ಕಾರ್ ಪಾರ್ಕ್ ಬಳಿ ರಸ್ತೆ ಉದ್ದಕ್ಕೂ ಕನ್ನಡದ ವರ್ಣಮಾಲೆಯದ್ದೇ ಆಕರ್ಷಣೆ
ಬೆಂಗಳೂರು, ಮಾರ್ಚ್ 7: ಬೊಮ್ಮನಹಳ್ಳಿಯ ಬಳಿ ಇತ್ತೀಚೆಗಷ್ಟೇ ನಿರ್ಮಾಣವಾಗಿರುವ ಮೊಟ್ಟ ಮೊದಲ ಕಾರ್ ಪಾರ್ಕ್ಗೆ ಮತ್ತೊಂದು ಕಿರೀಟವೆಂಬಂತೆ ಕನ್ನಡದ ವರ್ಣಮಾಲೆ ಕಣ್ಮನ ಸೆಳೆಯುತ್ತಿದೆ.
ಬೊಮ್ಮನಹಳ್ಳಿಯಲ್ಲಿ ರಾಜ್ಯದ ಮೊದಲ ಕಾರ್ ಪಾರ್ಕ್ ನಿರ್ಮಾಣ
ಕನ್ನಡದ ವರ್ಣಮಾಲೆಯನ್ನು ಹಾಕಿ ಕನ್ನಡದ ಅಕ್ಷರಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ.
ಅ ಆ ಇ ಈ.. ಕನ್ನಡದ ಅಕ್ಷರ ಮಾಲೆ..#ಬೆಂಗಳೂರು pic.twitter.com/peGTEKTGTo
— BCP MAN (@HMLokesh) March 5, 2019
ವರ್ಷದಿಂದ ವರ್ಷಕ್ಕೆ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಸೇರಿದಂತೆ ಬೇರೆ ಭಾಷೆಯ ವ್ಯಾಮೋಹ, ಬಳಕೆಯೂ ಹೆಚ್ಚಾಗುತ್ತಿದೆ.
ರಾಜ್ಯದಲ್ಲೇ ಇದು ಅತಿ ವೈಶಿಷ್ಟ್ಯ ಕಾರ್ ಪಾರ್ಕ್: ಆರ್ ಅಶೋಕ್
ಈ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ವಾರ್ಡ್ನ ಸದಸ್ಯರು ಹಾಗೂ ಸ್ಥಳೀಯ ಶಾಸಕರು ಕನ್ನಡದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಹೊಂಸದೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ವರ್ಣಮಾಲೆಗಳು ಪ್ರತಿದಿನ ಸಂಜೆ 5ರಿಂದ ಬೆಳಗಲಾರಂಭಿಸುತ್ತದೆ.