ಬೆಂಗಳೂರು ಬಾಂಬ್ ಸ್ಫೋಟದ ನಂತರದ ಬೆಳವಣಿಗೆಗಳು
ಬೆಂಗಳೂರು, ಡಿ. 29 : ಹೊಸ ವರ್ಷದ ಸಂಭ್ರಮಾಚರಣೆಗೆ ತಯಾರಿ ನಡೆಸುತ್ತಿದ್ದ ಬೆಂಗಳೂರು ನಗರದ ಬಾಂಬ್ ಸ್ಫೋಟದ ಸುದ್ದಿ ಕೇಳಿ ಆತಂಕಗೊಂಡಿದೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ಭಾನುವಾರ ರಾತ್ರಿ ಬಾಂಬ್ ಸ್ಫೋಟಗೊಂಡಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಸ್ಫೋಟದ ಕುರಿತು ಕ್ಷಣ-ಕ್ಷಣದ ಸುದ್ದಿಗಳು ಇಲ್ಲಿವೆ.
ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆದ ಹಿನ್ನಲೆಯಲ್ಲಿ ರಾಜ್ಯದ ಇತರ ನಗರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಜನರು ವದಂತಿಗಳಿಗೆ ಕಿವಿಕೊಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.
ಸಮಯ 3 ಗಂಟೆ : ಬೆಂಗಳೂರು ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದ ಉಗ್ರರ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಘೋಷಿಸಿದ್ದಾರೆ.
ಸಮಯ
2
ಗಂಟೆ
:
ಚರ್ಚ್
ಸ್ಟ್ರೀಟ್ನಲ್ಲಿ
ಬಾಂಬ್
ಸ್ಫೋಟಗೊಂಡು
ಮೃತಪಟ್ಟ
ಚೆನ್ನೈ
ನಿವಾಸಿ
ಭವಾನಿ
ಅವರ
ಮರಣೋತ್ತರ
ಪರೀಕ್ಷೆ
ವಿಕ್ಟೋರಿಯಾ
ಆಸ್ಪತ್ರೆಯಲ್ಲಿ
ಪೂರ್ಣಗೊಂಡಿದ್ದು
ಶವವನ್ನು
ಚೆನ್ನೈಗೆ
ಆಂಬ್ಯುಲೆನ್ಸ್
ಮೂಲಕ
ಕಳುಹಿಸಿ
ಕೊಡಲಾಗಿದೆ.
ನಾಲ್ವರು
ಪೊಲೀಸರು
ಮೃತದೇಹದೊಂದಿಗೆ
ಚೆನ್ನೈಗೆ
ತೆರಳುತ್ತಿದ್ದಾರೆ.
ಸಮಯ 1.30 : ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ಸ್ಫೋಟಗೊಂಡ ಬಾಂಬ್ ಅನ್ನು ನಗರದ ಹೊರಗೆ ಅಥವ ಅಕ್ಕಪಕ್ಕದ ಜಿಲ್ಲೆಗಳಲ್ಲಿ ತಯಾರು ಮಾಡಿರುವ ಶಂಕೆ ಇದ್ದು, ರಾಮನಗರ, ಕೋಲಾರ, ಮಂಡ್ಯ ಸೇರಿದಂತೆ ಬೆಂಗಳೂರು ಸುತ್ತಮುತ್ತಲ ನಗರಗಳಿಗೆ ಪೊಲೀಸ್ ತಂಡಗಳನ್ನು ಕಳುಹಿಸಿ ತನಿಖೆ ನಡೆಸಲಾಗುತ್ತಿದೆ.
ಸಮಯ 1 ಗಂಟೆ : ಚರ್ಚ್ ಸ್ಟ್ರೀಟ್ನಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಬೆಂಗಳೂರಿನಲ್ಲಿ ಜ.19ರಿಂದ ನಡೆಯಬೇಕಾಗಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯನ್ನು ರದ್ದುಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಿರಿಯ ನಾಯಕರು ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿತ್ತು.
ಸಮಯ
12.40
:
ಚರ್ಚ್
ಸ್ಟ್ರೀಟ್ನಲ್ಲಿ
ಬಾಂಬ್
ಸ್ಫೋಟಗೊಂಡ
ಹಿನ್ನಲೆಯಲ್ಲಿ
ಹೊಸವರ್ಷಾಚರಣೆಯ
ಸಮಯವನ್ನು
ಕಡಿತಗೊಳಿಸಲಾಗಿದೆ.
ಡಿ.31ರಂದು
ಎಂಜಿ
ರಸ್ತೆ
ಮತ್ತು
ಬ್ರಿಗೇಡ್
ರಸ್ತೆಯಲ್ಲಿ
ರಾತ್ರಿ
1
ಗಂಟೆಯ
ತನಕ
ಮಾತ್ರ
ಸಂಭ್ರಮಾಚರಣೆಗೆ
ಅವಕಾಶ
ನೀಡಲಾಗುತ್ತದೆ
ಎಂದು
ನಗರ
ಪೊಲೀಸ್
ಆಯುಕ್ತ
ಎಂ.ಎನ್.ರೆಡ್ಡಿ
ಹೇಳಿದ್ದಾರೆ.
ಮೊದಲು
ರಾತ್ರಿ
2
ಗಂಟೆಯ
ತನಕ
ಅವಕಾಶ
ನೀಡಲಾಗಿತ್ತು.
[2
ಗಂಟೆವರೆಗೆ
ಬಾರ್,
ಹೋಟೆಲ್
ಓಪನ್]
ಸಮಯ 12.20 : ಹಾಸ್ ಮ್ಯಾಟ್ ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ ಕಾರ್ತಿಕ್ಗೆ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ. ಕಾರ್ತಿಕ್ ಎಡಗೈ ಹಿಂಭಾಗದಲ್ಲಿದ್ದ ಒಂದು ಇಂಚು ಕಬ್ಬಿಣದ ತುಂಡನ್ನು ಹೊರತೆಗೆಯಲಾಗಿದೆ. ಇನ್ನೂ ಎರಡು ದಿನ ಕಾರ್ತಿಕ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. [ನೂತನ ವರ್ಷಾಚರಣೆಯನ್ನು ಕೈಬಿಡುವುದೇ ಲೇಸಲ್ಲವೆ?]
ಸಮಯ 12.15 : ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿರುವ ಪೊಲೀಸರ ತಂಡ ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಕುಪ್ಪಂಗೆ ತೆರಳಲಿದ್ದಾರೆ. ನಿಷೇಧಿತ ಅಲ್ ಉಮಾ ಸಂಘಟನೆ ಕೈವಾಡದ ಶಂಕೆ ಹಿನ್ನಲೆಯಲ್ಲಿ ತಂಡವನ್ನು ತಮಿಳುನಾಡಿಗೆ ಕಳುಹಿಸಲಾಗುತ್ತಿದೆ. ಸ್ಫೋಟ ನಡೆದ ಸ್ಥಳದ ಎದುರಿನಲ್ಲಿದ್ದ ಸಿಸಿಟಿವಿ ಕ್ಯಾಮರಾ ಮೂರು ದಿನಗಳ ಹಿಂದೆ ಹಾಳಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಸಮಯ
11.47
:
ಸಿಎಂ
ಗೃಹ
ಕಚೇರಿಯಲ್ಲಿ
ನಡೆದ
ಉನ್ನತ
ಮಟ್ಟದ
ಸಭೆ
ಅಂತ್ಯಗೊಂಡಿದೆ.
ಸಭೆಯ
ಬಳಿಕ
ಪತ್ರಿಕಾಗೋಷ್ಠಿ
ನಡೆಸಿದ
ಸಿಎಂ
ಸಿದ್ದರಾಮಯ್ಯ
ಅವರು,
ಸ್ಫೋಟದಲ್ಲಿ
ಮೃತಪಟ್ಟ
ಭವಾನಿ
ಅವರ
ಮೃತದೇಹವನ್ನು
ಮರಣೋತ್ತರ
ಪರೀಕ್ಷೆ
ಬಳಿಕ
ಚೆನ್ನೈಗೆ
ಕಳುಹಿಸಲಾಗುತ್ತದೆ.
ಭವಾನಿ
ಅವರ
ಕುಟುಂಬಕ್ಕೆ
5
ಲಕ್ಷ
ರೂ.ಗಳ
ಪರಿಹಾರವನ್ನು
ಘೋಷಣೆ
ಮಾಡಲಾಗಿದೆ
ಎಂದರು.
[ಮೆಹದಿ
ಬಂಧನದ
ಪ್ರತೀಕಾರಕ್ಕೆ
ಸ್ಫೋಟ?]
ಕರ್ನಾಟಕದ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ, ಅವರೇ ಪ್ರಕರಣ ಸಂಪೂರ್ಣ ತನಿಖೆ ನಡೆಸಲಿದ್ದಾರೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಗಾಯಾಳುಯಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದ ಸಿಎಂ, ರಾಜ್ಯದ ಇತರ ನಗರಗಳಲ್ಲಿಯೂ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದರು. ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ, ಎಂಜಿ ಮತ್ತು ಬ್ರಿಗೇಡ್ ರೋಡ್ನಲ್ಲಿ ಅಗತ್ಯ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದರು. [ಸ್ಫೋಟದ ತನಿಖೆಗೆ ವಿಶೇಷ ತಂಡ]
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ಅವರಿಗೆ ಅಗತ್ಯ ಮಾಹಿತಿ ನೀಡಲಾಗಿದೆ. ತನಿಖೆಗೆ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಕೇಂದ್ರ ಗುಪ್ತಚರ ಅಧಿಕಾರಿಗಳ ಜೊತೆ ಪೊಲೀಸರು ಸಂಪರ್ಕದಲ್ಲಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಸಿಸಿಟಿವಿ ಆಳವಡಿಸಲು ಸೂಚನೆ ನೀಡಲಾಗಿದೆ. ವಿಧಾನಸೌಧದ 5 ಕಿ.ಮೀ ವ್ಯಾಪ್ತಿಯಲ್ಲಿಯೂ ಸಿಸಿಟಿವಿ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
ಸಾರ್ವಜನಿಕರು ಅನುಮಾಸ್ಪದ ವ್ಯಕ್ತಿಗಳು ಕಂಡುಬಂದರೆ ಮಾಹಿತಿ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು. ಮಾಹಿತಿ ನೀಡುವ ವ್ಯಕ್ತಿಗಳ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಸಮಯ 11.42 : ಬೆಂಗಳೂರಿನ ಬಾಂಬ್ ಸ್ಫೋಟದ ಕುರಿತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಕೇಂದ್ರ ಸರ್ಕಾರದ ತನಿಖೆ ಎಲ್ಲಾ ರೀತಿಯ ಸಲಹೆ ನೀಡಲಿದೆ ಎಂದು ಹೇಳಿದ್ದಾರೆ. ರಾಜ್ಯ ಪೊಲೀಸರು ಸ್ಫೋಟದ ಕುರಿತು ತನಿಖೆ ನಡೆಸುತ್ತಿದ್ದಾರೆ. ಒಬ್ಬರು ಮಹಿಳೆ ಘಟನೆಯಲ್ಲಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಹೇಳಿದರು.
ಸಮಯ 11.15 : ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಚೆನ್ನೈ ಮೂಲದ ಭವಾನಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರಂಭವಾಗಿದೆ.
ಸಮಯ 10.53 : ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿರುವ ಪೊಲೀಸರು ಆಂಧ್ರಪ್ರದೇಶದ ವಾರಂಗಲ್ಗೆ ತೆರಳಿದ್ದಾರೆ. ಸ್ಫೋಟಗೊಂಡ ಬಾಂಬ್ ಅನ್ನು ತೆಲಗು ಪತ್ರಿಕೆಯಲ್ಲಿ ಸುತ್ತಿಡಲಾಗಿತ್ತು. ಅದರಲ್ಲಿ ಬರೆದಿದ್ದ ಮೊಬೈಲ್ ನಂಬರ್ ಜಾಡು ಹಿಡಿದು ಪೊಲೀಸರು ವಾರಂಗಲ್ಗೆ ಹೋಗಿದ್ದಾರೆ.
ಸಮಯ
10.30
:
ಚರ್ಚ್
ಸ್ಟ್ರೀಟ್ನಲ್ಲಿ
ಬಾಂಬ್
ಸ್ಫೋಟ
ಸಂಭವಿಸಿದ
ನಂತರ
ನಗರದಲ್ಲಿ
ಹೈ
ಅಲರ್ಟ್
ಘೋಷಿಸಲಾಗಿದೆ.
ಮೆಜೆಸ್ಟಿಕ್ನಲ್ಲಿ
ಪ್ರಯಾಣಿಕರನ್ನು
ತಪಾಸಣೆ
ಮಾಡಲಾಗುತ್ತಿದೆ.
ಸಮಯ 10.22 : ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ಆರಂಭವಾಗಿದೆ. ಗೃಹ ಸಚಿವ ಜಾರ್ಜ್, ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರುಖಾಮ್ ಪಚಾವ, ಗೃಹ ಸಚಿವರ ಸಲಹೆಗಾರರಾದ ಕೆಂಪಯ್ಯ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಸಮಯ 10.12 : ಹಾಸ್ ಮ್ಯಾಟ್ ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ ಕಾರ್ತಿಕ್ಗೆ ಶಸ್ತ್ರ ಚಿಕಿತ್ಸೆ ಆರಂಭವಾಗಿದೆ.
ಸಮಯ 10 ಗಂಟೆ : ಬಾಂಬ್ ಸ್ಫೋಟದ ಹಿನ್ನಲೆಯಲ್ಲಿ ಪೊಲೀಸರು ಚರ್ಚ್ ಸ್ಟ್ರೀಟ್ ಸುತ್ತಮುತ್ತಲಿನ ಮೊಬೈಲ್ ಕರೆಗಳ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಸಮಯ
9.50
:
ಮಲ್ಯ
ಆಸ್ಪತ್ರೆಗೆ
ಗೃಹ
ಸಚಿವ
ಕೆ.ಜೆ.ಜಾರ್ಜ್,
ನಗರ
ಪೊಲೀಸ್
ಆಯುಕ್ತ
ಎಂ.ಎನ್.ರೆಡ್ಡಿ
ಭೇಟಿದ್ದಾರೆ.
ಸಮಯ 9.30 : ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಭವಾನಿ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಿದ್ಧತೆ, ಶವವನ್ನು ಬೇಗ ಹಸ್ತಾಂತರಿಸಿ ಎಂದು ಕುಟುಂಬದವರ ಮನವಿ
ಸಮಯ 9.20 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿಯಲ್ಲಿ 10 ಗಂಟೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ.
ಸಮಯ 9 ಗಂಟೆ : ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಮಹಿಳೆ ಭವಾನಿ ಪತಿ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ಆಗಮನ