ಬೆನಕ 'ಸತ್ತವರ ನೆರಳು' 501ನೆ ಶೋಗೆ ಬನ್ನಿ
ಬೆಂಗಳೂರು, ಮೇ 13: ‘ಸತ್ತವರ ನೆರಳು' ನಾಟಕ 500 ಪ್ರದರ್ಶನಗಳನ್ನು ಪೂರೈಸಿದ್ದು, ಈಗ ಮತ್ತೊಂದು ಪ್ರದರ್ಶನಕ್ಕೆ ಸಜ್ಜಾಗಿದೆ. ಬೆನಕ ರಂಗ ತಂಡದ ವತಿಯಿಂದ ಮೇ 17ರಂದು ನಗರದ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ನಾಟಕದ 500ರ ಸಂಭ್ರಮವನ್ನು ಆಚರಿಸಲಾಗುತ್ತಿದೆ ಎಂದು ಬೆನಕದ ಅಧ್ಯಕ್ಷ ನಿರ್ದೇಶಕ ಟಿ.ಎಸ್.ನಾಗಾ ಭರಣ ತಿಳಿಸಿದ್ದಾರೆ.
ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಜಿ.ಬಿ. ಜೋಷಿ ರಚಿಸಿದ 'ಸತ್ತವರ ನೆರಳು' ನಾಟಕವನ್ನು ಅಂತಾರಾಷ್ಟ್ರೀಯ ರಂಗ ಭೂಮಿ ನಿರ್ದೇಶಕ ಬಿ.ವಿ.ಕಾರಂತರ ನಿರ್ದೇಶನದಲ್ಲಿ 1975ರಲ್ಲಿ ಅತ್ಯಂತ ಅದ್ಭುತವಾಗಿ ರಂಗದ ಮೇಲೆ ಪ್ರದರ್ಶಿಸಲಾಯಿತು ಎಂದು ನೆನಪು ಮಾಡಿಕೊಂಡರು. ಬಿ.ವಿ ಕಾರಂತರು ಕಟ್ಟಿದ ಬೆಂಗಳೂರು ನಗರ ಕಲಾವಿದರು(ಬೆನಕ) ತಂಡ ಸತ್ತವರ ನೆರಳು ನಾಟಕವನ್ನು ಕಲಾರಸಿಕರ ಮುಂದೆ ಕಳೆದ ನಾಲ್ಕು ದಶಕಗಳಿಂದ ಪ್ರದರ್ಶಿಸುತ್ತಾ ಬಂದಿದ್ದಾರೆ.
1975ರಲ್ಲಿ
ಮೊದಲ
ಬಾರಿಗೆ
ಪ್ರದರ್ಶನಗೊಂಡ
ಈ
ನಾಟಕವು
ಇಲ್ಲಿಗೆ
500
ಪ್ರದರ್ಶನ
ಕಂಡಿದೆ.
ಹವ್ಯಾಸಿ
ರಂಗಭೂಮಿಯಲ್ಲಿ
ಒಂದು
ನಾಟಕ
500
ಪ್ರದರ್ಶನ
ಕಂಡಿರುವುದು
ದೊಡ್ಡ
ಮಟ್ಟದ
ಸಾಧನೆ.
ಈ
ನಾಟಕದಲ್ಲಿ
ಜಿ.ವಿ.ಅಯ್ಯರ್
ಸೇರಿದಂತೆ
ನೂರಾರು
ಕಲಾವಿದರು
ಅಭಿನಯಿಸಿದ್ದರು.
ಪ್ರಸ್ತುತ
ನಾಟಕದಲ್ಲಿ
ಅಭಿನಯಿಸುತ್ತಿರುವ
ಕಲಾವಿದರು
4ನೆ
ತಲೆಮಾರಿನವರಾಗಿದ್ದಾರೆ
ಎಂದು
ನಾಗಾಭರಣ
ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ.
ನಟ ಸುಂದರರಾಜು ಮಾತನಾಡಿ, 'ಸತ್ತವರ ನೆರಳು ನಾಟಕವು 35 ವರ್ಷಗಳ ಕಾಲ ನಿರಂತರವಾಗಿ ಪ್ರದರ್ಶನ ಗೊಂಡಿದೆ. ಇದರಲ್ಲಿ ಅಭಿನಯಿಸಿದ ನೂರಾರು ಕಲಾವಿದರ ನೂರಾರು ನೆನಪುಗಳು ಮರೆಯಲು ಅಸಾಧ್ಯ. ಲಹರಿ ಸಂಸ್ಥೆಯಿಂದ ಈ ನಾಟಕ ಡಿವಿಡಿ ರೂಪದಲ್ಲಿ ಬರುತ್ತಿರುವುದು ಆ ನೆನಪುಗಳನ್ನು ಒಂದು ಕಡೆ ಸಂಗ್ರಹಿಸಿದಂತಾಗುತ್ತದೆ' ಎಂದರು.
ಮೇ 17ರಂದು ಸಂಸ ಬಯಲು ರಂಗಮಂದಿರದಲ್ಲಿ ಸಂಜೆ 5.30ರ ನಂತರ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಸಾಹಿತಿ ಗಿರಡ್ಡಿ ಗೋವಿಂದರಾಜ, ರಮಾಕಾಂತ ಜೋಶಿ, ಲಹರಿ ವೇಲು ಭಾಗವಹಿಸುವ ನಿರೀಕ್ಷೆಯಿದೆ. ಸತ್ತವರ ನೆರಳು ನಾಟಕದಲ್ಲಿ ಪುರಂದರ ದಾಸರ ಕೀರ್ತನೆಗಳನ್ನು ಬಿವಿ ಕಾರಂತರು ಸೂಕ್ತವಾಗಿ ಬಳಸಿಕೊಂಡಿದ್ದರು. ನಾಟಕದ ಪದ್ಯಗಳನ್ನು ಆಸಕ್ತರು ಇಲ್ಲಿ ಕೇಳಬಹುದು.