ಅಡ್ಡಾದಿಡ್ಡಿ ವಾಹನ ಚಲಾವಣೆಯಲ್ಲಿ ಬೆಂಗಳೂರು ನಂ.1
ಬೆಂಗಳೂರು, ಜುಲೈ, 21 : ಯಾವಾಗಲೂ ನಂಬರ್ ಒನ್ ಸ್ಥಾನ ಪಡೆಯಲು ಹವಣಿಸುವ ಸಿಲಿಕಾನ್ ಸಿಟಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿ ಸಂಭವಿಸುವ ಅಪಘಾತ ಸಂಖ್ಯೆಯಲ್ಲಿಯೂ ಮೂಂಚೂಣಿ ಸ್ಥಾನ ಪಡೆದುಕೊಂಡಿದೆ.
ನಗರದಲ್ಲಿ
ವಾಹನ
ದಟ್ಟಣೆ
ಏರಿದಂತೆ
ಅಪಘಾತಗಳ
ಸಂಖ್ಯೆಯೂ
ಏರಿಕೆಯಾಗುತ್ತಿದೆ.
ವಾಹನ
ಚಲಾಯಿಸುವಿಕೆಯಲ್ಲಿ
ಜನರು
ಯಾವುದೇ
ಸುರಕ್ಷತಾ
ಕ್ರಮಗಳನ್ನು
ಕೈಗೊಳ್ಳದೆ
ಮನಸ್ಸಿಗೆ
ಬಂದಂತೆ
ಸವಾರಿ
ಮಾಡುವುದು
ಅಪಘಾತ
ಸಂಭವಿಸಲು
ಪ್ರಮುಖ
ಕಾರಣ
ಎಂದು
ನ್ಯಾಷನಲ್
ಕ್ರೈಂ
ರೆಕಾರ್ಡ್ಸ್
ಬ್ಯೂರೋ(NCRB)
ಸಂಸ್ಥೆ
ನಡೆಸಿದ
ಅಧ್ಯಯನದಿಂದ
ತಿಳಿದು
ಬಂದಿದೆ.[ಅಪಘಾತ
ತಡೆಯಲು
ಎಚ್
ಡಿ
ಕ್ಯಾಮರ
ಅಳವಡಿಸಿದ
ಪೊಲೀಸರು]
ವಾಹನ ಚಲಾವಣೆ ವೇಳೆ ಸವಾರರು ಮೊಬೈಲ್ ಬಳಕೆ ಮಾಡುವುದು, ಮದ್ಯ ಸೇವಿಸಿರುವುದು, ಟ್ರಾಫಿಕ್ ಸಿಗ್ನಲ್ ನಲ್ಲಿ ಶಿಸ್ತಿನ ಕ್ರಮ ಅನುಸರಿಸದಿರುವುದು, ಅತಿ ವೇಗವಾಗಿ, ತಪ್ಪು ಮಾರ್ಗದಲ್ಲಿ ವಾಹನ ಓಡಿಸುವುದು, ಒನ್ ವೇ ಯಲ್ಲಿ ವಾಹನಗಳ ನಡುವೆ ಅಂತರ ಕಾಯ್ದುಕೊಳ್ಳದಿರುವುದು ಇವೆಲ್ಲವೂ ಅಪಘಾತ ಹೆಚ್ಚಳಕ್ಕೆ ಮುಖ್ಯ ಕಾರಣ ಎಂದು ನಗರ ಟ್ರಾಫಿಕ್ ಪೊಲೀಸ್ ಹೇಳಿದ್ದಾರೆ.
ಅಪಘಾತಗಳ ವಿವರ ಇಂತಿದೆ:
2014ರಲ್ಲಿ ಸುಮಾರು 90% ನಷ್ಟು ಅಂದರೆ ಸುಮಾರು 5,004 ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 4,004 ಮಂದಿ ವೇಗವಾಗಿ ವಾಹನ ಓಡಿಸಿ ಅಪಘಾತಕ್ಕೆ ಒಳಗಾದವರು. ಇವರಲ್ಲಿ 626 ಮಂದಿ ಮೃತಪಟ್ಟಿದ್ದು, 2,707 ಮಂದಿ ನೋವಿನಿಂದ ನರಳುತ್ತಿದ್ದಾರೆ. ಅಪಘಾತಗಳ ಸರಣಿಯಲ್ಲಿ ಬೆಂಗಳೂರು ನಗರ ಪ್ರಥಮ ಸ್ಥಾನ ಪಡೆದುಕೊಂಡರೆ, ಕಲ್ಕತ್ತಾ 2ನೇ ಸ್ಥಾನದಲ್ಲಿದೆ.
ನಗರದ ರಾಷ್ಟ್ರೀಯ ಹೆದ್ದಾರಿಗಳಾದ ಬಳ್ಳಾರಿ (122) ಹೊಸೂರು (107) ಹಳೆ ಮದ್ರಾಸ್ ರಸ್ತೆ (104) ಗಳಲ್ಲಿ ಅಪಘಾತಗಳು ಹೆಚ್ಚು ಸಂಭವಿಸಲಿದ್ದು ಅನುಕ್ರಮವಾಗಿ 1ನೇ, 2ನೇ,3ನೇ ಸ್ಥಾನವನ್ನು ಪಡೆದುಕೊಂಡಿದೆ.
- | ಅಪಘಾತಗಳ ಸಂಖ್ಯೆ | ಸಾವಿನ ಸಂಖ್ಯೆ | ಗಾಯಾಳುಗಳ ಸಂಖ್ಯೆ |
2014 | 5,004 | 729 | 4,098 |
ರಾಷ್ಟ್ರೀಯ ಹೆದ್ದಾರಿ | 847 | 169 | 1,194 |
ರಾಜ್ಯ ಹೆದ್ದಾರಿ | 266 | 34 | 261 |
ಎಕ್ಸ್ ಪ್ರೆಸ್ ದಾರಿ |
24 | 4 | 6 |