152 ಕೋಟಿ ಒಡೆಯರ ವಿರುದ್ಧ ಎಸಿಬಿಯಿಂದ ಎಫ್ ಐಆರ್
ಅಕ್ರಮ ಆಸ್ತಿ ಗಳಿಸಿ ಐಟಿ ದಾಳಿಯಲ್ಲಿ ಸಿಕ್ಕಿಬಿದ್ದ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಎಸಿಬಿ ಸೋಮವಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಎಸಿಬಿ ಐಜಿಪಿ ಸಲೀಂ ಹೇಳಿದ್ದಾರೆ.
ಬೆಂಗಳೂರು, ಡಿಸೆಂಬರ್ 05: ಅಕ್ರಮ ಆಸ್ತಿ ಗಳಿಸಿ ಐಟಿ ದಾಳಿಯಲ್ಲಿ ಸಿಕ್ಕಿಬಿದ್ದ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಎಸಿಬಿ ಸೋಮವಾರ ಪ್ರಕರಣ ದಾಖಲಿಸಿಕೊಂಡು, ಎಫ್ ಐಆರ್ ಹಾಕಲಾಗಿದೆ. ಈಗಾಗಲೇ ಇವರಿಬ್ಬರ ವಿರುದ್ಧ ಸಿಬಿಐ ತೀವ್ರ ವಿಚಾರಣೆ ಆರಂಭಿಸಿದೆ.
ರಾಜ್ಯ
ರಸ್ತೆ
ಅಭಿವೃದ್ಧಿ
ನಿಗಮದ
ಮುಖ್ಯ
ಯೋಜನಾಧಿಕಾರಿ
ಹಾಗೂ
ಕಾವೇರಿ
ನೀರಾವರಿ
ನಿಗಮದ
ವ್ಯವಸ್ಥಾಪಕ
ನಿರ್ದೇಶಕ
ಅವರ
ನಿವಾಸ,
ಕಚೇರಿಯ
ಮೇಲೆ
ದಾಳಿ
ನಡೆಸಿದ
ಆದಾಯ
ತೆರಿಗೆ
ಅಧಿಕಾರಿಗಳು
5.7
ಕೋಟಿ
ನಗದು
ಹಾಗೂ
152
ಕೋಟಿ
ಅಕ್ರಮ
ಆಸ್ತಿಯನ್ನು
ಬಯಲು
ಮಾಡಿದ್ದರು.[ಸಿಬಿಐ
ವಿಚಾರಣೆಯಲ್ಲಿ
ಜಯಚಂದ್ರ
ಮಾಡಿದ್ದೇನು?]
ಈ ಇಬ್ಬರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 13 (1) (ಎ) ಹಾಗೂ (1) (ಇ) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಎಸಿಬಿ ಐಜಿಪಿ ಎಂ.ಎ ಸಲೀಂ ಅವರು ಹೇಳಿದ್ದಾರೆ. [ಐಟಿ ದಾಳಿ: 6.7 ಕೋಟಿ ಹಣ, ಬಂದಿದ್ದೆಲ್ಲಿ? ತಂದವರಾರು?]
ಈ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ಕರ್ನಾಟಕ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗೆ ವಹಿಸಲಾಗಿದೆ.