ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈತನ ಮಿತ್ರ ಯಾರು? ಎಂದು ಪ್ರಶ್ನೆ ಕೇಳಿದ ಶಿಕ್ಷಕನಿಗೆ ಅಮಾನತ್ತಿನ ಶಿಕ್ಷೆ!

|
Google Oneindia Kannada News

ಬೆಂಗಳೂರು, ಮಾರ್ಚ್ 29: ರೈತನ ಮಿತ್ರ ಯಾರು? ಎಂದು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿದ್ದ ಶಿಕ್ಷಕರೊಬ್ಬರಿಗೆ ಅಮಾನತ್ತಿನ ಶಿಕ್ಷೆ ನೀಡಲಾಗಿದೆ!

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೌದು, ಆದರೆ ಪ್ರಶ್ನೆ ಕೇಳಿದ್ದಕ್ಕೆ ಶಿಕ್ಷೆಯಲ್ಲ, ಪ್ರಶ್ನೆಗೆ ರಾಜಕೀಯ ವ್ಯಕ್ತಿಗಳ ಉತ್ತರದ ಆಯ್ಕೆಗಳನ್ನು ನೀಡಿದ್ದಕ್ಕೆ. ಎಂಟನೇ ತರಗತಿ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ ರೂಪಿಸಿದ್ದ ಶಿಕ್ಷಕರೊಬ್ಬರು, ರೈತನ ಮಿತ್ರನಾರು? ಎಂದು ಪ್ರಶ್ನೆ ಕೇಳಿ, ಕುಮಾರಸ್ವಾಮಿ, ಎರೆಹುಳು, ಯಡಿಯೂರಪ್ಪ ಎಂದು ಉತ್ತರಗಳ ಆಯ್ಕೆ ನೀಡಿದ್ದರು.

ಮದುವೆಯಾದ ಮರುಘಳಿಗೆ ಗಂಡನಿಂದ ಹೆಂಡತಿಯ ಕನ್ಯತ್ವ ಪರೀಕ್ಷೆ ಮದುವೆಯಾದ ಮರುಘಳಿಗೆ ಗಂಡನಿಂದ ಹೆಂಡತಿಯ ಕನ್ಯತ್ವ ಪರೀಕ್ಷೆ

ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಪತ್ರಿಕೆಯ ಚಿತ್ರ ಹರಿದಾಡಿ ಭಾರಿ ವೈರಲ್ ಆಗಿತ್ತು. ಈ ಪ್ರಶ್ನೆ ಮತ್ತು ನೀಡಿರುವ ಉತ್ತರಗಳ ಆಯ್ಕೆಯನ್ನು ಸಾಮಾಜಿಕ ಜಾಲತಾಣದ ಮಂದಿ ಬಹುವಾಗಿ ಮೆಚ್ಚಿಕೊಂಡಿದ್ದರು, ಆದರೆ ಇದು ಶಾಲೆಯ ಆಡಳಿತ ಮಂಡಳಿಗೆ ಇಷ್ಟವಾಗಲಿಲ್ಲ, ಹಾಗಾಗಿ ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ.

Bengaluru teacher sacked for giving Kumaraswamy, Yeddyurappa as answer options

ನಗರದ ಮೌಂಟ್ ಕಾರ್ಮೆಲ್ ಪ್ರೌಢಶಾಲೆಯ ಶಿಕ್ಷಕರು ಹೀಗೊಂದು ವ್ಯಂಗ್ಯದ ಪ್ರಶ್ನೆಯನ್ನು ಕೇಳಿದ್ದರು, ಆದರೆ ಇದರಿಂದ ಅನವಶ್ಯಕವಾಗಿ ಸಿಟ್ಟಿಗೆದ್ದ ಶಾಲಾ ಪ್ರಾಂಶುಪಾಲರು, ಅವರನ್ನು ಕೆಲಸ ವಜಾ ಮಾಡಿರುವುದಾಗಿ ಮಾಧ್ಯಮಗಳಿಗೆ ಹೇಳಿದ್ದಾರೆ.

ಮೆಜೆಸ್ಟಿಕ್ ನಲ್ಲಿ ಕೆಲವು ನಿರ್ಗಮನ ಅಂಕಣಗಳ ಬದಲಾವಣೆಮೆಜೆಸ್ಟಿಕ್ ನಲ್ಲಿ ಕೆಲವು ನಿರ್ಗಮನ ಅಂಕಣಗಳ ಬದಲಾವಣೆ

ಯಡಿಯೂರಪ್ಪ ಅವರನ್ನು ರೈತರ ಬಂಧು ಎನ್ನಲಾಗುತ್ತದೆ, ಕುಮಾರಸ್ವಾಮಿ ಅವರನ್ನು ಸಹ ರೈತರ ಬಂಧು ಎಂದು ಕರೆಯಲಾಗುತ್ತದೆ ಹಾಗಾಗಿ ವ್ಯಂಗ್ಯವಾಗಿ ಆ ಶಿಕ್ಷಕರು ಹೀಗೆ ಪ್ರಶ್ನೆ ಕೇಳಿದ್ದಾರೆ. ಅಮಾನತಿಗೆ ಒಳಗಾದ ಶಿಕ್ಷಕರ ಹೆಸರು ಗೊತ್ತಾಗಿಲ್ಲ.

English summary
Bengaluru Mount Carmel teacher dismissed from the job for using Kumaraswamy and Yeddyurappa names as answer option for students question paper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X