೆ
ಇಳಿಯುತ್ತಾರೆ
ಅಂದುಕೊಂಡಿರಲಿಲ್ಲ.
ಆ
ಮೂಲಕ
ಹಂಸಲೇಖರಿಗೆ
ಪ್ರಚಾರದ
ಹಪಾಹಪಿ
ಇದೆ
ಎಂಬುವುದು
ತಿಳಿದಿದೆ
ಎಂದು
ಪೇಜಾವರ
ಶ್ರೀಗಳ
ವಿರುದ್ಧ
ಹಂಸಲೇಖ
ಟೀಕೆ
ವಿಚಾರವಾಗಿ
ಬಿಜೆಪಿ
ವಕ್ತಾರ
ಕ್ಯಾಪ್ಟನ್
ಗಣೇಶ್
ಕಾರ್ಣಿಕ್
ಪ್ರತಿಕ್ರಿಯಿಸಿದರು.
ಪೇಜಾವರ ಶ್ರೀಗಳ ವಿರುದ್ಧ ಟೀಕೆ ಮಾಡುವುದು ಕೆಟ್ಟ ಚಾಳಿಯಾಗಿಬಿಟ್ಟಿದೆ. ಇಡೀ ಹಿಂದೂ ಸಮಾಜ ಹಂಸಲೇಖರವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ. ಪೇಜಾವರ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಮೂಲಕ ಹಂಸಲೇಖ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ.
ಪುನೀತ್ ರಾಜ್ಕುಮಾರ್ರಂತಹ ಸೆಲೆಬ್ರಿಟಿ ಎಲೆಮರೆ ಕಾಯಿಯಾಗಿ ಸೇವೆ ಮಾಡಿದ್ದರು. ಪುನೀತ್ ರಾಜ್ಕುಮಾರ್ ಅವರ ದೆಸೆಯಿಂದಾದರೂ ಹಂಸಲೇಖರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
Recommended Video