ಬೆಳ್ಳಂಬೆಳಗ್ಗೆ ಫೈರಿಂಗ್: ಸ್ಲಂ ಭರತನ ಸಹಚರ ಸಿದ್ದನಿಗೆ ಪೊಲೀಸರ ಗುಂಡೇಟು
ಬೆಂಗಳೂರು, ಮಾರ್ಚ್ 11: ಇಂದು ಬೆಳ್ಳಂಬೆಳಗ್ಗೆಯೇ ಬೆಂಗಳೂರಿನಲ್ಲಿ ಪೊಲೀಸರ ಗುಂಡೇಟಿನ ಶಬ್ದ ಕೇಳಿಬಂದಿದೆ. ಕುಖ್ಯಾತ ರೌಡಿಶೀಟರ್ ಸಿದ್ದನ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಬಗಲಗುಂಟೆ ನಿವಾಸಿ ಸಿದ್ದರಾಜು ಅಲಿಯಾಸ್ ಸಿದ್ದನ ಮೇಲೆ ಬ್ಯಾಡರಹಳ್ಳಿ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಘಟನೆಯ ಹಿನ್ನೆಲೆ: ರೌಡಿ ಶೀಟರ್ ಸಿದ್ದನ ವಿರುದ್ಧ ಸುಮಾರು 15 ಕೇಸ್ ಗಳು ದಾಖಲಾಗಿವೆ. ವಿವಿಧ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆಗಿರುವ ಸಿದ್ದ ಅಡಗಿ ಕುಳಿತಿದ್ದ ಜಾಗದ ಬಗ್ಗೆ ಇಂದು ಮುಂಜಾನೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ರೌಡಿ ಶೀಟರ್ ಸ್ಲಂ ಭರತ್ ಸಾವು
ಕೂಡಲೆ ಸಿದ್ದನನ್ನು ಬಂಧಿಸಲು ಪೊಲೀಸರು ಸ್ಪಾಟ್ ಗೆ ತೆರಳಿದ್ದಾರೆ. ಆಗ ಬ್ಯಾಡರಹಳ್ಳಿ ಪೇದೆ ಹನುಮಂತರಾಜು ಮೇಲೆ ಸಿದ್ದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ರಾಜೀವ್, ಸಿದ್ದನ ಬಲಗಾಲಿಗೆ ಬುಲೆಟ್ ಹಾರಿಸಿದ್ದಾರೆ.
ಸದ್ಯ ಸಿದ್ದ ಮತ್ತು ಪೇದೆ ಹನುಮಂತರಾಜು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಸಲಿಗೆ, ಈ ರೌಡಿಶೀಟರ್ ಸಿದ್ದ ಸ್ಲಂ ಭರತನ ಸಹಚರ. ಕಳೆದ ತಿಂಗಳಷ್ಟೇ ಪೊಲೀಸ್ ಎನ್ ಕೌಂಟರ್ ನಲ್ಲಿ ಸ್ಲಂ ಭರತ ಮೃತಪಟ್ಟಿದ್ದ. ಇದೀಗ ಸ್ಲಂ ಭರತನ ಸಹಚರ ಸಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.