ಬೆಂಗಳೂರು: ನಮ್ಮ ಮೆಟ್ರೋ ಸೇವೆ ಅವಧಿ ವಿಸ್ತರಣೆ
ಬೆಂಗಳೂರು, ಸೆಪ್ಟೆಂಬರ್ 17: ಬೆಂಗಳೂರು ನಮ್ಮ ಮೆಟ್ರೋ ರೈಲು ಸೇವೆಯ ದೈನಂದಿನ ಅವಧಿಯನ್ನು ಬಿಎಂಆರ್ಸಿಎಲ್ ವಿಸ್ತರಿಸಿದೆ. ಮೆಟ್ರೋ ರೈಲು ಓಡಾಟದ ಅವಧಿಯನ್ನು ಬೆಳಗ್ಗೆ 6 ರಿಂದ ರಾತ್ರಿ 9.30 ರವರೆಗೆ ವಿಸ್ತರಣೆ ಮಾಡಲಾಗಿದೆ.
ಈ ಮೊದಲು ಮೇಟ್ರೋ ರೈಲು ಸಂಚಾರದ ಅವಧಿ ಬೆಳಗ್ಗೆ 7 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಮಾತ್ರ ಇತ್ತು. ಕೊರೊನಾ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಬಳಿಕ ಜನಜೀವನ ಅಸ್ತವ್ಯಸ್ತವಾಗಿತ್ತು. ಹೀಗಾಗಿ ಲಾಕ್ಡೌನ್ ವಿಧಿಸಿದ್ದರಿಂದ ಹಾಗೂ ಆ ನಂತರವೂ ಮೆಟ್ರೋ ಸೇವೆ ಸಮಯದಲ್ಲಿ ವ್ಯತ್ಯಾಸ ಆಗಿತ್ತು.
ಇದೀಗ ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಇಳಿಕೆ ಆಗುತ್ತಿದ್ದು, ಜನಜೀವನ ಬಹುತೇಕ ಸಹಜ ಸ್ಥಿತಿಗೆ ಮರಳುವ ಹಂತದಲ್ಲಿದೆ. ಹೀಗಾಗಿ, ಜನರ ಪ್ರಯಾಣಕ್ಕೆ ಅನುಕೂಲವಾಗುವಂತೆ ಮೆಟ್ರೋ ಕಾರ್ಯನಿರ್ವಹಿಸುವ ಅವಧಿಯನ್ನು ಪರಿಷ್ಕರಿಸಲಾಗಿದೆ.
ಮೆಟ್ರೋ
ಸೇವೆ
ಅವಧಿ
ವಿಸ್ತರಿಸುವಂತೆ
ಸುರೇಶ್ಕುಮಾರ್
ಪತ್ರ
ನಮ್ಮ
ಮೆಟ್ರೋ
ಸೇವಾ
ಅವಧಿಯನ್ನು
ವಿಸ್ತರಿಸುವಂತೆ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿಗೆ
ಬೆಂಗಳೂರಿನ
ರಾಜಾಜಿನಗರ
ಬಿಜೆಪಿ
ಶಾಸಕ,
ಮಾಜಿ
ಸಚಿವ
ಸುರೇಶ್ಕುಮಾರ್
ಪತ್ರ
ಬರೆದಿದ್ದರು.
ನೈಟ್ ಕರ್ಫ್ಯೂ ಹಿನ್ನೆಲೆ ರಾತ್ರಿ 9ರವರೆಗೆ ಮಾತ್ರ ಮೆಟ್ರೋ ಸಂಚಾರವಿದೆ. ರಾತ್ರಿ 9 ಗಂಟೆಯ ಬಳಿಕ ಮೆಟ್ರೋ ಸಂಚಾರ ಇರುವುದಿಲ್ಲ. ಇದರಿಂದ ಹಲವು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ರಾತ್ರಿ 10 ಗಂಟೆಯವರೆಗೆ ಮೆಟ್ರೋ ಸೌಲಭ್ಯ ಕಲ್ಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಶಾಸಕ ಸುರೇಶ್ಕುಮಾರ್ ಪತ್ರ ಬರೆದಿದ್ದರು.
ನೈಟ್ ಕರ್ಫ್ಯೂ 11 ಗಂಟೆಯ ನಂತರ ವಿಧಿಸುವ ಬಗ್ಗೆ ಪರಿಶೀಲನೆ ನಡೆಸಬೇಕು. ಲಾಕ್ಡೌನ್ ಮುಂಚೆ ಮೆಟ್ರೋ ನಿಲ್ದಾಣಗಳಲ್ಲಿ ಎರಡು ಕಡೆ ದ್ವಾರಗಳು ಇದ್ದವು. ಈಗ ಒಂದು ಕಡೆ ಮಾತ್ರ ದ್ವಾರ ಇದ್ದು, ಸಮಸ್ಯೆಯಾಗುತ್ತಿದೆ. ಹೀಗಾಗಿ ಎರಡು ಕಡೆ ಪ್ರವೇಶ ದ್ವಾರ ತೆರೆದು ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಿ ಎಂದು ಸುರೇಶ್ ಕುಮಾರ್ ಬರೆದ ಪತ್ರದಲ್ಲಿ ವಿನಂತಿ ಮಾಡಿದ್ದರು.
ಮಾಜಿ ಸಚಿವ ಸುರೇಶ್ ಕುಮಾರ್ ಹೊರತಾಗಿ ಇತರ ಕೆಲವು ರಾಜಕಾರಣಿಗಳು ಕೂಡ ಈ ಬಗ್ಗೆ ಒತ್ತಾಯಿಸಿದ್ದರು. ಇದೀಗ, ಮೆಟ್ರೋ ಕಾರ್ಯನಿರ್ವಹಿಸುವ ಅವಧಿ ವಿಸ್ತರಣೆ ಮಾಡಲಾಗಿದೆ.
Recommended Video
ಬಿಡದಿಗೂ
ಸಿಗಲಿದೆ
ನಮ್ಮ
ಮೆಟ್ರೋ
ಸೌಲಭ್ಯ
4ನೇ
ಹಂತದಲ್ಲಿ
ರಾಮನನಗರ
ಜಿಲ್ಲೆ
ಬಿಡದಿಗೂ
ನಮ್ಮ
ಮೆಟ್ರೋ
ರೈಲು
ಸಂಚಾರ
ಭಾಗ್ಯ
ಸಿಗಲಿದೆ.
ಇದಲ್ಲದೇ
ನಮ್ಮ
ಮೆಟ್ರೋ
ಯೋಜನೆ
ರಾಮನಗರ
ಮತ್ತು
ಮಾಗಡಿವರೆಗೂ
ವಿಸ್ತರಣೆಯಾಗಲಿದೆ
ಎಂದು
ಮುಖ್ಯಮಂತ್ರಿಗಳೇ
ಹೇಳಿದ
ಬಳಿಕ
ರಾಮನಗರ
ಜಿಲ್ಲೆಯಲ್ಲಿ
ಹೊಸ
ಭರವಸೆ
ಚಿಗುರೊಡೆದಿದೆ.
ಅದರಲ್ಲೂ
ನಿತ್ಯ
ಬೆಂಗಳೂರಿಗೆ
ಹೋಗಿ
ಬರುವ
ಉದ್ಯೋಗಿಗಳು,
ಕಾರ್ಮಿಕರು
ಮಾತ್ರವಲ್ಲದೇ
ಕೈಗಾರಿಕೆಗಳಿಗೂ
ಸಾಕಷ್ಟು
ನಿರೀಕ್ಷೆ
ಮೂಡಿದೆ.