22 ದಿನಗಳ ಬಳಿಕ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಬಂಧನ
ಬೆಂಗಳೂರು, ನವೆಂಬರ್.16: ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಹಾಗೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Recommended Video
ಕಳೆದ 22 ದಿನಗಳಿಂದ ತಲೆ ಮರೆಸಿಕೊಂಡಿದ್ದ ಸಂಪತ್ ರಾಜ್ ಬಂಧನಕ್ಕಾಗಿ ಸಿಸಿಬಿ ಅಧಿಕಾರಿಗಳು ಐದು ತಂಡಗಳನ್ನು ರಚಿಸಿದ್ದು, ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಲ್ಲೂ ಕೂಡಾ ಸಂಪತ್ ರಾಜ್ ಗಾಗಿ ಶೋಧ ನಡೆಸಲಾಗುತ್ತಿತ್ತು.
ಡಿ.ಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಮೇಯರ್ ಆಪ್ತ ಸೆರೆ; ಸಂಪತ್ ರಾಜ್ ಗಾಗಿ ಮುಂದುವರೆದ ಶೋಧ
ಮಂಗಳವಾರವಷ್ಟೇ ಸಂಪತ್ ರಾಜ್ ಆಪ್ತ ರಿಯಾಜುದ್ದೀನ್ ರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆಪ್ತನು ನೀಡಿರುವ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರ ಬಲೆಗೆ ಸಂಪತ್ ರಾಜ್ ಬಿದ್ದಿದ್ದು, ಅಂತಿಮವಾಗಿ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಿ.ಜೆ ಹಳ್ಳಿ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಮಾಜಿ ಮೇಯರ್ ಸಂಪತ್ ರಾಜ್ ನ್ನು ಸಿಸಿಬಿ ಕಚೇರಿಗೆ ಕರೆದೊಯ್ಯುತ್ತಿರುವ ಪೊಲೀಸರು.#SampathRaj #CCB #BengaluruRiots #DJHalli pic.twitter.com/VJ3ewJBXdJ
— oneindiakannada (@OneindiaKannada) November 17, 2020
ಹೈಕೋರ್ಟ್
ಕೆಂಡಾಮಂಡಲ:
ಡಿ.ಜೆ.ಹಳ್ಳಿ
ಗಲಭೆ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಮಾಜಿ
ಮೇಯರ್
ಸಂಪತ್
ರಾಜ್
ರನ್ನು
ಬಂಧಿಸದ
ಪೊಲೀಸರ
ಕಾರ್ಯ
ವೈಖರಿ
ಬಗ್ಗೆ
ಹೈಕೋರ್ಟ್
ಅಸಮಾಧಾನ
ವ್ಯಕ್ತಪಡಿಸಿತ್ತು.
ಒಬ್ಬ
ಮಾಜಿ
ಮೇಯರ್
ನ್ನು
ಬಂಧಿಸಲು
ಸಾಧ್ಯವಾಗಲಿಲ್ಲವೇ
ಎಂದು
ಹೈಕೋರ್ಟ್
ಚಾಟಿ
ಬೀಸಿದ
ಹಿನ್ನೆಲೆಯಲ್ಲಿ
ಇದೀಗ
ಸಿಸಿಬಿ
ಪ್ರತ್ಯೇಕ
ತಂಡಗಳನ್ನು
ರಚಿಸಿದ್ದು,
ಸಂಪತ್
ರಾಜ್ಗಾಗಿ
ಹುಡುಕಾಟ
ನಡೆಸಿತ್ತು.