ಬೆಂಗಳೂರು: ಗಾಂಜಾ ಸೇವಿಸಿ ಇಬ್ಬರು ಯುವಕರ ಸಾವು
Recommended Video
ಬೆಂಗಳೂರು, ನವೆಂಬರ್ 20: ಮಾದಕ ದ್ರವ್ಯ ಸೇವಿಸಿ ಇಬ್ಬರು ಯುವಕರು ಮೃತಪಟ್ಟು ಒಂಬತ್ತು ಯುವಕರು ಅಸ್ವಸ್ಥರಾಗಿರುವ ಘಟನೆ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ನಗರದ ವಯ್ಯಾಲಿಕಾವಲ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ನಿನ್ನೆ ರಾತ್ರಿ ಪಾರ್ಟಿ ಮಾಡಿದ್ದ 11 ಮಂದಿ ಯುವಕರ ಗುಂಪು ಗಾಂಜಾ ಸೇವನೆ ಮಾಡಿದ್ದಾರೆ. ಇದರ ಜೊತೆ ಇನ್ನೂ ಕೆಲವು ಮಾದಕ ದ್ರವ್ಯ ಸೇವಿಸಿರುವ ಶಂಕೆ ಇದೆ.
ಭಾರತ ಮೂಲದ ಯುಕೆ ಸಂಸದ ಕೀತ್ 6 ತಿಂಗಳು ಸಂಸತ್ತಿನಿಂದ ಸಸ್ಪೆಂಡ್
ಮೃತ ಯುಕವರ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಯುವಕರು ಮಾದಕ ದ್ರವ್ಯ ಸೇವಿಸಿದ್ದು ಖಚಿತವಾಗಿದೆ. ಸಾವಿಗೆ ಕಾರಣವಾದ ಅಂಶದ ಬಗ್ಗೆ ಇನ್ನಷ್ಟು ಪರೀಕ್ಷೆ ನಡೆಯಬೇಕಿದೆ.
ಈ ಯುವಕರ ಗುಂಪು ಗಾಂಜಾ ಸೇವನೆ ಮಾಡುವ ಜೊತೆಗೆ ಇನ್ನೂ ಕೆಲವು ಮಾದಕ ದ್ರವ್ಯ ಸೇವಿಸಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಯುಕವರು ಗಾಂಜಾ ಸೇವಿಸಿದ್ದು ಖಾತ್ರಿಯಾಗಿದ್ದು, ವರದಿಯ ಹೆಚ್ಚಿನ ಪರೀಕ್ಷೆ ನಡೆಯುತ್ತಿದೆ.
ಎಲ್ಲಾ ಹನ್ನೊಂದು ಮಂದಿ ಯುವಕರು ಮಲ್ಲೇಶ್ವರಂ ಬಳಿಯ ಕೋದಂಡ ರಾಮಪುರದವಾಗಿದ್ದಾರೆ. ಅಸ್ವಸ್ಥರಲ್ಲಿ ಒಬ್ಬ ಯುವಕನ ಸ್ಥಿತಿ ಗಂಭೀರವಾಗಿದೆ. ಈ ಯುವಕ ಗಂಭೀರವಾಗಿದ್ದರೂ ಪೋಷಕರು ಪೋಲೀಸರಿಗೆ ಮಾಹಿತಿ ನೀಡರಿಲಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಅಶ್ವತ್ಥನಾರಾಯಣ್ ಪೊಲೀಸರಿಂದ ವರದಿ ಕೇಳಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.