ಬನ್ನೇರುಘಟ್ಟ ಉದ್ಯಾನ: ಮರಿ ಆನೆಗೆ 'ಸುಧಾಮೂರ್ತಿ' ಹೆಸರು
ಬೆಂಗಳೂರು, ಆಗಸ್ಟ್ 26: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಇನ್ಫೋಸಿಸ್ ನೀಡಿರುವ ಕೊಡುಗೆ ಸ್ಮರಿಸುತ್ತಾ ಮರಿ ಆನೆಯೊಂದಕ್ಕೆ ಸುಧಾ ಎಂದು ನಾಮಕರಣ ಮಾಡಲಾಗಿದೆ.
Recommended Video
ಎಕ್ಸಿಕ್ಯೂಟಿವ್ ಡೈರೆಕ್ಟರ್ ವನಶ್ರೀ ವಿಪಿನ್ ಸಿಂಗ್ ಅವರು ಮಾತನಾಡಿ, ವನ್ಯ ಪ್ರಾಣಿಗಳ ಕುರಿತು ಸುಧಾಮೂರ್ತಿಯವರಿಗೆ ಪ್ರೀತಿ ಇದೆ. ಸುಧಾಮೂರ್ತಿಯವರು ಈ ಮನವಿಗೆ ಒಪ್ಪಿದ್ದಾರೆ ಎಂದರು.
ಕೋವಿಡ್ 19: ಸರ್ಕಾರಕ್ಕೆ 100 ಕೋಟಿ ನೀಡಿದ ಇನ್ಫೋಸಿಸ್ ಫೌಂಡೇಷನ್
ಸುವರ್ಣ ಎಂಬ 45 ವರ್ಷದ ಆನೆ ಆಗಸ್ಟ್ 17 ರಂದು ಹೆಣ್ಣು ಮರಿಗೆ ಜನ್ಮ ನೀಡಿದೆ. ಇದರಿಂದ ಉದ್ಯಾನದಲ್ಲಿ ಆನೆಗಳ ಸಂತತಿ 25ಕ್ಕೆ ಏರಿದಂತಾಗಿದೆ.
ಇನ್ಫೋಸಿಸ್ ಪ್ರತಿಷ್ಠಾನವು ಜೈವಿಕ ಉದ್ಯಾನದಲ್ಲಿ ಹುಲಿ, ಝೀಬ್ರಾ, ಜಿರಾಫೆ ಇರುವ ಪ್ರದೇಶಗಳಲ್ಲಿ ಬೇಲಿಯ ವ್ಯವಸ್ಥೆ ಮಾಡಿದ್ದು, ಬೋರ್ವೆಲ್ ತೆಗೆಸಿ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಕೊಟ್ಟಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಕಾರಿಗಳು ಸೇರಿದಂತೆ ಹಲವರು ಸುಧಾ ಅವರ ಹೆಸರನ್ನು ಇಡುವಂತೆ ಸೂಚಿಸಿದ್ದರು.
ಉದ್ಯಾನದಲ್ಲಿ 101 ಬಗೆಯ ಸುಮಾರು 2300 ಪ್ರಾಣಿಗಳಿವೆ, ಒಟ್ಟು 731.88 ಎಕರೆ ವ್ಯಾಪ್ತಿಯನ್ನು ಒಳಗೊಂಡಿದೆ. ಚಿಟ್ಟೆ ಪಾರ್ಕ್ ಕೂಡ ಇದೆ, ಸಫಾರಿಗೂ ಅವಕಾಶವಿದೆ.