ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಕೆ ಹರಿಪ್ರಸಾದ್ ಬೆಂಬಲಿಸಲು ನಿರ್ಧರಿಸಿದ ಬ್ರಾಹ್ಮಣರು

|
Google Oneindia Kannada News

Recommended Video

ತೇಜಸ್ವಿನಿ ಅನಂತ್‍ಕುಮಾರ್‍ಗೆ ಏಕೆ ಟಿಕೆಟ್ ನೀಡಿಲ್ಲ ಗೊತ್ತಾ?

ಬೆಂಗಳೂರು, ಏಪ್ರಿಲ್ 15: 'ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್ ನೀಡುವಲ್ಲಿ ಆದ ಗೊಂದಲದ ಮೂಲಕ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ತಪ್ಪಿರುವುದು ಸರಿಯಲ್ಲ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಅವರಿಗೆ ಪರ ಒಲವು ಹೊಂದುವ ನಿರ್ಧಾರವನ್ನು ತಗೆದುಕೊಂಡಿದ್ದೇವೆ' ವಿಪ್ರ ಮುಖಂಡ ಸುದರ್ಶನ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಗರದ ಪದ್ಮನಾಭನಗರದಲ್ಲಿ ಇಂದು ಆಯೋಜಿಸಿದ್ದ ಬ್ರಾಹ್ಮಣರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಯಿತು. ನಂತರ ಮಾತನಾಡಿದ ಮುರಳಿ ಎಸ್, ಮೋದಿ ಅವರಿಗಿಂತಲೂ ಮುಂಚಿನಿಂದ ಬಿಜೆಪಿಯಲ್ಲಿ ಇದ್ದವರು ಅನಂತಕುಮಾರ್. ಅವರ ಪತ್ನಿ ಹಾಗೂ ಬ್ರಾಹ್ಮಣ ಮಹಿಳೆಗೆ ತುಂಬಾ ಅವಮಾನ ಮಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.

ಹರಿಪ್ರಸಾದ್ ಗೆ ಬ್ರಾಹ್ಮಣರ ಬೆಂಬಲ ಎಂಬುದು ಕಟ್ಟುಕತೆ, ನಿಜಕ್ಕೂ ನಡೆದಿದ್ದೇನು?ಹರಿಪ್ರಸಾದ್ ಗೆ ಬ್ರಾಹ್ಮಣರ ಬೆಂಬಲ ಎಂಬುದು ಕಟ್ಟುಕತೆ, ನಿಜಕ್ಕೂ ನಡೆದಿದ್ದೇನು?

ದಿವಂಗತ ಅನಂತಕುಮಾರ್ ಅವರ ಕುಟುಂಬದ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಅವರಿಗೆ ಬೆಂಬಲ ನೀಡಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ. ಇದು ನಮ್ಮ ವೈಯಕ್ತಿಕ ಅಭಿಪ್ರಾಯ ಎಂದರು.

ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಎಂದ ಹಲವರು

ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಎಂದ ಹಲವರು

ನಗರದ ಪದ್ಮನಾಭನಗರದಲ್ಲಿ ಇಂದು ಆಯೋಜಿಸಿದ್ದ ಬ್ರಾಹ್ಮಣರ ಸಭೆಯಲ್ಲಿ ಮುಖಂಡರಾದ ಸುದರ್ಶನ್ ಹಾಗೂ ಮುರಳಿ, ಶಂಕರ ಶಾಸ್ತ್ರಿ ಅವರು ಉತ್ತಮ ಭರವಸೆಗಳನ್ನು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಲು ನಿರ್ಧರಿಸಿರುವುದಾಗಿ ಶೀಲಾ ಪ್ರಭಾಕರ್ ಹೇಳಿದರು.

ಗೊಂದಲದ ವಾತಾವರಣ ನಿರ್ಮಾಣ

ಗೊಂದಲದ ವಾತಾವರಣ ನಿರ್ಮಾಣ

ಸಭೆಯಲ್ಲಿ ಬಿಕೆ ಹರಿಪ್ರಸಾದ್ ಗೆ ಹಲವಾರು ಸದಸ್ಯರು ಬೆಂಬಲ ವ್ಯಕ್ತಪಡಿಸುತ್ತಿದ್ದಂತೆ ಸ್ವಲ್ಪ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆದರೆ, ಅದನ್ನು ಸರಿಪಡಿಸುವಲ್ಲಿ ಯಶಸ್ವಿಯಾದ ವಿಪ್ರ ಮುಖಂಡರುಗಳು ಒಮ್ಮತದಿಂದ ಹರಿಪ್ರಸಾದದ ಬೆಂಬಲಿಸುವ ನಿರ್ಧಾರ ತಗೆದುಕೊಂಡರು. ಸಭೆಯಲ್ಲಿ ಎಸ್ ಮುರಳಿ, ಎಸ್ ಸುದರ್ಶನ್, ಬಿ ವಿ ಶ್ರೀನಿವಾಸ್, ಶಂಕರ್ ಶಾಸ್ತ್ರಿ ಸೇರಿದಂತೆ 500 ಕ್ಕೂ ಹೆಚ್ಚು ವಿಪ್ರರು ಪಾಲ್ಗೊಂಡಿದ್ದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮನವಿ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮನವಿ

ಬ್ರಾಹ್ಮಣ ಸಂಘಟನಾ ಶಕ್ತಿ ಇನ್ನಷ್ಟು ಬಲಿಷ್ಠವಾಗಬೇಕಿದ್ದರೆ, ಎಲ್ಲ ಸಂಘಗಳು ಎಲ್ಲೆಡೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಮತದಾನವಾಗುವಂತೆ ಬಾಂಧವರನ್ನು ಪ್ರೇರೇಪಿಸಬೇಕು ಮತ್ತು ಜಾಗೃತಿ ಮೂಡಿಸಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮನವಿ ಮಾಡಿದೆ.

ತಪ್ಪದೆ ಮತದಾನ ಮಾಡಲು ಕರೆ

ತಪ್ಪದೆ ಮತದಾನ ಮಾಡಲು ಕರೆ

ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಮಹಾಸಭಾದ ಅಧ್ಯಕ್ಷ ಕೆ.ಎನ್. ವೇಂಕಟನಾರಾಯಣ್ ಅವರು, ಮತದಾನದ ಈ ಕಾರ್ಯವನ್ನು ವ್ಯಾಪಕವಾಗಿ ರಾಜ್ಯದಾದ್ಯಂತ ಪ್ರಚಾರ ಮಾಡಲು ಎಲ್ಲಾ ಸಂಘಗಳು ತಮ್ಮ ವ್ಯಾಪ್ತಿಯಲ್ಲಿ ಕಾರ್ಯಕ್ರಮವನ್ನು ರೂಪಿಸಿಕೊಳ್ಳಲು ಕೋರಿದ್ದು, ಹಿಂದಿನ ಚುನಾವಣೆಗಿಂತಲೂ ಅಧಿಕವಾಗಿ ಮತದಾನ ಆಗಬೇಕಾದರೆ ಎಲ್ಲರೂ ತಪ್ಪದೆ ಮತದ ಹಕ್ಕನ್ನು ಚಲಾಯಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

English summary
Today(April 15) Bangalore South congress Candidate B.K Hariprasad participated in the election campaign at Padmanabha Nagar. Brahmin Community announced that they will support Hariprasd beacause Modi Betrayed Ananth Kumar family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X