ಬೆಂಗಳೂರು ದಕ್ಷಿಣದ ಕಸ ಸಮಸ್ಯೆಗೆ ತಾತ್ಕಾಲಿಕ ಪರಿಹಾರ
ಬೆಂಗಳೂರು, ಸೆಪ್ಟೆಂಬರ್.16: ಬೆಂಗಳೂರು ದಕ್ಷಿಣ ಅನುಭವಿಸುತ್ತಿದ್ದ ಕಸದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಇನ್ನು ಒಂದು ಬಿಂಗೀಪುರದಲ್ಲಿ ತಿಂಗಳೂ ಕಸ ಸುರಿಯಲು ಗ್ರಾಮಸ್ಥರು ಒಪ್ಪಿಗೆ ನೀಡಿದ್ದಾರೆ.
ಮಂಗಳವಾರದಿಂದಲೇ ಕಸದ ಲಾರಿಗಳು ಸಂಚರಿಸಲು ಆರಂಭಿಸಿದ್ದು ತೆರವು ಕೆಲಸ ಸಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಕಸ ವಿಲೇವಾರಿ ಸ್ಥಗಿತವಾಗಿತ್ತು. ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಮಂಜುನಾಥರೆಡ್ಡಿ, ಸಂಸದ ಡಿ.ಕೆ. ಸುರೇಶ್, ಆಯುಕ್ತ ಕುಮಾರ್ ನಾಯಕ್ ಮಂಗಳವಾರ ಗ್ರಾಮಸ್ಥರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ.[ಕಸದ ವಾಸನೆಯಲ್ಲಿ ದಕ್ಷಿಣ ಬೆಂಗಳೂರಿಗರಿಗೆ ಗಣೇಶ ಹಬ್ಬ!]
ಬೆಂಗಳೂರಿನ ಹೊರವಲಯಗಳಲ್ಲಿ 7 ಹೊಸ ಘಟಕಗಳು ಕಾರ್ಯಾರಂಭ ಮಾಡಲಿವೆ. ಇದಕ್ಕೆ ಒಂದು ತಿಂಗಳ ಕಾಲಾವಕಾಶ ಬೇಕಿದೆ. ಅಷ್ಟರವರೆಗೆ ನಗರದ ಕಸವನ್ನು ಬಿಂಗೀಪುರದಲ್ಲಿ ಹಾಕಲಾಗುವುದು. ನಂತರ ಕಸ ವಿಲೇವಾರಿ ಸ್ಥಗಿತ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೆ.ಆರ್.ಮಾರುಕಟ್ಟೆ ಹಾಗೂ ಜಯನಗರದಲ್ಲಿ ಕಸ ಸಂಸ್ಕರಣ ಘಟಕಗಳು ನಡೆಯುತ್ತಿವೆ. ಬೇಗೂರು ಮುಖ್ಯರಸ್ತೆ ಹಾಗೂ ಪಟ್ಟಾಭಿರಾಮನಗರದಲ್ಲಿ ಘಟಕಗಳ ನಿರ್ಮಾಣ ನಡೆಯುತ್ತಿದ್ದು ಕೆಲವೇ ದಿನದಲ್ಲಿ ಕೆಲಸ ಆರಂಭಿಸಲಿವೆ.
ಮಹಾನಗರದಲ್ಲಿ
150
ಒಣ
ತ್ಯಾಜ್ಯ
ಸಂಗ್ರಹಣ
ಕೇಂದ್ರ
ಕಸ
ಸಮಸ್ಯೆಯನ್ನು
ಮನಗಂಡಿರುವ
ಬಿಬಿಎಂಪಿ
ನಗರದೊಳಗೆ
ಕಸ
ಸಂಸ್ಕರಿಸಲು
ವಾರ್ಡ್
ಮಟ್ಟದಲ್ಲಿ
ಒಣ
ತ್ಯಾಜ್ಯ
ಸಂಗ್ರಹಣೆ
ಮಾಡಲಾಗುತ್ತಿದೆ.
ಜನರಿಗೂ
ಒಣ
ಕಸ,
ಹಸಿ
ಕಸ
ಬೇರೆ
ಬೇರೆ
ಮಾಡಿ
ಘಂಟೆ
ಗಾಡಿಗೆ
ನೀಡುವಂತೆ
ತಿಳಿಸಿದೆ.
ಕೇವಲ
ಬಿಬಿಎಂಪಿ
ಮಾತ್ರವಲ್ಲದೇ
ನಾಗರಿಕರು
ಸಕಲ
ಸಹಕಾರ
ನೀಡಿದರೆ
ಕಸ
ವಿಲೇವಾರಿ
ಸಸೂತ್ರವಾಗಿ
ನಡೆಯಲು
ಸಾಧ್ಯವಿದೆ.