ಜನ್ಮದಿನದಂದೇ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಆರು ತಿಂಗಳು ಪೂರ್ಣ
ಬೆಂಗಳೂರು, ಜನವರಿ 28: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಇಂದು 62ನೇ ಜನ್ಮದಿನದ ಖುಷಿ ಒಂದು ಕಡೆಯಾದರೆ, ಮತ್ತೊಂದೆಡೆ ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಂದು ಸರ್ಕಾರದ ಸಾಧನೆ ತಿಳಿಸುವ ಕೈಪಿಡಿ ಬಿಡುಗಡೆ ಮಾಡಲಾಗುತ್ತದೆ.
ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಯಂಥ ಕ್ಲಿಷ್ಟಕರ ಮತ್ತು ಸವಾಲಿನ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಬಸವರಾಜ ಬೊಮ್ಮಾಯಿ ಅವರು ತಮ್ಮ ಮೊದಲ ಆರು ತಿಂಗಳ ಅಧಿಕಾರವನ್ನು ಪೂರ್ಣಗೊಳಿಸಿದ್ದಾರೆ.
ಕಳೆದ ವರ್ಷ ಜುಲೈ 28ರಂದು ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡು, ರೈತರ ಮಕ್ಕಳಿಗೆ ವಿದ್ಯಾನಿಧಿ ಸೇರಿದಂತೆ ಹಲವಾರು ಯೋಜನೆ ಜಾರಿಗೆ ತಂದಿದ್ದಾರೆ. ಆಡಳಿತ ಸುಧಾರಣೆ ಸೇರಿದಂತೆ ರಾಜ್ಯದ ಸಮಗ್ರ ಅಭಿವದ್ಧಿಗೆ ಕ್ರಮ ಕೈಗೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಮ್ಮದು ಸ್ಪಂದನಶೀಲ ಸರ್ಕಾರವಾಗಿದ್ದು, ಇದಕ್ಕೆ 100 ದಿನ ಅಥವಾ ಅರು ತಿಂಗಳು ಅಥವಾ ಯಾವುದೇ ಸಮಯ ಮುಖ್ಯವಲ್ಲ. ನಿರಂತರವಾಗಿ ಜನರ ಅಗತ್ಯಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವ ಆರು ತಿಂಗಳು ಪೂರ್ಣಗೊಂಡಿರುವ ಪಕ್ಷಿನೋಟ ತಿಳಿಸಲು ಕೈಪಿಡಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ರೈತರು, ಜನರ ನೆರವಿಗೆ ಸಂದರ್ಭಕ್ಕೆ ಕಾಯುವ ಅಗತ್ಯವಿಲ್ಲ. ಆಯಾ ಸಂದರ್ಭಕ್ಕೆ ತಕ್ಕಂತೆ ನೆರವು ನೀಡಲಾಗುವುದು ಎಂದು ಹೇಳಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರು ಎಂದೂ ಅದ್ಧೂರಿ ಜನ್ಮದಿನ ಆಚರಿಸಿಕೊಂಡಿಲ್ಲ. ಈ ಬಾರಿಯೂ ಆಚರಣೆ ಮಾಡುವುದಿಲ್ಲವೆಂದು ಹೇಳಲಾಗಿದೆ.
ಆದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ಹುಟ್ಟುಹಬ್ಬದ ಅಂಗವಾಗಿ ತಮ್ಮ ಆರ್ಟಿ ನಗರದ ನಿವಾಸದಲ್ಲಿ ಗೋಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಚುನಾವಣೆಯ
ಅಗ್ನಿಪರೀಕ್ಷೆ
ಇದೀಗ
ಮುಂಬರುವ
ಬಿಬಿಎಂಪಿ
ಚುನಾವಣೆ
ಮತ್ತು
ಜಿ.ಪಂ
ಹಾಗೂ
ತಾ.ಪಂ.
ಚುನಾವಣೆಗಳು
ಮುಖ್ಯಮಂತ್ರಿ
ಬೊಮ್ಮಾಯಿ
ಅವರ
ಪಾಲಿಗೆ
ಅಗ್ನಿ
ಪರೀಕ್ಷೆಯಂತೆ
ಎದುರಾಗುವ
ಸಾಧ್ಯತೆಯಿದೆ.
ಇದರ
ಜೊತೆಗೆ
ಈಗ
ಪಕ್ಷದಲ್ಲಿ
ಕೇಳಿಬರುತ್ತಿರುವ
ಸಂಪುಟ
ವಿಸ್ತರಣೆ
ಅಥವಾ
ಪುನಾರಚನೆಯನ್ನೂ
ಸಮರ್ಥವಾಗಿ
ಎದುರಿಸುವುದು
ಬೊಮ್ಮಾಯಿ
ಅವರ
ಪಾಲಿಗೆ
ಸವಾಲಾಗಿದೆ.
ಮುಂದಿನ
ವರ್ಷ
ನಡೆಯಲಿರುವ
ವಿಧಾನಸಭೆ
ಚುನಾವಣೆಯಲ್ಲಿ
ಮತ್ತೆ
ಪಕ್ಷವನ್ನು
ಅಧಿಕಾರಕ್ಕೆ
ತರುವುದು
ಆದ್ಯತೆಯ
ಕೆಲಸವಾಗಿದೆ.
ಕೈಪಿಡಿ
ಮೂಲಕ
ಸಾಧನೆಗಳ
ಪ್ರಚಾರ
ಸಿಎಂ
ಬಸವರಾಜ
ಬೊಮ್ಮಾಯಿ
ನೇತೃತ್ವದ
ಸರ್ಕಾರ
ಆರು
ತಿಂಗಳ
ಆಡಳಿತ
ಪೂರೈಸಿರುವ
ಹಿನ್ನೆಲೆಯಲ್ಲಿ
ಶುಕ್ರವಾರ
ಪುಸ್ತಕ
ಬಿಡುಗಡೆ
ಕಾರ್ಯಕ್ರಮ
ನಡೆಯಲಿದೆ.
2023ರವರೆಗಿನ
ಸರ್ಕಾರದ
ಕಾರ್ಯಕ್ರಮಗಳು,
ಈ
ಆರು
ತಿಂಗಳ
ಅವಧಿಯಲ್ಲಿ
ಸರ್ಕಾರದ
ಪ್ರಮುಖ
ಇಲಾಖೆಗಳ
ಸಾಧನೆಗಳ
ಬಗ್ಗೆ
ಮುಂದಿನ
ಒಂದು
ವಾರದ
ಕಾಲ
ವಿದ್ಯುನ್ಮಾನ
ಮತ್ತು
ಮುದ್ರಣ
ಮಾಧ್ಯಮಗಳ
ಮೂಲಕ
ಪ್ರಚಾರ
ಕೈಗೊಳ್ಳುವ
ಬಗ್ಗೆ
ಸಂಬಂಧಪಟ್ಟ
ಸಚಿವರು
ತಮ್ಮ
ಇಲಾಖೆಗಳಿಗೆ
ತಿಳಿಸಲು
ಸೂಚನೆ
ನೀಡಲಾಗಿದೆ
ಎಂದು
ಸ್ವತಃ
ಮುಖ್ಯಮಂತ್ರಿ
ಬೊಮ್ಮಾಯಿ
ಹೇಳಿದ್ದಾರೆ.
ಪ್ರಮುಖ
ಸಾಧನೆಗಳು
1.
ರೈತ
ಮಕ್ಕಳಿಗೆ
ವಿದ್ಯಾನಿಧಿ
ಸ್ಕಾಲರ್ಶಿಪ್
2.
12
ಜಿಲ್ಲೆಗಳ
3026
ಗ್ರಾಪಂಗಳಲ್ಲಿ
ಗ್ರಾಮ
ಒನ್
ಸ್ಥಾಪನೆ
3.
ಮುಂಬೈ
ಕರ್ನಾಟಕಕ್ಕೆ
'ಕಿತ್ತೂರು
ಕರ್ನಾಟಕ'
ಹೆಸರು
4.
ರಾಜ್ಯದ
31ನೇ
ಜಿಲ್ಲೆಯಾಗಿ
ವಿಜಯನಗರ
ಉದ್ಘಾಟನೆ
5.
250
ಪ್ರಾಥಮಿಕ
ಆರೋಗ್ಯ
ಕೇಂದ್ರಗಳು
ಮೇಲ್ದರ್ಜೆಗೆ
6.
ರಾಜ್ಯದಲ್ಲಿ
ಆನ್ಲೈನ್
ಜೂಜು,
ಬೆಟ್ಟಿಂಗ್
ನಿಷೇಧ
ಕಾನೂನು
ಸಾಧನಾ
ಪುಸ್ತಕ
ಬಿಡುಗಡೆ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿಯವರು
ತಮ್ಮ
ನೇತೃತ್ವದ
ಸರ್ಕಾರ
ಆರು
ತಿಂಗಳು
ಪೂರೈಸಿದ
ಹಿನ್ನೆಲೆಯಲ್ಲಿ
ಶುಕ್ರವಾರದಂದು
ಸರ್ಕಾರದ
ಸಾಧನೆಗಳನ್ನು
ಒಳಗೊಂಡ
'ಭವ್ಯ
ಭವಿಷ್ಯದ
ಭರವಸೆಯ
ಹೆಜ್ಜೆಗಳು'
ಎಂಬ
ಶೀರ್ಷಿಕೆಯುಳ್ಳ
ಸಾಧನಾ
ಪುಸ್ತಕವನ್ನು
ಬಿಡುಗಡೆಗೊಳಿಸಲಿದ್ದಾರೆ.
ಬೆಳಗ್ಗೆ
11
ಗಂಟೆಗೆ
ವಿಧಾನಸೌಧದ
ಬ್ಯಾಂಕ್ವೆಟ್
ಸಭಾಂಗಣದಲ್ಲಿ
ಆಯೋಜಿಸಿರುವ
ಸಭೆಯಲ್ಲಿ
ಈ
ಸಾಧನಾ
ಪುಸ್ತಕ
ಬಿಡುಗಡೆಗೊಳಿಸಿ
ಮುಖ್ಯಮಂತ್ರಿಗಳು
ಮಾತನಾಡಲಿದ್ದಾರೆ.
ಬಹುತೇಕ
ಎಲ್ಲ
ಸಚಿವರೂ
ಭಾಗವಹಿಸಲಿದ್ದಾರೆ.
Recommended Video