ಚರ್ಚ್ ಸ್ಟ್ರೀಟ್ ಸ್ಫೋಟ, ಶಂಕಿತರ ರೇಖಾ ಚಿತ್ರ ಸಿದ್ಧ
ಬೆಂಗಳೂರು, ಜ. 1 : ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ಬಾಂಬ್ ಸ್ಫೋಟಗೊಂಡು ಐದು ದಿನಗಳು ಕಳೆದಿವೆ. ಪ್ರಕರಣದ ತನಿಖೆಗೆ ರಚಿಸಿರುವ ವಿಶೇಷ ತಂಡಗಳ ಸಿಬ್ಬಂದಿ ವಿವಿಧ ರಾಜ್ಯಗಳಲ್ಲಿ ತನಿಖೆ ಮುಂದುವರೆಸಿದ್ದಾರೆ. ಮೂವರು ಶಂಕಿತರ ರೇಖಾ ಚಿತ್ರವನ್ನು ಪೊಲೀಸರು ತಯಾರಿಸಿದ್ದಾರೆ. ಇಲ್ಲಿಯವರೆಗೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸಲಾಗಿಲ್ಲ.
ಭಾನುವಾರ
ರಾತ್ರಿ
ಚರ್ಚ್
ಸ್ಟ್ರೀಟ್ನಲ್ಲಿ
ನಡೆದ
ಬಾಂಬ್
ಸ್ಫೋಟಕ್ಕೆ
ಮಹಿಳೆಯೊಬ್ಬರು
ಬಲಿಯಾಗಿದ್ದು,
ಮೂವರು
ಗಾಯಗೊಂಡಿದ್ದರು.
ಸ್ಫೋಟ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಈವರೆಗೆ
ಯಾರನ್ನೂ
ಬಂಧಿಸಿಲ್ಲ.
ಪ್ರಕರಣದ
ತನಿಖೆಗೆ
ರಚಿಸಿರುವ
ವಿಶೇಷ
ತಂಡಗಳ
ಸಿಬ್ಬಂದಿ
ಮಹಾರಾಷ್ಟ್ರ,
ಆಂಧ್ರಪ್ರದೇಶ,
ತಮಿಳುನಾಡು,
ಕೇರಳ
ಸೇರಿದಂತೆ
ದೇಶದ
ವಿವಿಧ
ರಾಜ್ಯಗಳಲ್ಲಿ
ತನಿಖೆ
ನಡೆಸುತ್ತಿದ್ದಾರೆ
ಎಂದು
ಪೊಲೀಸರು
ಹೇಳಿದ್ದಾರೆ.
[ಸ್ಫೋಟದ
ತನಿಖೆಗೆ
ವಿಶೇಷ
ತಂಡ
:
ಸಿಎಂ]
ಚರ್ಚ್ ಸ್ಟ್ರೀಟ್ನಲ್ಲಿ ಬಾಂಬ್ ಇಟ್ಟವರ ಶಂಕಿತ ರೇಖಾ ಚಿತ್ರಗಳನ್ನು ತಯಾರಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ. ಘಟನೆ ನಡೆದ ದಿನ ಸಂಜೆ ಆರು ಗಂಟೆಯ ನಂತರ ಬಾಂಬ್ ಇಟ್ಟಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. [ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ, ಮಹಿಳೆ ಬಲಿ]
ಮೂವರು ಉಗ್ರರ ಕೃತ್ಯ : ಚರ್ಚ್ ಸ್ಟ್ರೀಟ್ ಸುತ್ತಮುತ್ತಲಿನ ಅಂಗಡಿಗಳ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ತನಿಖಾ ತಂಡ ಪರಿಶೀಲನೆ ನಡೆಸಿದ್ದು, ಮೂವರು ಸ್ಫೋಟ ಸ್ಥಳದ ಆಸುಪಾಸಿನಲ್ಲಿ ಪದೇಪದೇ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ದೃಶ್ಯ ಸೆರೆಯಾಗಿದೆ. ದೃಶ್ಯಾವಳಿ ಅಸ್ಪಷ್ಟವಾಗಿದ್ದು ಚಹರೆ ಗುರುತಿಸುವುದು ಕಷ್ಟವಾಗುತ್ತಿದೆ. [ಸಿಮಿ ಉಗ್ರರು ಧಾರವಾಡದಲ್ಲಿ 10 ತಿಂಗಳಿದ್ದರೂ ತಿಳಿಯಲಿಲ್ಲ ಏಕೆ?]
ನಗರದಲ್ಲಿ ಈ ಹಿಂದೆ ನಡೆದ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಭಯೋತ್ಪಾದನಾ ಸಂಘಟನೆಗಳ 39 ಸದಸ್ಯರ ವಿಚಾರಣೆ ನಡೆಸಸಲು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನಿರ್ಧರಿಸಿದ್ದಾರೆ.
ವಿವಿಧ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಹಾಗೂ ತನಿಖಾ ಸಂಸ್ಥೆಗಳ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಶಂಕಿತರ ರೇಖಾ ಚಿತ್ರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಹೇಳಿದ್ದಾರೆ.