ಬಿಬಿಎಂಪಿ ಬಜೆಟ್ 2021: ಕೆರೆಗಳ ಪುನಶ್ಚೇತನ, ರಸ್ತೆಗಳ ನವೀಕರಣಕ್ಕೆ ಹೆಚ್ಚಿನ ಒತ್ತು
ಬೆಂಗಳೂರು, ಮಾರ್ಚ್ 29: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2021-2022ರ ಬಜೆಟ್ ಮಂಡನೆ ಮಾಡಿದೆ. ಈ ಬಾರಿಯ ಬಜೆಟ್ನಲ್ಲಿ ಕೆರೆಗಳ ಪುನಶ್ಚೇತನ ಹಾಗೂ ರಸ್ತೆಗಳ ನವೀಕರಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಕೋವಿಡ್ ಸಂಕಷ್ಟದಲ್ಲೂ ಕೂಡಾ 2021 -2022 ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆಯಾಗಿದೆ. ಈ ಬಾರಿ ಕೋವಿಡ್ ಆರ್ಥಿಕ ಸಂಕಷ್ಟ ಇರುವುದರಿಂದ ಹೊಸ ನಿರೀಕ್ಷೆ ಸಂಪನ್ಮೂಲಗಳ ಕ್ರೋಢೀಕರಣ ಮಾಡೋದು ಕಷ್ಟದ ಕೆಲಸ.
ಬೆಂಗಳೂರು ನಗರದ ಕಸ ನಿರ್ವಹಣೆಗೆ ಬಿಬಿಎಂಪಿ ಹೊಸ ಪ್ರಯತ್ನ
ಬಿಬಿಎಂಪಿ ಯ ಐಪಿಪಿ ಕೇಂದ್ರದಲ್ಲಿ 9291 ಕೋಟಿ ಗಾತ್ರದ ಜನಸ್ನೇಹಿ ಬಜೆಟ್ ಅನ್ನು ಮಂಡಿಸಿದ್ದಾರೆ. ನಾಗರಿಕರು ಕಟ್ಟುವ ಆಸ್ತಿ ತೆರಿಗೆಯ ಶೇ. 1% ನಷ್ಟು ಹಣವನ್ನು ವಾಡ್೯ ಅಭಿವೃದ್ಧಿ ಗೆ ಮೀಸಲಿಟ್ಟಿದ್ದು, ಇ-ಆಸ್ತಿ ತಂತ್ರಾಂಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಕೋವಿಡ್ ಸಂಕಷ್ಟ ಹಿನ್ನೆಲೆಯಲ್ಲಿ ವಿನಾಕಾರಣ ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ. ಕುಡಿಯುವ ನೀರು ರಸ್ತೆ ಅಭಿವೃದ್ಧಿ, ಶಿಕ್ಷಣ, ಪಾಕ್೯, ಕೆರೆಗಳ ಅಭಿವೃದ್ಧಿ ಬಿಟ್ಟು ಬೇರೆ ಯಾವುದೇ ಹೊಸ ಕಾಮಗಾರಿಗಳಿಗೆ ಅನುಮತಿ ಇಲ್ಲ. ಸಂಪನ್ಮೂಲ ಕ್ರೋಢೀಕರಣಕ್ಕೆ, ಕೈಬಿಟ್ಟುಹೋಗಿರುವ ಎಲ್ಲಾ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸಿದೆ. ಕೆ.ಆರ್ ಮಾರುಕಟ್ಟೆ ಕಟ್ಟಡ ಅಡಮಾನ ಮುಕ್ತವಾಗಿಸಲಾಗಿದ್ದು, ಕೌನ್ಸಿಲ್ ಕಟ್ಟಡ ನವೀಕರಣಕ್ಕೆ 10 ಕೋಟಿ ರೂ ಮೀಸಲಿಡಲಾಗಿದೆ.
Recommended Video
ಬಿಬಿಎಂಪಿ
ಬಜೆಟ್
ಮುಖ್ಯಾಂಶಗಳು:
*
ಬಿಬಿಎಂಪಿ
ಶಾಲೆಗಳಲ್ಲಿ
ವ್ಯಾಸಂಗ
ಮಾಡುವ
ಎಸ್
ಎಸ್
ಎಲ್
ಸಿ
ಮತ್ತು
ಪಿಯುಸಿ
ವಿದ್ಯಾರ್ಥಿಗಳು
ಶೇ.
85
%
ಫಲಿತಾಂಶ
ಪಡೆದ
ವಿದ್ಯಾರ್ಥಿಗಳಿಗೆ
25
ಸಾವಿರ
ಪ್ರೋತ್ಸಾಹ
ಧನ.
*
ಕಸ
ವಿಲೇವಾರಿ
ಹಾಗೂ
ಘನತ್ಯಾಜ್ಯಕ್ಕಾಗಿ
1622
ಕೋಟಿ
ಮೀಸಲು
*
ಒಸಿ
ಮತ್ತು
ಸಿಸಿ
ಪಡೆಯಲು
ಹೊಸ
ತಂತ್ರಜ್ಞಾನ
ಅಳವಡಿಕೆ
*
ಬಿ
ಖಾತೆಗಳನ್ನ
ಎ
ಖಾತೆಯಾಗಿ
ಬದಲಾವಣೆ
*
ಪಾಲಿಕೆ
ಆಸ್ತಿಗಳ
ಬಾಡಿಗೆ
ಹೆಚ್ಚಳ
ಇಲ್ಲ
*
67
ಹೊಸ
ಸಾರ್ವಜನಿಕ
ಶೌಚಾಲಯ
ನಿರ್ಮಾಣ
*
ನಗರದ
ಸೌಂದರ್ಯಕ್ಕಾಗಿ
25
ಕೆರೆಗಳ
ಪುನಶ್ಚೇತನ
*
ಖಾತಾ,
ಆಸ್ತಿ
ತೆರಿಗೆ,
ಜನನ
ಮರಣ,
ಪ್ರಮಾಣ
ಪತ್ರ,
ಉದ್ಯಮ
ಪರವಾನಗಿ,
ಕಟ್ಟಡ
ನಕ್ಷೆ
,ಇತ್ಯಾದಿ
ಸೇವೆಗಳಿಗೆ
ಆನ್
ಲೈನ್
ವ್ಯವಸ್ಥೆ.
*
ಕೋವಿಡ್
ನಿಯಂತ್ರಣಕ್ಕಾಗಿ
337
ಕೋಟಿ
ಮೀಸಲು
*
ಬೀದಿ
ನಾಯಿಗಳ
ಹಾವಳಿಗೆ
ತಪ್ಪಿಸಲು
5
ಕೋಟಿ
ಮೀಸಲು
*
ಕೆರೆಗಳ
ಸಂರಕ್ಷಣೆಗೆ
10
ಕೋಟಿ
*
2007
ರಲ್ಲಿ
ಸೇರ್ಪಡೆ
ಗೊಂಡ
110
ಹಳ್ಳಿಗಳ
ಅಭಿವೃದ್ಧಿಗೆ
1000
ಕೋಟಿ
ಮೀಸಲು