ಪತ್ರಿಕಾರಂಗದ ಸಾಧಕರಿಗೆ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ
ಬೆಂಗಳೂರು, ಡಿಸೆಂಬರ್ 31 : ಹೊಸ ವರ್ಷದ ಮುನ್ನಾದಿನ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾರಂಗದಲ್ಲಿ ಫಲವತ್ತಾದ ಕೃಷಿ ಮಾಡಿದ ಸಾಧಕರನ್ನು ಗುರುತಿಸಿ ಶನಿವಾರ ಅವರಿಗೆ ಪ್ರಶಸ್ತಿ ವಿತರಿಸಲಾಯಿತು.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಡೈರಿ ಬಿಡುಗಡೆ ಸಮಾರಂಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ವಸತಿ ಸಚಿವ ಎಂ.ಕೃಷ್ಣಪ್ಪ ಹಾಗೂ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಉಪಸ್ಥಿತರಿದ್ದು ಡೈರಿ ಬಿಡುಗಡೆ ಮಾಡಿದರು.
ಸನ್ಮಾನಿತರ ವಿವರಗಳು
ಜೀವಮಾನ ಸಾಧಕಿ : ಸಿ.ಜಿ.ಮಂಜುಳ, ಹಿರಿಯ ಪತ್ರಕರ್ತೆ
ಕೃಷಿ ಸಾಧಕಿ : ಜಯಮ್ಮ ನಿಂಗನಗೌಡ ಚನ್ನಗೌಡರ್, ಕೃಷಿ ತಜ್ಞೆ, ಹಾವೇರಿ ಜಿಲ್ಲೆ
2016ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ಜೀವಮಾನ ಸಾಧಕ ಪ್ರಶಸ್ತಿ ವಿಜೇತರು
* ಅಬ್ದುಲ್ ಹಫೀಜ್, ಹಿರಿಯ ಪತ್ರಿಕಾ ಛಾಯಾಗ್ರಾಹಕರು
* ಹುಣಸವಾಡಿ ರಾಜನ್, ಹಿರಿಯ ಪತ್ರಕರ್ತರು
* ಮನೋಹರ ಯಡವಟ್ಟಿ, ಹಿರಿಯ ಪತ್ರಕರ್ತರು
* ಇ.ವಿ. ಸತ್ಯನಾರಾಯಣ, ಹಿರಿಯ ಪತ್ರಕರ್ತರು
* ಶಿವಸುಬ್ರಹ್ಮಣ್ಯ. ಕೆ, ಹಿರಿಯ ಪತ್ರಕರ್ತರು
* ಎಸ್.ಚಂದ್ರಶೇಖರ್ ರಾವ್(ಸಾ.ಚ), ಹಿರಿಯ ಪತ್ರಕರ್ತರು
* ಕೃಷ್ಣಪ್ಪ ಆರ್. ಪಾವಗಡ, ಹಿರಿಯ ಪತ್ರಕರ್ತರು
* ವಿಲಾಸ ಮೇಲಗಿರಿ, ವಿಶೇಷ ವರದಿಗಾರರು
* ಆರ್.ಕೆ. ಜೋಶಿ, ಹಿರಿಯ ಪತ್ರಕರ್ತರು
* ಸುರೇಶ್ಚಂದ್ರ ಎಲ್.ಎಚ್, ಹಿರಿಯ ಪತ್ರರ್ತರು
* ಮಹಮ್ಮದ್ ಸಿದ್ದಿಕ್ ಅಲ್ದೂರಿ, ಹಿರಿಯ ಪತ್ರಕರ್ತರು
* ಬಿ.ಎಸ್.ಸತ್ಯನಾರಾಯಣ, ಹಿರಿಯ ಪತ್ರಕರ್ತರು
* ಎಂ.ಕೆ. ಮಧುಸೂದನ್, ಹಿರಿಯ ಪತ್ರಕರ್ತರು
* ಎಲ್. ಪ್ರಕಾಶ್, ಹಿರಿಯ ಪತ್ರಕರ್ತರು
* ಎಸ್. ರವಿಕುಮಾರ್, ಹಿರಿಯ ಪತ್ರಕರ್ತರು
* ಅಂಶಿ ಪ್ರಸನ್ನಕುಮಾರ್, ಹಿರಿಯ ಪತ್ರಕರ್ತರು
* ಬಿ.ಎಂ. ಹನೀಫ್, ಹಿರಿಯ ಪತ್ರಕರ್ತರು
* ಅಬ್ದುಲ್ ಹಕೀಂ, ಹಿರಿಯ ಪತ್ರಕರ್ತರು
* ರವಿಕುಮಾರ್.ಪಿ, ಹಿರಿಯ ಪತ್ರಕರ್ತರು