ಬಿಡಿಎ ವಿಲ್ಲಾಗಳ ನಿರ್ಮಾಣ: ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಿಗದ ಒಪ್ಪಿಗೆ
ಬೆಂಗಳೂರು, ಏ.16: ಬಿಡಿಎ ವಿಲ್ಲಾಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಾಪೇಕ್ಷಣ ಪತ್ರ ದೊರೆಯದ ಹಿನ್ನೆಲೆಯಲ್ಲಿ ನಿರ್ಮಾಣ ಇನ್ನಷ್ಟು ತಡವಾಗಲಿದೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ದಾಸನಪುರ ಹೋಬಳಿಯ ಉಣ್ಣಿಗೆರೆ ಗ್ರಾಮದಲ್ಲಿ ವಿಲ್ಲಾ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಜಾಗ ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಸೇರಿದೆ. ಇಲ್ಲಿ ಯಾವುದೇ ಕೃಷಿಯೇತರ ಚಟುವಟಿಕೆ ನಡೆಸಲು ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಅಗತ್ಯವಾಗಿದೆ.
ಪೆರಿಫೆರಲ್ ರಿಂಗ್ ರಸ್ತೆ ನೈಸ್ ರಸ್ತೆಗೆ ಸೇರಲು 300 ಎಕರೆ ಭೂಮಿ ಬೇಕು
2018ರಲ್ಲಿಯೇ ಮಾಲಿನ್ಯ ನಿಯಂತ್ರಣ ಮಂಡಳಿಗೆ ಬಿಡಿಎ ಅರ್ಜಿ ಸಲ್ಲಿಸಿತ್ತು.ಅಕ್ಟೋಬರ್ ವೇಳೆಗೆ ನಿರಾಪೇಕ್ಷಣಾ ಪತ್ರ ದೊರೆತರೆ ಮೂರು ವರ್ಷದಲ್ಲಿ ಕಾಮಗಾರಿ ಅಂತ್ಯಗೊಳ್ಳುತ್ತಿತ್ತು. ಆದರೆ ಕಾಮಗಾರಿ ಆರಂಭಿಸಲು ಇನ್ನೂ ಅನುಮತಿ ದೊರೆತಿಲ್ಲ. ನೆಲಮಂಗಲ ಯೋಜನಾ ಪ್ರಾಧಿಕಾರ ಕೂಡ ಇನ್ನೂ ಅನುಮತಿ ನೀಡಿಲ್ಲ.
ಭೂ ಪರಿವರ್ತೆ, ಮೂಲಸೌಕರ್ಯ ಅಳವಡಿಕೆ ಸೇರಿ ಹಲವು ನಾಗರಿಕ ಸೌಲಭ್ಯಗಳಿಗೆ ಬಿಡಿಎ ಸ್ಥಳ ಮೀಸಲಿಟ್ಟಿದೆಯೇ ಎಂಬುದನ್ನು ಪರಿಶೀಲಿಸಿ ವಿಲ್ಲಾ ನಿರ್ಮಾಣಕ್ಕೆ ಪ್ರಾಧಿಕಾರ ಅನುಮತಿ ನೀಡುತ್ತದೆ.
ಬೆಂಗಳೂರು ಸುತ್ತಾ 65 ಕಿ.ಮೀ. ಪೆರಿಫೆರಲ್ ರಸ್ತೆ ಯೋಜನೆಗೆ ಒಪ್ಪಿಗೆ
ಮೊದಲ ಬಾರಿಗೆ ವಿಲ್ಲಾ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಡಿಎ ಅಪಾರ ನಿರೀಕ್ಷೆ ಹೊಂದಿದೆ. ನಿರೀಕ್ಷೆಗೆ ತಕ್ಕಂತೆ ಹಲವು ಮಂದಿ ಮುಂಗಡ ನೀಡಿ ಬುಕ್ ಮಾಡಿದ್ದಾರೆ.