ವೀಕೆಂಡ್ ಕರ್ಫ್ಯೂ; ಜನರಿಗೆ ಧನ್ಯವಾದ ಸಲ್ಲಿಸಿದ ಗೃಹ ಸಚಿವರು
ಬೆಂಗಳೂರು, ಏಪ್ರಿಲ್ 24: ರಾಜ್ಯಾದ್ಯಂತ ಶನಿವಾರದಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದರು. ವೀಕೆಂಡ್ ಕರ್ಫ್ಯೂಗಾಗಿ ಜಾರಿಗೊಳಿಸಲಾಗಿರುವ ಬಿಗಿ ಕ್ರಮಗಳನ್ನು ಪರಿಶೀಲಿಸಿದರು. ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಗೆ ಸಹಕರಿಸಿದ್ದಕ್ಕೆ ಜನ ಸಾಮಾನ್ಯರಿಗೆ ಹಾಗೂ ವ್ಯಾಪಾರಸ್ಥರಿಗೆ ಧನ್ಯವಾದ ಅರ್ಪಿಸಿದರು.
ಶನಿವಾರ ಮಧ್ಯಾಹ್ನದಿಂದ ವೀಕೆಂಡ್ ಕರ್ಫ್ಯೂ ವ್ಯವಸ್ಥೆಗಳ ಕುರಿತು ಪರಿಶೀಲನೆ ಆರಂಭಿಸಿದರು. ಚಾಲುಕ್ಯ ಸರ್ಕಲ್, ಕೆ ಆರ್ ಸರ್ಕಲ್ಗೆ ಭೇಟಿ ನೀಡಿದರು. ನಂತರ ಸದಾ ಜನಜಂಗುಳಿಯಿಂದ ಕೂಡಿರುವ ಕೆಆರ್ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಬಗ್ಗೆ ಖಂಡಿತವಾಗಿಯೂ ಚರ್ಚೆ ಆಗುತ್ತೆ. ವೀಕೆಂಡ್ ಕರ್ಫೂ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಸಮಾಲೋಚನೆ ನಡೆಯುತ್ತದೆ. ಲಸಿಕೆ ನೀತಿ ಬಗ್ಗೆ ಸಮಾಲೋಚನೆ ನಡೆಸಿ ಆ ನೀತಿಗೆ ಅಂತಿಮ ಸ್ವರೂಪ ನೀಡಲಾಗುತ್ತದೆ ಎಂದು ತಿಳಿಸಿದರು. ಮುಂದೆ ಓದಿ...
ರಾಜ್ಯದಲ್ಲಿ 510 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು
ಮಹಿಳೆಗೆ ಮಾಸ್ಕ್ ನೀಡಿದ ಬೊಮ್ಮಾಯಿ
ಕೆ.ಆರ್ ಮಾರುಕಟ್ಟೆ ಪ್ರಾಂಗಣವನ್ನು ಪರಿಶೀಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ಮಾಸ್ಕ್ ಧರಿಸದೆ ಇರುವುದನ್ನು ಸಚಿವ ಬೊಮ್ಮಾಯಿ ಗಮನಿಸಿದರು. ಮಾಸ್ಕ್ ಯಾಕೆ ಧರಿಸಿಲ್ಲ ಎಂದು ಅವರನ್ನು ಪ್ರಶ್ನಿಸಿದರು. ತಮ್ಮ ಆಪ್ತ ಸಹಾಯಕರ ಬಳಿ ಇದ್ದ ಮಾಸ್ಕನ್ನು ಆ ಮಹಿಳೆಗೆ ನೀಡಿದರು. ಮಾಸ್ಕ್ ಬಳಕೆ ಮಾಡಿ ಕೊರೊನಾದಿಂದ ದೂರ ಇರುವಂತೆ ಆ ಮಹಿಳೆಗೆ ಸೂಚಿಸಿದರು.
ಧನ್ಯವಾದ ಅರ್ಪಿಸಿದ ಸಚಿವರು
ನಂತರ
ಆಡುಗೋಡಿಯ
ಮಂಗಳ
ಕಲ್ಯಾಣ
ಮಂಟಪದಲ್ಲಿ
ಪೊಲೀಸರಿಗಾಗಿಯೇ
ವಿಶೇಷವಾಗಿ
ವ್ಯವಸ್ಥೆ
ಮಾಡಲಾಗಿರುವ
ಕೋವಿಡ್
ಕೇರ್
ಸೆಂಟರ್
ಗೆ
ಭೇಟಿ
ನೀಡಿದರು.
ಕೊರೊನಾ
ಸೋಂಕು
ತಗುಲಿದ
ಪೊಲೀಸರಿಗೆ
ಇಲ್ಲಿ
ಚಿಕಿತ್ಸಾ
ವ್ಯವಸ್ಥೆ
ಮಾಡಲಾಗಿದೆ
ಎಂದು
ಹೇಳಿದರು.
ಚಿಕಿತ್ಸೆಗಾಗಿ
ವ್ಯವಸ್ಥೆ
ಮಾಡಲಾಗಿರುವ
ಹಾಸಿಗೆ,
ಔಷಧಿ
ಮತ್ತು
ಇತರೆ
ವೈದ್ಯಕೀಯ
ಸೌಲಭ್ಯಗಳನ್ನು
ಸಚಿವರು
ಪರಿಶೀಲಿಸಿದರು.
ನಗರ
ಪ್ರದಕ್ಷಿಣೆ
ವೇಳೆ
ಸುದ್ದಿಗಾರರೊಂದಿಗೆ
ಮಾತನಾಡಿದ
ಗೃಹ
ಸಚಿವರು,
ಇಂದು
ಮುಂಜಾನೆ
10
ಗಂಟೆಯವರೆಗೆ
ಜೀವನಾವಶ್ಯಕ
ವಸ್ತುಗಳ
ಖರೀದಿಗೆ
ಅವಕಾಶ
ನೀಡಲಾಗಿತ್ತು.
ರಾಜ್ಯದ
ಜನ
ಮತ್ತು
ವ್ಯಾಪಾರಸ್ಥರು
ವೀಕೆಂಡ್
ಕರ್ಫ್ಯೂಗೆ
ಸಹಕರಿಸಿದ್ದಾರೆ.
ನಾಳೆಯೂ
ಇದೇ
ರೀತಿಯ
ಸಹಕಾರ
ನೀಡುವಂತೆ
ಅವರನ್ನು
ಕೋರುತ್ತೇನೆ.
ಕರ್ಫ್ಯೂ
ಸಂದರ್ಭ
ನಮ್ಮ
ಪೊಲೀಸರು
ಸಹ
ಉತ್ತಮವಾಗಿ
ಕೆಲಸ
ನಿರ್ವಹಿಸುತ್ತಿದ್ದಾರೆ
ಎಂದು
ಮೆಚ್ಚುಗೆ
ವ್ಯಕ್ತಪಡಿಸಿದರು.
ಕೋವಿಡ್ ನಿಯಮ ಉಲ್ಲಂಘನೆ ಮಾಡಿದ 170 ವಾಹನಗಳು ಜಪ್ತಿ
ಎಂಟು ಸಾವಿರ ಪೊಲೀಸರ ನಿಯೋಜನೆ
ಕೆಆರ್
ಮಾರುಕಟ್ಟೆ
ಸೂಕ್ಷ್ಮ
ಪ್ರದೇಶ.
ಒಂದು
ಕಡೆ
ವಿಕ್ಟೋರಿಯಾ
ಆಸ್ಪತ್ರೆ
ಇದೆ.
ಮತ್ತೊಂದು
ಕಡೆ
ಕೆ.ಆರ್.
ಮಾರುಕಟ್ಟೆ
ಇದೆ.
ಪ್ರತಿದಿನ
ಮುಂಜಾನೆ
ಇಲ್ಲಿಗೆ
ಜನರು
ಮಾರಾಟ
ಮತ್ತು
ಖರೀದಿಗಾಗಿ
ಬರುತ್ತಾರೆ.
ಅವರೆಲ್ಲರನ್ನು
ನಮ್ಮ
ಪೊಲೀಸರು
ಮನವೊಲಿಸಿದ್ದಾರೆ.
ಸರಿಯಾಗಿ
10
ಗಂಟೆಯಿಂದ
ಕರ್ಫ್ಯೂ
ಜಾರಿ
ಮಾಡುವಲ್ಲಿ
ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಲ್ಲಿ
ಭದ್ರತೆಗಾಗಿ
ಒಟ್ಟು
ಎಂಟು
ಸಾವಿರ
ಪೊಲೀಸರನ್ನು
ನಿಯೋಜಿಸಲಾಗಿದೆ
ಎಂದರು.
ಖಾಸಗಿ
ಆಸ್ಪತ್ರೆಗಳಲ್ಲಿನ
ಶೇಕಡಾ
50ರಷ್ಟು
ಹಾಸಿಗೆಗಳನ್ನು
ಪಡೆಯಲು
ಡಿಸಿಪಿ
ಮತ್ತು
ಬಿಬಿಎಂಪಿ
ಆಯುಕ್ತರ
ನೇತೃತ್ವದಲ್ಲಿ
ತಂಡಗಳನ್ನು
ರಚನೆ
ಮಾಡಲಾಗಿತ್ತು.
ಆ
ತಂಡಗಳು
ಖಾಸಗಿ
ಆಸ್ಪತ್ರೆಗಳಿಗೆ
ಭೇಟಿ
ನೀಡಿ
ಹಾಸಿಗೆಗಳನ್ನು
ಸರ್ಕಾರದ
ವಶಕ್ಕೆ
ಪಡೆಯುವಲ್ಲಿ
ಯಶಸ್ವಿಯಾಗಿವೆ.
ವಿನಾಕಾರಣ
ರಸ್ತೆಗಿಳಿಯುವ
ಜನರನ್ನು
ನಿಯಂತ್ರಿಸಿ
ಎಂದು
ಪೊಲೀಸರಿಗೆ
ಸೂಚಿಸಿದ್ದೇನೆ.
ಕರ್ಫ್ಯೂ
ನಿಯಮ
ಉಲ್ಲಂಘಿಸಿ
ರಸ್ತೆಗಿಳಿಯುವ
ಕಿಡಿಗೇಡಿಗಳ
ವಾಹನಗಳನ್ನು
ಪೊಲೀಸರು
ವಶಕ್ಕೆ
ಪಡೆದಿದ್ದಾರೆ
ಎಂದು
ತಿಳಿಸಿದರು.
ಸಿಎಂಗೆ ವರದಿ ಸಲ್ಲಿಕೆ
ಚಾಮರಾಜಪೇಟೆ,
ಸೌತ್
ಎಂಡ್
ಸರ್ಕಲ್,
ಕೋರಮಂಗಲ
ಮುಂತಾದ
ಪ್ರದೇಶಗಳಿಗೆ
ಭೇಟಿ
ನೀಡಿದ
ನಂತರ
ಸಚಿವ
ಬೊಮ್ಮಾಯಿ
ಅವರು
ಶಿವಾಜಿನಗರದಲ್ಲಿ
ಒಂದು
ಸುತ್ತು
ಹಾಕಿದರು.
ಕಮರ್ಷಿಯಲ್
ಸ್ಟೀಟ್
ನಲ್ಲಿನ
ಭದ್ರತಾ
ವ್ಯವಸ್ಥೆ
ಮತ್ತು
ಕರ್ಫ್ಯೂ
ಕುರಿತು
ಅಧಿಕಾರಿಗಳಿಂದ
ಮಾಹಿತಿ
ಪಡೆದರು.
ನಗರ
ಪ್ರದಕ್ಷಿಣೆ
ನಡೆಸಿ
ವಿವಿಧ
ಪ್ರದೇಶಗಳಿಗೆ
ಭೇಟಿ
ನೀಡಿದ
ಬಳಿಕ
ಮುಖ್ಯಮಂತ್ರಿಗಳ
ನಿವಾಸಕ್ಕೆ
ತೆರಳಿ
ಸಿಎಂಗೆ
ವರದಿ
ಸಲ್ಲಿಸಿದರು.
ರಾಜ್ಯದಲ್ಲಿ
ವೀಕೆಂಡ್
ಕರ್ಫ್ಯೂ
ಯಶಸ್ವಿಯಾಗಿದೆ
ಎಂದು
ಮುಖ್ಯಮಂತ್ರಿಗಳಿಗೆ
ತಿಳಿಸಿದರು.
ನಗರ
ಪ್ರದಕ್ಷಿಣೆ
ಸಂದರ್ಭದಲ್ಲಿ
ಬೆಂಗಳೂರು
ನಗರ
ಪೊಲೀಸ್
ಆಯುಕ್ತರಾದ
ಕಮಲಪಂತ್,
ಸಿಸಿಬಿ
ಮುಖ್ಯಸ್ಥ
ಸಂದೀಪ್
ಪಾಟೀಲ್
ಉಪಸ್ಥಿತರಿದ್ದರು.
Recommended Video