ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ ಹೊತ್ತಿ ಉರಿದೊಡೆ ಅಡುಗೆ ಮಾಡಿದರೆ ಎಂತಯ್ಯ!

|
Google Oneindia Kannada News

ಬೆಂಗಳೂರು, ಜು. 20: ಇನ್ನು ಅಡಿಗೆ ಮಾಡಲು ಗ್ಯಾಸ್, ಕಟ್ಟಿಗೆ, ಸ್ಟೌವ್ ಯಾವುದರ ಅಗತ್ಯವಿಲ್ಲ. ಕಸ ತಂದು ಒಲೆಗೆ ಹಾಕಿದರಾಯ್ತು. ಅಷ್ಟೇ ಏಕೆ ಬೆಂಕಿ ಹಚ್ಚುವ ಕೆಲಸವೂ ಇಲ್ಲ, ತನ್ನಿಂದ ತಾನೇ ಅದು ಹೊತ್ತಿಕೊಳ್ಳುತ್ತದೆ!

ಯಾಕೆ , ಆಶ್ಚರ್ಯವಾಗುತ್ತಿದೆಯಾ? ಇದು ಯಾವ ಹೊಸ ಸಂಶೋಧನೆಯಲ್ಲ. ಪರಿಸರ ಮಾಲಿನ್ಯದ ಪ್ರತೀಕ. ವರ್ತೂರು ಕೆರೆ, ಬೆಳ್ಳಂದೂರು ಕೆರೆಯಲ್ಲಿ ರಾಸಾಯನಿಕಗಳಿಂದ ಕಾಣಿಸಿಕೊಂಡಿದ್ದ ಬೆಂಕಿಯ ರೀತಿಯದ್ದೇ ಪ್ರಕರಣ ಆನೆಕಲ್ ನ ಲಕ್ಷ್ಮೀಪುರದ ಕಲ್ಲು ಕ್ವಾರಿಯೊಂದರ ಬಳಿ ಕಂಡುಬಂದಿದೆ.[ಒಡಲಲಿ ವಿಷ ತುಂಬಿಕೊಂಡ ಬೆಳ್ಳಂದೂರು ಕೆರೆಯ ಕಥೆ ವ್ಯಥೆ]

bengaluru

ನೀರಿನಲ್ಲಿಯೂ ಬೆಂಕಿ ಉತ್ಪನ್ನವಾಗುತ್ತಿದೆ. ರಾಸಾಯನಿಕ ಕ್ರಿಯೆಯಿಂದ ವಿಷಾನಿಲ ಉತ್ಪತ್ತಿಯಾಗಿ, ಅದರಿಂದ ನೀರಿಲ್ಲೇ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದರೆ ಚಿಂದಿ ಆಯುವ ಕುಟುಂಬಗಳು ಇದರಲ್ಲೇ ಅಡುಗೆ ಮಾಡುತ್ತಿದ್ದಾರೆ. [ನೊರೆ ಭಯಾನಕತೆ ತೋರಿಸುವ ವಿಡಿಯೋ ನೋಡಿ]

ಕಳೆದ ನಾಲ್ಕು ದಿನಗಳಿಂದ ಬೆಂಕಿ ಕಾಣಿಸಿಕೊಳ್ಳುತ್ತಿದ್ದರು ಯಾವ ಅಧಿಕಾರಿಗಳು ಇನ್ನು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಮಾಹಿತಿ ಕಲೆಹಾಕಿ ತಕ್ಷಣ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ಶಾಸಕ ಎಂ ಕೃಷ್ಣಪ್ಪ ತಿಳಿಸಿದ್ದಾರೆ.

ಹಿಂದೆ ಬಿಬಿಎಂಪಿಯವರು ಈ ಜಾಗದಲ್ಲಿ ಕಸ ತಂದು ಸುರಿಯುತ್ತಿದ್ದರು. ಅದರ ಪರಿಣಾಮ ಬಯೋಗ್ಯಾಸ್ ಉತ್ಪತ್ತಿಯಾಗುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಸಮಸ್ಯೆಯ ಮೂಲ ಕಂಡುಹಿಡಿದು ತಕ್ಷಣ ಪರಿಹಾರ ನೀಡಬೇಕಿದೆ.

English summary
Bengaluru: In a shocking incident, Now fire find in a quarry near Anekal. Methane that had accumulated on the highly polluted water body combusted spontaneously. The BBMP collecting the information about the Flame.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X