ಜಕ್ಕೂರು ಮೇಲ್ಸೇತುವೆಯಲ್ಲಿ ಯುವಕರ ಬೈಕ್ ವ್ಹೀಲಿಂಗ್, ಇಬ್ಬರ ಮೇಲೆ ಕೇಸ್
ಬೆಂಗಳೂರು, ಜೂನ್ 7: ಯಲಹಂಕ ಸಮೀಪದ ಜಕ್ಕೂರು ಮೇಲ್ಸೇತುವೆಯಲ್ಲಿ ದ್ವಿಚಕ್ರ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವೈರಲ್ ವಿಡಿಯೋ: ಚಲಿಸುತ್ತಿದ್ದ ಬೈಕ್ ನಲ್ಲಿ ಬೆಂಕಿ, ಪೊಲೀಸರಿಂದಾಗಿ ಉಳಿದ ಜೀವ!
ಮೊಹಮ್ಮದ್ ಅರ್ಷದ್(15), ತಾಹಿಲ್ ರೆಹಮಾನ್(18)ಎಂಬ ಇಬ್ಬರು ಯುವಕರನ್ನು ಬಂಧಿಸಿ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಬೈಕ್ ವ್ಹೀಲಿಂಗ್ ಹೆಚ್ಚಾಗುತ್ತಿದ್ದು ಅದಕ್ಕೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ.ಯುವಕರ ಅಪಾಯಕಾರಿ ಬೈಕ್ ವ್ಹೀಲಿಂಗ್ ಗೆ ಪೊಲೀಸರೇ ಸುಸ್ತಾಗಿದ್ದಾರೆ, ನೈಸ್ ರಸ್ತೆ, ಮಡಿವಾಳ, ತಲಘಟ್ಟಪುರ, ಬೆಂಗಳೂರು ಗ್ರಾಮಾಂತರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಯಲಹಂಕ ಸಂಚಾರ ಪೋಲಿಸ್ ಠಾಣಾ ಸರಹದ್ದಿನ ಜಕ್ಕೂರ ಮೇಲ ಸೇತುವೆಯ ಮೇಲೆ ದ್ವಿ ಚಕ್ರ ವಾಹನದಲ್ಲಿ ವಿಲ್ಹಂಗ್ ಮಾಡುತ್ತಿದ್ದ 1)ಮೂಹ್ಮಮದ ಅರ್ಷದ -15ವರ್ಷ ಮತ್ತು 2)ತಾಹಿಲ್ ರೇಹಮಾನ -18 ರವರ ಮೇಲೆ ಪ್ರಕರಣ ದಾಖಲಿಸಲಾಗಿದೆ. pic.twitter.com/uQK1GuIa9t
— Sarah Fathima (@DcptrNorth) June 7, 2019
ಟಿಕ್ ಟಾಕ್, ಬ್ಲೂವೇಲ್, ಪಬ್ಜಿ, ಕೀಕೀ ಚಾಲೆಂಜ್ ಹೇಗೋ ಈ ಬೈಕ್ ವ್ಹೀಲಿಂಗ್ ಕೂಡ ಒಂದು ರೀತಿಯ ಹವ್ಯಾಸವಾಗಿಬಿಟ್ಟಿದೆ. ದಿನ ಬೆಳಗ್ಗೆ ಸಂಜೆ ಅಂತಿಲ್ಲದೆ ಯುವರು ಬೈಕ್ ತೆಗೆದುಕೊಂಡು ಮನೆಯಿಂದ ಹೊರ ಬೀಳುತ್ತಾರೆ, ಪೋಷಕರಿಗೇನು ಗೊತ್ತು ಮಕ್ಕಳು ಇಂಥಾ ಕೆಲಸ ಮಾಡುತ್ತಾರೆ ಎಂದು. ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ ಕೆಲವರು ಪ್ರಾಣ ಕಳೆದುಕೊಂಡಿರುವ ನಿದರ್ಶನವೂ ಕೂಡ ಇದೆ ನಗರದಲ್ಲಿ ವ್ಹೀಲಿಂಗ್ ಕೊಂಚ ಕಡಿಮೆಯಾಗಿದ್ದರೂ ಕೂಡ ನಗರದ ಹೊರ ಭಾಗದಲ್ಲಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.