ಮರಳು ಗುಡಿಸುವ ಜಾಲಹಳ್ಳಿ ಪೊಲೀಸ್ ಗೊಂದು ಸಲಾಂ
ಬೆಂಗಳೂರು, ಜು. 21: ರಸ್ತೆ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಪೊಲೀಸ್ ಪೇದೆಗೆ ಇಲಾಖೆ ಸನ್ಮಾನ ಮಾಡಿದೆ. ಈಗ ಜಾಲಹಳ್ಳಿ ಪೊಲೀಸ್ ಪೇದೆಯೊಬ್ಬರು ರಸ್ತೆ ಗುಡಿಸುತ್ತಿರುವ ಚಿತ್ರ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.
ಜಾಲಹಳ್ಳಿಯ ಎಂಇಎಸ್ ರಸ್ತೆ ಮೇಲೆ ಬಿದ್ದಿರುವ ಮರಳನ್ನು ಗುಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಮಂಜುನಾಥ್ ಕಂಯ್ಯಾಡಿ ಎಂಬುವರು ಟ್ವಿಟ್ಟರ್ ನಲ್ಲಿ ಮಂಗಳವಾರ ಸಂಜೆ ಫೋಟೋ ಅಪ್ ಲೋಡ್ ಮಾಡಿದ್ದಾರೆ. ಜತೆಗೆ ಪೊಲೀಸ್ ಪೇದೆಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.[ಗುಂಡಿ ಮುಚ್ಚುವ ಟ್ರಾಫಿಕ್ ಪೊಲೀಸ್ ಪೇದೆಗೆ ಸನ್ಮಾನ]
ವೈಟ್ ಫೀಲ್ಡ್ನ ಸಂಚಾರಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಸತ್ಯನಾರಾಯಣ್. ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿರುವ ಗುಂಡಿಗಳನ್ನು ಕಲ್ಲು, ಮಣ್ಣು ಹಾಕಿ ಮುಚ್ಚುವ ಕೆಲಸ ಮಾಡಿದ್ದರು. ಇವರ ಸೇವೆಯನ್ನುಸಾಮಾಜಿಕ ಜಾಲತಾಣದಲ್ಲಿ ಹಾಕಿದ ಮೇಲೆ ಪ್ರಶಂಸೆಗಳ ಸುರಿಮಳೆಯಾಗಿತ್ತು. ಇದೀಗ ಮರಳೂ ಗುಡಿಸುವ ಕಾಯಕದಲ್ಲಿ ನಿರತರಾಗಿರುವ ಪೊಲೀಸಪ್ಪನಿಗೊಂದು ಸಲಾಂ ಹೇಳಬೇಕಿದೆ.
ಪೊಲೀಸ್ ಇಲಾಖೆ ಇಂಥವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗೌರವಿಸಬೇಕು. ಜತೆಗೆ ನಾಗರಿಕರು ಸಹ ಪೊಲೀಸರಿಗೆ ಸಹಕಾರ ನೀಡಿದರೆ ಸ್ವಸ್ಥ ಸಮಾಜ ನಿರ್ಮಾಣ ದೂರದ ಮಾತೆನಲ್ಲ.
Hat's
off
to
@blrcitytraffic
@CPBlr
Saw
a
Head
Constable
from
Jalahalli
traffic
station
cleaning
sand
on
MES
Road
pic.twitter.com/Yys3YZ2lWe
—
Manjunath
Kanyadi
(@kanyadibjp)
July
21,
2015