ಐಎಂಎ ಹಗರಣ: ಬಿಡಿಎ ಅಸಿಸ್ಟೆಂಟ್ ಎಂಜಿನಿಯರ್ ಬಂಧನ
ಬೆಂಗಳೂರು, ಜು.2: ವಿಶೇಷ ತನಿಖಾ ದಳ(ಎಸ್ಐಟಿ)ವು ಐಎಂಎ ಹಗರಣದಲ್ಲಿ ಭಾಗಿಯಾಗಿದ್ದ ಬಿಡಿಎ ಅಸಿಸ್ಟೆಂಟ್ ಎಂಜಿನಿಯರ್ ಒಬ್ಬರನ್ನು ಸೋಮವಾರ ಬಂಧಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ನ್ನು ವಶಕ್ಕೆ ಪಡೆದು ಅವರ ಬಳಿ ಐಎಂಎ ಹಗರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಐಎಂಎ ವಂಚನೆ : 101 ಬ್ಯಾಂಕ್ ಖಾತೆಯಿಂದ 116 ಕೋಟಿ ರು ವಶ
ಐಎಂಎ ಜ್ಯುವೆಲರಿಯ ಮೂರು ಶಾಖೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಸುಮಾರು 70 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ 4.4 ನಗದು ವಶಪಡಿಸಿಕೊಳ್ಳಲಾಗಿದೆ.
ಐಎಂಎಯು ಸಾವಿರಾರು ಮಂದಿ ಹೂಡಿಕೆದಾರರಿಗೆ ಮೋಸ ಮಾಡಿದೆ. ಹಣ ಹಿಂದಿರುಗಿಸುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಅದರಲ್ಲಿ ಹೆಚ್ಚಿನ ಮಂದಿ ಮುಸಲ್ಮಾನರೇ ಇದ್ದಾರೆ.
ನಿಮ್ಮ ಹಾಗೆ ಸರ್ಕಾರದ ಆಸ್ತಿ ಲೂಟಿ ಹೊಡೆದಿಲ್ಲ: ಈಶ್ವರಪ್ಪಗೆ ಜಮೀರ್ ತಿರುಗೇಟು
ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ಹಣವನ್ನೆಲ್ಲ ದೋಚಿಕೊಂಡು ದೇಶಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ವಿಡಿಯೋ ಕ್ಲಿಪ್ ಒಂದನ್ನು ಬಿಡುಗಡೆ ಮಾಡಿದ್ದ. ಎಸ್ಐಟಿಯು ಈ ಮೊದಲು ಮಳಿಗೆಗಳ ಮೇಲೆ ದಾಳಿ ನಡೆಸಿ 20 ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದೆ.
ಆಡಿಟರ್ ಇಖ್ಬಾಲ್ ಖಾನ್ನ್ನು ಬಂಧಿಸಲಾಗಿದೆ. ಸುಮಾರು 25 ಸಾವಿರ ದೂರುಗಳು ಬಂದಿವೆ.