ಬೆಂಗಳೂರಿನಿಂದ ನಂದಿಬೆಟ್ಟಕ್ಕೆ ಹೋಗೋ ದಾರಿ ಬಂದ್
ಚಿಕ್ಕಬಳ್ಳಾಪುರ, ಮಾರ್ಚ್ 28 ಕರೋನ ಭೀತಿಗೆ ನಗರಗಳ ಜೊತೆಗೆ ಹಳ್ಳಿಗಳು ಸಹ ಲಾಕ್ ಆಗಿವೆ. ಬೇರೆ ಊರಿನ ಜನರು ತಮ್ಮೂರಿಗೆ ಬರದೆ ಇರುವ ಹಾಗೆ ಹಳ್ಳಿ ಜನರು ನಿರ್ಬಂಧ ಹಾಕುತ್ತಿದ್ದಾರೆ.
ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ನಂದಿಬೆಟ್ಟದ ಮಾರ್ಗದಿಂದ ಬರುವ ದಾರಿಯೂ ಲಾಕ್ ಆಗಿದೆ. ಕಾರಹಳ್ಳಿ ಗ್ರಾಮಸ್ಥರು ಕೊರೊನಾ ಹರದಂತೆ ಮುಂಜಾಗ್ರತಾ ಕ್ರಮವಾಗಿ ಹೀಗೆ ಮಾಡಿದ್ದಾರೆ.
ಕಾರಹಳ್ಳಿ ಗ್ರಾಮಸ್ಥರು ಮರದ ದೊಡ್ಡ ದಿಮ್ಮೆಗಳನ್ನ ಇಟ್ಟು ರೋಡ್ ಬ್ಲಾಕ್ ಮಾಡಿದ್ದಾರೆ. ವಾಹನಗಳ ಓಡಾಟಕ್ಕೆ ನಿರ್ಬಂಧ ಏರಲಾಗಿದೆ. ಈ ಮೂಲಕ ಕೊರೊನಾ ಬಾರದೆ ಇರುವ ಹಾಗೆ ಕ್ರಮ ಕೈಗೊಂಡಿದ್ದಾರೆ.
ಮುಖ್ಯಮಂತ್ರಿಗಳೆ ಕರುಣೆ ತೋರಿಸಿ, ನಮ್ಮನ್ನು ಕರೆಸಿಕೊಳ್ಳಿ
ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ಹೋಗುವ ಮಾರ್ಗವೂ ಬ್ಲಾಕ್ ಆಗಿದೆ. ಬೆಂಗಳೂರಿಗೆ ಮೆಚ್ಚಿನ ತಾಣಗಳಲ್ಲಿ ಒಂದಾಗಿದ್ದ ನದಿ ಬೆಟ್ಟ ಜನರಿಲ್ಲದೆ ಬಿಕೋ ಎನ್ನುತ್ತಿದೆ.
ಕರ್ನಾಟಕದಲ್ಲಿ ಕೊರೊನಾ ವೈರಸ್ ಮೂರನೇ ಹಂತಕ್ಕೆ ಹೋಗುತ್ತದೆ. 75 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
Comments
coronavirus COVID19 nandi hills bangaluru karnataka village ವೈರಸ್ ಚಿಕ್ಕಬಳ್ಳಾಪುರ ಬೆಂಗಳೂರು ಕರ್ನಾಟಕ ಹಳ್ಳಿ
English summary
Karahalli villege people blacked Bangalore to nandi hills road.