ಪೊಲೀಸರಿಂದ ಕಿರುಕುಳ: ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ
ಬೆಂಗಳೂರು, ಜೂನ್ 15: ಪೊಲೀಸರೇ ಯುವತಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಬೆಂಗಳೂರನ್ನು ಬೆಚ್ಚಿ ಬೀಳಿಸಿದೆ. ಪೊಲೀಸರ ವರ್ತನೆಯಿಂದ ಬೇಸತ್ತ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದು ಗೊರಗುಂಟೆಪಾಳ್ಯದಲ್ಲಿರುವ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೆಎಎಸ್
ವ್ಯಾಸಂಗ
ಮಾಡುತ್ತಿದ್ದ
ವಿದ್ಯಾರ್ಥಿನಿ
ಶ್ವೇತಾ
(23)
ಪೊಲೀಸರ
ನಡವಳಿಕೆಯಿಂದ
ಬೇಸತ್ತು
ವಿಷ
ಸೇವಿಸಿರುವ
ಪ್ರಕರಣ
ತಡವಾಗಿ
ಬೆಳಕಿಗೆ
ಬಂದಿದೆ.
ಮಾದನಾಯಕನಹಳ್ಳಿ
ನಿವಾಸಿ
ಶ್ವೇತಾ
7
ದಿನಗಳಿಂದ
ಚಿಕಿತ್ಸೆ
ಪಡೆಯುತ್ತಿದ್ದು
ಕೋಮಾ
ಸ್ಥಿತಿ
ತಲುಪಿದ್ದಾರೆ.[ವಿದ್ಯುತ್
ಕತ್ತರಿಸಿದ
ಅಧಿಕಾರಿಯೆದುರೇ
ವಿಷ
ಕುಡಿದ
ರೈತ]
ಸ್ಷರ್ಶ್
ಆಸ್ಪತ್ರಗೆ
ರಾಜ್ಯ
ಮಹಿಳಾ
ಆಯೋಗದ
ಅಧ್ಯಕ್ಷೆ
ಮಂಜುಳಾ
ಮಾನಸ
ಬುಧವಾರ
ಆಸ್ಪತ್ರೆಗೆ
ಭೇಟಿ
ನೀಡಿ
ಯುವತಿಯ
ಆರೋಗ್ಯ
ಸ್ಥಿತಿ
ವಿಚಾರಿಸಿದ್ದಾರೆ.
ಘಟನೆಗೆ
ಕಾರಣರಾದವರ
ಮೇಲೆ
ಸೂಕ್ತ
ಕ್ರಮ
ತೆಗೆದುಕೊಳ್ಳಬೇಕು
ಎಂದು
ಒತ್ತಾಯ
ಮಾಡಿದ್ದಾರೆ.
ಬೆಂಗಳೂರು
ಗ್ರಾಮಾಂತರ
ಎಸ್ಪಿ
ಅಮಿತ್
ಸಿಂಗ್
ಅವರಿಗೆ
ದೂರು
ದಾಖಲು
ಮಾಡಲಾಗಿದೆ.[49
ಕೆ.ಎ.ಎಸ್
ಅಧಿಕಾರಿಗಳ
ವರ್ಗಾವಣೆ]
ಜೂನ್
8
ರಂದು
ನಡೆದ
ಪ್ರಕರಣ
ಮನೆಯವರ
ಜಮೀನು
ವಿವಾದಕ್ಕೆ
ಸಂಬಂಧಿಸಿ
ಗ್ರಾ.ಪಂ
ಪಿಡಿಒ
ವಿರುದ್ಧ
ದೂರು
ನೀಡಲು
ಶ್ವೇತಾ
ಮಾದನಾಯಕನಹಳ್ಳಿ
ಪೊಲೀಸ್
ಠಾಣೆಗೆ
ತೆರಳಿದ್ದರು.
ಈ
ವೇಳೆ
ಠಾಣೆಯ
ಪೇದೆಗಳು
ಆಕೆಯ
ಮೇಲೆ
ಹಲ್ಲೆ
ನಡೆಸಿದ್ದಾರೆ
ಎನ್ನಲಾಗಿದ್ದು
ಮನನೊಂದ
ಶ್ವೇತಾ
ಪೊಲೀಸರ
ಎದುರೇ
ವಿಷ
ಸೇವಿಸಿದ್ದರು.