ಬಿಎಚ್ಇಎಲ್ ಉದ್ಯೋಗಿ ಅನುಷಾ ಹತ್ಯೆ ಮಾಡಿದ್ದು ಭಾವ!
ಬೆಂಗಳೂರು, ಫೆಬ್ರವರಿ 21 : ಬಿಎಚ್ಇಎಲ್ ಉದ್ಯೋಗಿ ಎಸ್.ಅನುಷಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಭಾವನಿಂದಲೇ ಅನುಷಾ ಹತ್ಯೆ ನಡೆದಿದೆ.
ವಿವೇಕ್ ಅರ್ಗವಾಲ್ ಮತ್ತು ಆತನ ಸ್ನೇಹಿತ ಥಾಯ್ ಹೇಲ್ ಬಂಧಿತ ಆರೋಪಿಗಳು. ಫೆ.15ರಂದು ಕೆಂಗೇರಿಯ ಸನ್ ಸಿಟಿ ಬಳಿಯ ನಿವಾಸದಲ್ಲಿ 32 ವರ್ಷದ ಅನುಷಾರನ್ನು ಹತ್ಯೆ ಮಾಡಲಾಗಿತ್ತು.
ಬಿಎಚ್ಇಎಲ್ ಮಹಿಳಾ ಉದ್ಯೋಗಿಯ ಕೊಲೆ
ಫೆ.15ರಂದು ಎಸ್.ಅನುಷಾ ಎಂದಿನತೆ ಕೆಲಸಕ್ಕೆ ಹೋಗಿದ್ದರು. ಆ ಬಳಿಕ ಅವರು ಯಾರ ಫೋನ್ ಕರೆಯನ್ನೂ ಸ್ವೀಕರಿಸಿರಲಿಲ್ಲ. ಹಲವಾರು ಬಾರಿ ಕರೆ ಮಾಡಿದ್ದ ಫೋಷರು, ಹೆಚ್ಚು ಕೆಲಸ ಇರಬಹುದು ಎಂದು ಸುಮ್ಮನಾಗಿದ್ದರು.
ಬೆಂಗಳೂರಿನ ಹೋಟೆಲ್ನಲ್ಲಿ ಕತ್ತು ಸೀಳಿ ಮಹಿಳೆ ಹತ್ಯೆ
ಆದರೆ, ಸಂಜೆಯಾದರೂ ಕರೆ ಸ್ವೀಕರಿಸಿದ ಕಾರಣ ಅನುಷಾ ಪತಿ ಸನತ್ಗೆ ವಿಚಾರ ತಿಳಿಸಿದ್ದರು. ಸನತ್ ಮನೆಗೆ ಬಂದು ನೋಡಿದಾಗ ಅನುಷಾ ಶವ ಪತ್ತೆಯಾಗಿತ್ತು. ತಕ್ಷಣ ಅವರು ಕೆಂಗೇರಿ ಪೊಲೀಸರಿಗೆ ವಿಷಯ ತಿಳಿಸಿದ್ದರು.
ಆಸ್ತಿ ವಿಚಾರಕ್ಕೆ ಹತ್ಯೆ : ಅನುಷಾ ಮತ್ತು ಸನತ್ ಪರಸ್ಪರ ಪ್ರೀತಿಸುತ್ತಿದ್ದರು. ಒಂದು ವರ್ಷದ ಹಿಂದೆ ಇಬ್ಬರು ವಿವಾಹವಾಗಿದ್ದು ಸನ್ ಸಿಟಿ ಬಳಿ ವಾಸವಾಗಿದ್ದರು. ಬಿಡದಿ ಬಳಿ ಅನುಶಾ ಅವರಿಗೆ ಸೇರಿದ ಆಸ್ತಿಯೊಂದಿತ್ತು. ಈ ವಿಚಾರಕ್ಕಾಗಿ ಅನುಶಾ ಅಕ್ಕ ಮತ್ತು ಭಾವನ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದ ವಿವೇಕ್ ಅಪಾರ ನಷ್ಟ ಅನುಭವಿಸಿದ್ದರು. ಆದ್ದರಿಂದ, ಬಿಡದಿ ಬಳಿ ಇರುವ ಆಸ್ತಿ ನೀಡುವಂತೆ ಅನುಷಾರನ್ನು ಒತ್ತಾಯಿಸುತ್ತಿದ್ದರು. ಆದರೆ, ಅವರು ನಿರಾಕರಿಸಿದ್ದರು.
ಫೆ.15ರಂದು ವಿವೇಕ್ ಆತನ ಸ್ನೇಹಿತ ಥಾಯ್ ಜೊತೆಗೆ ಅನುಷಾ ಅವರ ಮನೆಗೆ ಬಂದು ಆಸ್ತಿ ವಿಚಾರಕ್ಕೆ ಮತ್ತೆ ಗಲಾಟೆ ಮಾಡಿದ್ದರು. ಆಸ್ತಿ ನೀಡಲು ಒಪ್ಪದಿದ್ದಾಗ ಅನುಷಾರನ್ನು ಕೊಲೆ ಮಾಡಿ ಪರಾರಿಯಾಗಿದ್ದರು.