ಬೆಂಗಳೂರು, ಸೆಪ್ಟೆಂಬರ್ 25: ಬೆಂಗಳೂರು ಪೂರ್ವ ವಲಯದ ಉಪ ಪೊಲೀಸ್ ಆಯುಕ್ತರಾಗಿದ್ದ ಐಪಿಎಸ್ ಅಜೆಯ್ ಲಾಹೊರಿ ಅವರಿಗೆ ಬರೋಬ್ಬರಿ 25 ಕೆಜಿ ಚಿನ್ನ ಮತ್ತು 13 ಕೋಟಿ ಲಂಚ (ಮಾಮೂಲಿ) ನೀಡಲಾಗಿತ್ತು ಎಂದು ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.ಬೇರೆ-ಬೇರೆ ಅಧಿಕಾರಿಗಳಿಗೆ ಪಾಲು ಕೊಡಬೇಕು ಎಂದು ಹೇಳಿ ಅಜಯ್ ಹಿಲೋರಿ ಅವರು ಒಟ್ಟು 25 ಕೆಜಿ ಚಿನ್ನ ತೆಗೆದುಕೊಂಡು ಹೋಗಿದ್ದಾರೆ. ಜೊತೆಗೆ ತಿಂಗಳಿಗೆ ಒಂದು ಕೋಟಿಯಂತೆ 13 ಕೋಟಿ ರೂಪಾಯಿ ಲಂಚ ವಸೂಲಿ ಮಾಡಿದ್ದಾರೆ ಎಂದು ಐಎಂಎ ಸಂಸ್ಥಾಪಕ ಮನ್ಸೂರ್ ಖಾವ್ ಸಿಬಿಐ ಮತ್ತು ಕರ್ನಾಟಕ ಪೊಲೀಸ್ ವಿಶೇಷ ತನಿಖಾ ದಳದ ಮುಂದೆ ಬಾಯಿಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.ಐಎಂಎ ಹಗರಣ: ರೋಷನ್ ಬೇಗ್ ಗೆ ರಾಜ್ಯಪಾಲ ವಜುಭಾಯಿ ರಕ್ಷಣೆ?ಮನ್ಸೂರ್ ಖಾನ್ ಅವರ ಹೇಳಿಕೆಗಳನ್ನು ವಿಡಿಯೋ ದಾಖಲು ಮಾಡಿಕೊಳ್ಳಲಾಗಿದ್ದು, ಚಾರ್ಜ್& zwnj ಶೀಟ್& zwnj ನಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳಿಗೆ ಲಂಚದ ಹಣ ನೀಡಲಾಗಿದೆ ಎಂದು ಉಲ್ಲೇಖ ಮಾಡಲಾಗಿದೆ.ಆದರೆ ಮನ್ಸೂರ್ ಖಾನ್ ತಪ್ಪೊಪ್ಪಿಗೆಯನ್ನು ಅಲ್ಲಗಳೆದಿರುವ ಅಜೆಯ್ ಹಿಲೋರಿ, ನಾನು ಮನ್ಸೂರ್ ಖಾನ್& zwnj ನನ್ನು ಹಲವು ಭಾರಿ ಭೇಟಿ ಆಗಿರುವುದು ನಿಜ ಆದರೆ ನಾನು ಚಿನ್ನವನ್ನಾಗಲಿ, ಹಣವನ್ನಾಗಲಿ ಪಡೆದಿಲ್ಲ ಎಂದು ಎಸ್& zwnj ಐಟಿ ವಿಚಾರಣೆ ವೇಳೆ ಅಜೆಯ್ ಹಿಲೋರಿ ಹೇಳಿದ್ದರು. ಮನ್ಸೂರ್ ಖಾನ್ ಹಣ ಹಾಗೂ ಚಿನ್ನವನ್ನು ಹಿಲೋರಿಗೆ ಯಾವ ಸಮಯದಲ್ಲಿ ನೀಡಿದನೆಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಆಗಾಗ್ಗೆ ಸುಮಾರು ಒಂದು ವರ್ಷ ಅವಧಿಯಲ್ಲಿ ಚಿನ್ನ ಮತ್ತು ಹಣವನ್ನು ನೀಡಲಾಗಿದೆ. ತಿಂಗಳಿಗೆ ಒಂದು ಕೋಟಿ ಕೇವಲ ಒಬ್ಬ ಅಧಿಕಾರಿಗೆ ಕೊಟ್ಟಿದ್ದಾರೆ ಮನ್ಸೂರ್ ಖಾನ್. 25 ಕೆ.ಜಿಯ ಚಿನ್ನದ ಬೆಲೆ ಈಗಿನ ಮಾರುಕಟ್ಟೆ ದರದಲ್ಲಿ ಬರೋಬ್ಬರಿ 94.77 ಕೋಟಿ ಆಗುತ್ತದೆ. ಅದರ ಜೊತೆಗೆ ತಿಂಗಳಿಗೆ ಒಂದರಂತೆ 13 ಕೋಟಿ ಲಂಚದ ಹಣ ಪ್ರತ್ಯೇಕ ಅಲ್ಲಿಗೆ ಸುಮಾರು 108 ಕೋಟಿ ಹಣವನ್ನು ಒಬ್ಬನೇ ಐಪಿಎಸ್ ಅಧಿಕಾರಿಗೆ ಮನ್ಸೂರ್ ಖಾನ್ ನೀಡಿದ್ದಾನೆ. ಐಎಂಎ ಪ್ರಕರಣದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಭಾರಿ ಮೊತ್ತದ ಲಂಚ ಪಡೆದಿದ್ದಾರೆ ಎಂಬುದು ಈಗಾಗಲೇ ತನಿಖೆಯಿಂದ ಬಹಿರಂಗಗೊಂಡಿದೆ. ಐಎಎಸ್ ಅಧಿಕಾರಿ ಬಿ.ಎಂ.ವಿಜಯ್&zwnj ಶಂಕರ್ ಅವರಿಗೆ 1 ಕೋಟಿ, ಉಪವಿಭಾಗಾಧಿಕಾರಿ ಎಲ್&zwnj .ಸಿ ನಾಗರಾಜುಗೆ ನಾಲ್ಕು ಕೋಟಿ ಲಂಚ ನೀಡಿದ್ದಾಗ ಈ ಹಿಂದೆಯೇ ಮನ್ಸೂರ್ ಖಾನ್ ಹೇಳಿದ್ದ. ಅವರಿಬ್ಬರನ್ನೂ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಇದರ ಜೊತೆಗೆ ಮತ್ತೊಬ್ಬ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಇದೇ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಬಿಡಿಎಯ ಪ್ರಮುಖ ಅಧಿಕಾರಿಯೂ ಒಬ್ಬರನ್ನು ವಿಚಾರಣೆ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಇನ್ನೂ ಹಲವು ಅಧಿಕಾರಿಗಳು ಪ್ರಕರಣದಲ್ಲಿ ಭಾಗಿ ಆಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ರಾಜಕಾರಣಿಗಳೂ ಪ್ರಕರಣದಲ್ಲಿ ಶಾಮೀಲಾಗಿರುವ ಅನುಮಾನವಿದ್ದು ರೋಷನ್ ಬೇಗ್, ಜಮೀರ್ ಅಹ್ಮದ್ ಅವರಂತಹಾ ರಾಜಕಾರಣಿಗಳನ್ನು ವಿಚಾರಣೆ ನಡೆಸಲಾಗಿದೆ. ಹಲವು ರಾಜಕಾರಣಿಗಳು, ದೊಡ್ಡ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಸೂಕ್ತ ದಾಖಲೆ ಕಲೆ ಹಾಕಿದ ನಂತರ ಎಲ್ಲರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಐಎಂಎ ಪ್ರಕರಣವನ್ನು ಪ್ರಸ್ತುತ ಸಿಬಿಐ ತನಿಖೆ ನಡೆಸುತ್ತಿದೆ.