ಬ್ರೇಕಿಂಗ್ ನ್ಯೂಸ್: ಬೆಂಗಳೂರಿನಲ್ಲಿ ಕೊರೊನಾಗೆ ಮತ್ತೊಬ್ಬ ವ್ಯಕ್ತಿ ಬಲಿ
ಬೆಂಗಳೂರು,
ಮೇ.19:
ನೊವೆಲ್
ಕೊರೊನಾ
ವೈರಸ್
ಅಟ್ಟಹಾಸ
ಮುಂದುವರಿದಿದೆ.
ಬೆಂಗಳೂರಿನಲ್ಲಿ
ಮಹಾಮಾರಿಗೆ
ಮತ್ತೊಬ್ಬ
ವ್ಯಕ್ತಿ
ಬಲಿಯಾಗಿದ್ದು,
ಸಿಲಿಕಾನ್
ಸಿಟಿಯಲ್ಲಿ
ಕೊರೊನಾಗೆ
ಬಲಿಯಾದವರ
ಸಂಖ್ಯೆ
8ಕ್ಕೆ
ಏರಿಕೆಯಾಗಿದೆ.
ಬೆಂಗಳೂರು
ನಾಗರಬಾವಿ
ಬಳಿಯ
ಪಾಪರೆಡ್ಡಿ
ಪಾಳ್ಯದ
ನಿವಾಸಿ
54
ವರ್ಷದ
ವ್ಯಕ್ತಿಗೆ
ಕೊರೊನಾ
ವೈರಸ್
ಸೋಂಕು
ಪತ್ತೆಯಾಗಿತ್ತು.
ಮೊದಲೇ
ಹೃದಯ
ಸಂಬಂಧಿ
ಕಾಯಿಲೆಯಿಂದ
ಬಳಲುತ್ತಿದ್ದ
ಸೋಂಕಿತನಿಗೆ
ಹೃದಯಾಘಾತವಾಗಿತ್ತು.
ಬಳ್ಳಾರಿಯಲ್ಲಿ ಕೊರೊನಾಗೆ ಮೊದಲ ವ್ಯಕ್ತಿ ಬಲಿ, ವಿಮ್ಸ್ ವೈದ್ಯರಿಗೆ ಆತಂಕ!
ಕೊರೊನಾ ವೈರಸ್ ಸೋಂಕಿತನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿಯ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಮಂಗಳವಾರ
ಕೊರೊನಾಗೆ
ಎರಡು
ಬಲಿ:
ಮಂಗಳವಾರ
ಬೆಳಗ್ಗೆಯಷ್ಟೇ
ಬಳ್ಳಾರಿಯ
ವಿಮ್ಸ್
ಆಸ್ಪತ್ರೆಯಲ್ಲಿ
ತೀವ್ರ
ಉಸಿರಾಟ
ತೊಂದರೆ,
ಕೆಮ್ಮು
ಹಾಗೂ
ಜ್ವರದಿಂದ
ಬಳಲುತ್ತಿದ್ದ
61
ವರ್ಷದ
ಕೊರೊನಾ
ವೈರಸ್
ಸೋಂಕಿತನು
ಚಿಕಿತ್ಸೆ
ಫಲಕಾರಿಯಾಗದೇ
ಮೃತಪಟ್ಟಿದ್ದರು.
ಇದರ
ಬೆನ್ನಲ್ಲೇ
ಬೆಂಗಳೂರಿನಲ್ಲಿ
ಕೊರೊನಾ
ವೈರಸ್
ಮಹಾಮಾರಿಗೆ
54
ವರ್ಷದ
ವ್ಯಕ್ತಿಯೊಬ್ಬರು
ಪ್ರಾಣ
ಬಿಟ್ಟಿದ್ದಾರೆ.
ಇದರಿಂದ
ರಾಜ್ಯದಲ್ಲಿ
ಕೊವಿಡ್-19ಗೆ
ಬಲಿಯಾದವರ
ಸಂಖ್ಯೆಯು
39ಕ್ಕೆ
ಏರಿಕೆಯಾಗಿದೆ.