ಕುಂದಲಹಳ್ಳಿಯಲ್ಲಿ ಸಿಗ್ನಲ್ ಫ್ರೀ ಕಾರಿಡಾರ್ ಕಾಮಗಾರಿ ಶೀಘ್ರ ಪೂರ್ಣ
ಬೆಂಗಳೂರು, ಜೂನ್ 13: ವಿಪರೀತ ಟ್ರಾಫಿಕ್ ಜಾಮ್ ಉಂಟಾಗುತ್ತಿರುವ ಕಾರಣ ಕುಂದಲಹಳ್ಳಿಯಲ್ಲಿ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣವನ್ನು ಶೀಘ್ರ ಪೂರ್ಣಗೊಳಿಸುವ ಮಾಡಲಾಗುತ್ತದೆ.
ಕುಂದಲಹಳ್ಳಿ
ಜಂಕ್ಷನ್
ಬಳಿ
108.5
ಕೋಟಿ
ರೂ
ವೆಚ್ಚದಲ್ಲಿ
ಕೈಗೊಂಡಿರುವ
ಕಾಮಗಾರಿಯನ್ನು
ಶೀಘ್ರ
ಮುಗಿಸುವಂತೆ
ಮೇಯರ್
ಅಧಿಕಾರಿಗಳಿಗೆ
ಸೂಚಿಸಿದ್ದಾರೆ.
ಕುಂದಲಹಳ್ಳಿ
ಜಂಕ್ಷನ್ನಲ್ಲಿ
ಕೈಗೊಂಡಿರುವ
ಕೆಳ
ಸೇತುವೆ
ನಿರ್ಮಾಣ
ಕಾಮಗಾರಿಯು
ನಿಧಾನಗತಿಯಲ್ಲಿ
ನಡೆಯುತ್ತಿದ್ದು,
ವಾಹನ
ದಟ್ಟಣೆ
ಉಂಟಾಗುತ್ತಿದೆ.
ಹೀಗಾಗಿ
ಕಾಮಗಾರಿ
ವೇಗವಾಗಿ
ನಡೆಯುವ
ಅಗತ್ಯವಿದೆ.
ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯಡಿ 17.5 ಕಿ.ಮೀ ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರೊಂದಿಗೆ ಪಾದಚಾರಿ ಮಾರ್ಗ, ಚರಂಡಿಗಳನ್ನು ಕೂಡ ಅಭಿವೃದ್ಧಿಪಡಿಸಲಾಗುತ್ತದೆ.
ಇಂದಿರಾನಗರ 80 ಅಡಿ ರಸ್ತೆಯನ್ನು ಟೆಂಡರ್ಸ್ಯೂರ್ ಯೋಜನೆಯಡಿ ಅಭೊವೃದ್ಧಿಪಡಿಸಲಾಗುತ್ತಿದೆ.ಯಾವುದೇ ಮರಗಳನ್ನು ತೆರವುಗೊಳಿಸುತ್ತಿಲ್ಲ ಎನ್ನುವುದನ್ನು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಲಾಯಿತು.
ಮಳೆಗಾಲದ ತರ್ತು ನಿರ್ವಹಣೆಗೆ ಬಿಬಿಎಂಪಿಯ ಬೃಹತ್ ರಸ್ತೆಗಳ ಕಾಮಗಾರಿ ವಿಭಾಗದಿಂದ 24 ತಂಡಗಳನ್ನು ರಚಿಸಲಾಗಿದೆ ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಯಲಹಂಕ ಉಪನಗರ ಡೈರಿ ವೃತ್ತ ಬಳಿ ಮಳೆಗಾಲದ ತುರ್ತು ನಿರ್ವಹಣಾ ತಂಡ ಕೈಗೊಂಡಿರುವ ಕಾಮಗಾರಿ ಹಾಗೂ ಫ್ಲೈಓವರ್ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದರು.