ಅತ್ತ ಸಾವಿರಾರು ಬೆಂಕಿ ದುರಂತ ಘಟನೆ; ಇತ್ತ ಅಗ್ನಿಶಾಮಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
ಬೆಂಗಳೂರು, ಏ. 12: ಕಳೆದ ಐದು ವರ್ಷದಲ್ಲಿ ರಾಜ್ಯಾದ್ಯಂತ ಐದು ಸಾವಿರಕ್ಕೂ ಹೆಚ್ಚು ಅಗ್ನಿ ಅವಘಡ ಘಟನೆಗಳು ವರದಿಯಾಗಿವೆ. ಒಂದು ವರದಿ ಪ್ರಕಾರ 2017 ಜನವರಿ 1ರಿಂದ 2022 ಮಾರ್ಚ್ 10 ರವರೆಗೆ 5144 ಕಟ್ಟಡಗಳಿಗೆ ಬೆಂಕಿ ತಗುಲಿದ ಘಟನೆಗಳು ಸಂಭವಿಸಿವೆ. ಇವುಗಳ ಪೈಕಿ ಬೆಂಗಳೂರು ನಗರವೊಂದರಲ್ಲೇ ಮೂರು ಸಾವಿರ ಸಂಖ್ಯೆ ಸಮೀಪದಷ್ಟು ಬೆಂಕಿ ದುರಂತ ಘಟನೆಗಳು ನಡೆದಿವೆ ಎನ್ನಲಾಗಿದೆ. ಅಂದರೆ ಬೆಂಗಳೂರಿನಲ್ಲಿ ದಿನವೊಂದಕ್ಕೆ ಸರಾಸರಿ ಕನಿಷ್ಠ ಒಂದು ಕಟ್ಟಡವಾದರೂ ಬೆಂಕಿ ದುರಂತಕ್ಕೆ ಈಡಾಗಿರುವುದು ತಿಳಿದುಬರುತ್ತದೆ.
ಇಷ್ಟೊಂದು ಪ್ರಮಾಣದ ದುರಂತ ಘಟನೆಗಳನ್ನು ನಿಭಾಯಿಸುವಷ್ಟು ಬಲವಾಗಿದೆಯಾ ಅಗ್ನಿಶಾಮಕ ಇಲಾಖೆ ಎಂದು ಅಚ್ಚರಿ ಎನಿಸಬಹುದು. ಈ ಘಟನೆಗಳನ್ನ ಇಲಾಖೆ ಸಮರ್ಥವಾಗಿ ಎದುರಿಸಿರುವುದು ಹೌದು. ಸಿಬ್ಬಂದಿ ಕೊರತೆ ನಡುವೆಯೂ ಇಲಾಖೆ ಈ ಸಾವಿರಾರು ಬೆಂಕಿ ಅವಘಡ ಘಟನೆಗಳನ್ನುನಿಭಾಯಿಸಿ ಹಲವು ಜನರ ಜೀವ ಉಳಿಸಿದೆ. ಸಿಬ್ಬಂದಿ ಕೊರತೆ ಗಣನೀಯವಾಗಿ ಕಾಡುತ್ತಿದ್ದರೂ ಇಲಾಖೆ ಪಡುತ್ತಿರುವ ಶ್ರಮ ಪ್ರಶಂಸನೀಯ.
Amarnath Yatra 2022: ಅಮರನಾಥ ಯಾತ್ರೆಗೆ ತೆರಳಲು ಟಿಕೆಟ್ ಬುಕ್ಕಿಂಗ್ ಮಾಡುವುದು ಹೇಗೆ?
2678
ಸಿಬ್ಬಂದಿ
ಕೊರತೆ:
ಈ
ಇಲಾಖೆಯಲ್ಲಿ
ಶೇ.
38ರಷ್ಟು
ಸಿಬ್ಬಂದಿ
ಕೊರತೆ
ಇರುವುದು
ಕಂಡುಬಂದಿದೆ.
ಇಲಾಖೆಯಲ್ಲಿ
ಇರುವ
7086
ವಿವಿಧ
ಒಟ್ಟು
ಹುದ್ದೆಗಳ
ಪೈಕಿ
2678
ಹುದ್ದೆಗಳು
ನೇಮಕವಾಗದೇ
ಹಾಗೇ
ಉಳಿದಿವೆ.
ಇವುಗಳಲ್ಲಿ
ಬಹುತೇಕ
ಮುಕ್ಕಾಲು
ಭಾಗದಷ್ಟು
ಕೆಲಸಗಳು
ಫೈರ್
ಫೈಟರ್ಗಳದ್ದಾಗಿವೆ.
ಎಷ್ಟೆಷ್ಟು
ಹುದ್ದೆಗಳು
ನೇಮಕವಾಗಬೇಕಿದೆ?
ಫೈರ್
ಸ್ಟೇಷನ್
ಆಫೀಸರ್ಸ್:
104
ಹೆಚ್ಚುವರಿ
ಫೈರ್
ಸ್ಟೇಷನ್
ಆಫೀರ್ಸ್:
123
ಚೀಫ್
ಫೈರ್
ಫೈಟರ್ಸ್:
119
ವಾಹನ
ಚಾಲಕರು:
348
ಇನ್ನೊಂದು
ತಿಂಗಳಲ್ಲಿ
ಫೈರ್
ಫೈಟರ್ಗಳ
ನೇಮಕಾತಿ:
ಟೈಮ್
ಆಫ್
ಇಂಡಿಯಾದಲ್ಲಿ
ಪ್ರಕಟವಾಗಿರುವ
ವರದಿಯಲ್ಲಿ
ರಾಜ್ಯ
ಅಗ್ನಿ
ಮತ್ತು
ತುರ್ತು
ಸೇವೆ
ಇಲಾಖೆ
ನಿರ್ದೇಶಕ
ಕೆ
ಶಿವಕುಮಾಮಾರ್
ಅವರು
ಇನ್ನೊಂದು
ತಿಂಗಳಲ್ಲಿ
1567
ಫೈರ್
ಫೈಟರ್
ಹುದ್ದೆಗಳನ್ನು
ನೇಮಕಾತಿ
ಮಾಡುವ
ಪ್ರಕ್ರಿಯೆ
ಪೂರ್ಣಗೊಳಿಸುತ್ತೇವೆ
ಎಂದು
ಹೇಳಿದ್ದಾರೆ.
ಖಾಲಿ
ಇರುವ
ಇನ್ನುಳಿದ
ಹುದ್ದೆಗಳು
ಬೇರೆ
ಬೇರೆ
ವಿಭಾಗಗಳದ್ದು
ಎಂದು
ಹೇಳಲಾಗಿದೆ.
ಬೆಂಗಳೂರಿನಲ್ಲಿ
ದಿನವೊಂದಕ್ಕೆ
ಏಳೆಂಟು
ಪ್ರಕರಣಗಳು:
ಬೆಂಗಳೂರಿನಲ್ಲಿ
ಮೊದಲೇ
ಹೇಳಿದಂತೆ
ಸರಾಸರಿಯಾಗಿ
ದಿನವೊಂದಕ್ಕೆ
ಕನಿಷ್ಠ
ಒಂದಾದರೂ
ಅಗ್ನಿದುರಂತ
ಘಟನೆ
ನಡೆಯುತ್ತದೆ.
ಇದಷ್ಟೇ
ಅಲ್ಲ,
ಸ್ಕ್ರಾಪ್
ಯಾರ್ಡ್,
ಕಾರ್ಖಾನೆ,
ಕಸದ
ಗುಂಡಿ,
ಗ್ಯಾರೇಜ್
ಇತ್ಯಾದಿಗಳಲ್ಲಿ
ಯಾವುದಾದರೂ
ಅವಘಡ
ಘಟನೆಗಳು
ಬೆಂಗಳೂರಿನಲ್ಲಿ
ನಿತ್ಯ
ಇರುತ್ತವಂತೆ.
ಕೆ
ಶಿವಕುಮಾರ್
ಅವರು
ಬೆಂಗಳೂರಿನಲ್ಲಿ
ಇಂಥ
ಪ್ರಕರಣಗಳು
ದಿನವೊಂದಕ್ಕೆ
ಏಳೆಂಟಾದರೂ
ಎದುರಾಗುತ್ತವಂತೆ.
ಸದ್ಯ
ಹೋಂ
ಗಾರ್ಡ್ಗಳ
ಸೇವೆ
ಬಳಕೆ:
ಸಿಬ್ಬಂದಿ
ಕೊರತೆ
ನಡುವೆಯೂ
ಇಷ್ಟೊಂದು
ಪ್ರಮಾಣದ
ಅಗ್ನಿ
ದುರಂತ
ಘಟನೆಗಳನ್ನ
ಅಗ್ನಿಶಾಮಕ
ಸಿಬ್ಬಂದಿ
ಹೇಗೆ
ನಿಭಾಯಿಸುತ್ತದೆ
ಎಂದು
ಅಚ್ಚರಿ
ಎನಿಸಿರಬಹುದು.
ಕಳೆದ
ಕೆಲ
ವರ್ಷಗಳಿಂದ
ಇಲಾಖೆಯು
ಒಂದು
ಸಾವಿರಕ್ಕೂ
ಹೆಚ್ಚು
ಹೋಂ
ಗಾರ್ಡ್
ಸಿಬ್ಬಂದಿಯನ್ನು
ಬೆಂಕಿ
ನಂದಿಸುವ
ಕಾರ್ಯದಲ್ಲಿ
ನೆರವಾಗಿ
ಬಳಸಿಕೊಂಡಿದೆ.
ದುರಂತಗಳ
ಸಂಖ್ಯೆ:
ಕಳೆದ
5
ವರ್ಷದಲ್ಲಿ
ರಾಜ್ಯದಲ್ಲಿ
ಸಂಭವಿಸಿದ
ಅಗ್ನಿದುರಂತ
ಘಟನೆಗಳು:
5144
ಬೆಂಗಳೂರಿನಲ್ಲಿ
ಸಂಭವಿಸಿದ
ಬೆಂಕಿದುರಂತ
ಘಟನೆ:
2847
ಅಗ್ನಿ
ದುರಂತಕ್ಕೆ
ಪ್ರಮುಖ
ಕಾರಣಗಳೇನು?:
ಬೆಂಗಳೂರಿನಲ್ಲಿ
ಸಂಭವಿಸಿದ
2847
ಅಗ್ನಿ
ಅವಘಡ
ಘಟನೆಗಳಿಗೆ
ಪ್ರಮುಖ
ಕಾರಣವಾಗಿರುವುದು
ಶಾರ್ಟ್
ಸರ್ಕ್ಯೂಟ್
ಅಂತೆ.
ಶೇ.
66
ಪ್ರಕರಣಗಳಲ್ಲಿ
ಶಾರ್ಟ್
ಸರ್ಕ್ಯೂಟ್
ಕಾರಣ
ಎನ್ನಲಾಗಿದೆ.
ಗ್ಯಾಸ್
ಸೋರಿಕೆ
ಎರಡನೇ
ಪ್ರಮುಖ
ಕಾರಣವಾಗಿದೆ.
ಹಾಗೆಯೇ,
ಸಿಗರೇಟ್,
ಆಯಿಲ್
ಸೋರಿಕೆ,
ರಾಸಾಯನಿಕ
ಸೋರಿಕೆಯಿಂದಲೂ
ಹತ್ತಾರು
ಬೆಂಕಿ
ದುರಂತಗಳು
ಸಂಭವಿಸಿರುವುದು
ಇಲಾಖೆ
ನೀಡಿದ
ಮಾಹಿತಿಯಿಂದ
ತಿಳಿದುಬಂದಿದೆ.
(ಒನ್ಇಂಡಿಯಾ ಸುದ್ದಿ)