ಊರಿಗೆ ಹೋಗ್ತಿದ್ದೀರಾ, ಕಳ್ಳರು ಮನೆ ಬಳಿಯೇ ಇರಬಹುದು ಹುಷಾರ್
ಬೆಂಗಳೂರು, ಏ.25: ದೀರ್ಘ ಕಾಲ ಮನೆ ಬಾಗಿಲನ್ನು ಹಾಕುವ ಮುನ್ನ ಸ್ವಲ್ಪ ಎಚ್ಚರವಹಿಸಿ.
ಈಗ ಬೇಸಿಗೆ ರಜೆ ಆರಂಭವಾಗಿದೆ. ಮಕ್ಕಳ ಜೊತೆಗೆ ಪೋಷಕರು ಪ್ರವಾಸಕ್ಕೆ ಹೋಗುವುದು ಸಾಮಾನ್ಯ ಹೀಗೆ ಹೋಗುವ ಮುನ್ನ ಎಚ್ಚರಿಕೆಯಿರಲಿ. ಮನೆಯಿಂದ ಹೋಗುವಾಗ, ಫ್ರಿಡ್ಜ್, ಎಸಿ, ಗೀಸರ್ ಆಫ್ ಮಾಡುವ ಪ್ರಮುಖ ಕೆಲಸಗಳ ಜೊತೆಗೆ ಕೆಲವು ಅಂಶಗಳನ್ನು ಗಮನಿಸಲೇಬೇಕಾಗಿದೆ.
ಹೀಗೊಂದು ಘಟನೆ ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯಲ್ಲಿ ಪೇಪರ್ ಹಾಗೂ ಹಾಲಿ ಕೆಲವು ದಿನಗಳಿಂದ ಮನೆಯ ಎದುರೇ ಬಿದ್ದಿರುವುದನ್ನು ನೋಡಿ ಕಳ್ಳರು ಪ್ಲಾನ್ ಮಾಡಿ ದರೋಡೆ ಮಾಡುತ್ತಿದ್ದಾರೆ.
ಡ್ರೆಸ್ಸಿಂಗ್ ಟೇಬಲ್ ಮೇಲಿದ್ದ ಕೀ ಬಳಸಿ ಸ್ಯಾಂಟ್ರೋ ಕಾರನ್ನು ಕದ್ದೊಯ್ದಿದ್ದರು. ಹಾಗಾದರೆ ನೀವು ಮಾಡಬೇಕಾಗಿದ್ದು ಏನು?
ವಕೀಲರಿಗೆ ಫೀಸ್ ನೀಡಲು ಹಣವಿಲ್ಲ ಎಂದು ವ್ಯಕ್ತಿ ಮಾಡಿದ್ದೇನು?
-ಪೇಪರ್ ಮತ್ತು ಹಾಲು ಹಾಕಲು ಹೇಳಬೇಡಿ, ಹಾಕುವುದು ಅನಿವಾರ್ಯವಾಗಿದ್ದರೆ ಪಕ್ಕದ ಮನೆಯವರ ಬಳಿ ಎತ್ತಿಟ್ಟುಕೊಳ್ಳಲು ಹೇಳಿ.
-ಸಿಸಿಟಿವಿ ಜೊತೆ ಅನುಮಾನಾಸ್ಪದ ಚಲನೆ ಪತ್ತೆ ಹಚ್ಚುವ ಮೋಷನ್ ಡಿಟೆಕ್ಟರ್ ಇರಲಿ -ಮನೆ ಬಿಟ್ಟು ಊರಿಗೆ ತೆರಳುವ ಮುನ್ನ ಸಂಗತಿಯನ್ನು ಫೇಸ್ಬುಕ್ ಅಥವಾ ಇನ್ನಿತರೆ ಕಡೆ ಶೇರ್ ಮಾಡಬೇಡಿ.
-ಕಬ್ಬಿಣದ ಲಾಕ್ಗಳ ಜೊತೆ ಡಿಜಿಟಲ್ ಲಾಕ್ ಗಳನ್ನೂ ಅಳವಡಿಸುವುದು ಒಳಿತು
- ಕಳ್ಳರು ಸಿಸಿಟಿವಿಗಳ ಡಿವಿಆರ್ ಕದ್ದೊಯ್ಯುವ ಕಾರಣ ವಿಡಿಯೋ ನಿಮ್ಮ ಮೊಬೈಲ್ಗೆ ಬರುವಂತೆ ಮಾಡಿಕೊಳ್ಳಿ.